Don't Miss!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ಗಾಗಿ ಮಹೇಶ್ ಬಾಬು, ಜೂ. ಎನ್ ಟಿಆರ್ ಪೈಪೋಟಿ
'ಉಗ್ರಂ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್, 'ಕೆಜಿಎಫ್' ಮೂಲಕ ಇಡೀ ದೇಶಕ್ಕೆ ಪರಿಚಿತರಾದರು. 'ಕೆಜಿಎಫ್ 2' ತಯಾರಿಯಲ್ಲಿರುವ ಅವರೆಡೆಗೆ ಇಡೀ ಚಿತ್ರರಂಗ ಕಾತರದಿಂದ ನೋಡುತ್ತಿದೆ. 'ಕೆಜಿಎಫ್' ಬಳಿಕ ಮುಂದೆ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲವೂ ಇದೆ.
Recommended Video
ಈ ನಡುವೆ ಪ್ರಶಾಂತ್ ನೀಲ್ ಅವರಿಗೆ ಭರ್ಜರಿ ಡಿಮ್ಯಾಂಡ್ಗಳು ಬರುತ್ತಿವೆ. ಅದರಲ್ಲಿಯೂ ಅದ್ಧೂರಿ ಸಿನಿಮಾಗಳನ್ನು ಮಾಡುವುದರಲ್ಲಿ ಹೆಸರುವಾಸಿಯಾದ ತೆಲುಗು ಚಿತ್ರರಂಗದಿಂದ ಅನೇಕ ಸ್ಟಾರ್ ನಟರು ಪ್ರಶಾಂತ್ ನೀಲ್ ಜತೆ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಅವರಲ್ಲಿ ಮಹೇಶ್ ಬಾಬು ಮತ್ತು ಜೂ. ಎನ್ಟಿಆರ್ ಅವರ ಹೆಸರು ಕೇಳಿಬಂದಿದ್ದವು. ಮಹೇಶ್ ಬಾಬು ಜತೆ ನೀಲ್ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಜೂ. ಎನ್ಟಿಆರ್ ಜತೆ ಸಿನಿಮಾ ಮಾಡುತ್ತಾರೆಂಬ ಮಾತೂ ಕೇಳಿಬಂದಿತ್ತು. ಈಗ ಅದು ಪುನಃ ಮುನ್ನೆಲೆಗೆ ಬಂದಿದೆ. ಮುಂದೆ ಓದಿ...
ಪ್ರಾರಂಭದಲ್ಲೇ ನಿಂತ ಪ್ರಶಾಂತ್ ನೀಲ್-ಪುನೀತ್ ಸಿನಿಮಾ: ಕಾರಣ ಬಹಿರಂಗ ಪಡಿಸಿದ ಅಪ್ಪು
ಪ್ರಶಾಂತ್ ನೀಲ್ ಭೇಟಿ ಮಾಡಿದ ನಮ್ರತಾ
ಪ್ರಶಾಂತ್ ನೀಲ್ ಅವರ ತೆಲುಗು ಪಾದಾರ್ಪಣೆಯ ಸುದ್ದಿ ಕಳೆದ ಒಂದು ವರ್ಷದಿಂದ ಹರಿದಾಡುತ್ತಿದೆ. ಮೊದಲು ಸುದ್ದಿಯಾಗಿದ್ದು ಮಹೇಶ ಬಾಬು ಬ್ಯಾನರ್ನಿಂದ. ಮಹೇಶ್ ಬಾಬು ಪತ್ನಿ ನಮ್ರತಾ, ಮೈತ್ರಿ ಮೂವೀಸ್ ಬ್ಯಾನರ್ ಮೂಲಕ ಪ್ರಶಾಂತ್ ನೀಲ್ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿತ್ತು.
ಮತ್ತೆ ಜೂ. ಎನ್ ಟಿಆರ್ ಜತೆ ಸಿನಿಮಾ?
ಆದರೆ ಪ್ರಶಾಂತ್ ನೀಲ್, ಜೂನಿಯರ್ ಎನ್ ಟಿಆರ್ ಜತೆ ಸಿನಿಮಾ ಮಾಡುತ್ತಾರೆ ಎಂಬುದು ಕೂಡ ವರದಿಯಾಗಿತ್ತು. ಕಳೆದ ಒಂದು ವರ್ಷದಿಂದ ಟಾಲಿವುಡ್ನಿಂದ ಈ ರೀತಿಯ ಊಹಾಪೋಹಗಳು ಬರುತ್ತಲೇ ಇವೆ. ಒಮ್ಮೆ ಮಹೇಶ್ ಬಾಬು ಹೆಸರು, ಮತ್ತೊಮ್ಮೆ ಜೂ. ಎನ್ ಟಿಆರ್ ಹೆಸರು ಕೇಳಿಬರುತ್ತಿವೆ.
ಜಂಟಿ ನಿರ್ಮಾಣದ ಸಿನಿಮಾ
ಈಗ ಟಾಲಿವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಹೊರಬಂದಿದ್ದು, ಎನ್ ಟಿಆರ್ ಆರ್ಟ್ಸ್ ಮತ್ತು ಮೈತ್ರಿ ಮೂವೀಸ್ ಜಂಟಿ ನಿರ್ಮಾಣದಲ್ಲಿ ಪ್ರಶಾಂತ್ ನೀಲ್ ಸಿನಿಮಾ ನಿರ್ದೇಶಿಸಲಿದ್ದಾರೆ. ಇದಕ್ಕೆ ಜೂ. ಎನ್ ಟಿಆರ್ ನಾಯಕರಾಗಿರಲಿದ್ದು, ತ್ರಿವಿಕ್ರಮ್ ನಿರ್ದೇಶನದ ಚಿತ್ರದ ಬಳಿಕ ಅದು ಸೆಟ್ಟೇರಲಿದೆ ಎನ್ನಲಾಗಿದೆ.
ಜೂ. ಎನ್ ಟಿಆರ್ ಸಿನಿಮಾಗಳು
ಜೂ. ಎನ್ ಟಿಆರ್ ಅವರಿಗೆ ಈ ಹಿಂದೆ ಉತ್ತಮ ನಿರ್ದೇಶಕರ ಬೆಂಬಲ ಸಿಕ್ಕಿರಲಿಲ್ಲ. ಆದರೆ ಈಗ ರಾಜಮೌಳಿ, ತ್ರಿವಿಕ್ರಮ್ ಅವರಂತಹ ನಿರ್ದೇಶಕರ ಸಿನಿಮಾಗಳು ಸಿಕ್ಕಿದ್ದು, ಕೊರತಲಾ ಶಿವ ಜತೆಗೂ ಎನ್ ಟಿಆರ್ ಪ್ರಶಾಂತ್ ನೀಲ್ ಕೂಡ ಈ ಸಾಲಿಗೆ ಸೇರಿಕೊಂಡರೆ ಜೂ. ಎನ್ ಟಿಆರ್ ಸಿನಿಮಾಗಳು ಮತ್ತೊಂದು ಘಟ್ಟಕ್ಕೆ ತಲುಪುವುದು ಖಚಿತ.
'ಇನ್ನೂ ನಿರ್ಧಾರ ಕೈಗೊಂಡಿಲ್ಲ'
ಮಹೇಶ್ ಬಾಬು ಪತ್ನಿ ನಮ್ರತಾ ಕೆಲವು ತಿಂಗಳ ಹಿಂದೆ ಪ್ರಶಾಂತ್ ನೀಲ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದರು. 'ಪ್ರಶಾಂತ್ ನೀಲ್ ನನಗೆ ಕೆಲವು ಸಾಲುಗಳನ್ನು ವಿವರಿಸಿದ್ದಾರೆ. ಆದರೆ ನಾನು ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ' ಎಂದು ಮಹೇಶ್ ಬಾಬು ಹೇಳಿದ್ದರು. ಹೀಗಾಗಿ ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾ ಯಾರ ಜತೆ ಎನ್ನುವುದು ಕುತೂಹಲ ಮೂಡಿಸಿದೆ.