Don't Miss!
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರಂಜೀವಿ, ಕೊರಟಾಲ ಶಿವು ಮೇಲೆ ಸಿನಿಮಾ ಕತೆ ಕದ್ದ ಆರೋಪ
ಮೆಗಾಸ್ಟಾರ್ ಚಿರಂಜೀವಿ ಹಾಗೂ ನಿರ್ದೇಶಕ ಕೊರಟಾಲ ಶಿವ ಮೇಲೆ ಸಿನಿಮಾ ಕತೆ ಕದ್ದಿರುವ ಗುರುತರ ಆರೋಪವನ್ನು ಹೊರಿಸಲಾಗಿದೆ.
Recommended Video
ಚಿತ್ರ ಲೇಖಕ, ಸಹ ನಿರ್ದೇಶಕ ರಾಜೇಶ್ ಮಂಡೂರಿ ಎಂಬುವರು ಈ ಗುರುತರ ಆರೋಪವನ್ನು ಮಾಡಿದ್ದು, ಈ ಕುರಿತು ನಿರ್ದೇಶಕರ ಸಂಘ ಹಾಗೂ ಚಿತ್ರಕತೆ ಬರಹಗಾರರ ಸಂಘಕ್ಕೆ ದೂರು ಸಹ ನೀಡಿದ್ದಾರೆ.
ಕುರ್ಚಿಯಿಂದ ಚಿರಂಜೀವಿಯನ್ನು ಎಬ್ಬಿಸಿ ಅವಮಾನಿಸಿದ್ದ ದೊಡ್ಡ ನಟ
ಚಿರಂಜೀವಿ ಅಭಿನಯಿಸುತ್ತಿರುವ ಆಚಾರ್ಯ ಸಿನಿಮಾದ ಕತೆ ತಮ್ಮದು ಎಂದು ರಾಜೇಶ್ ಮಂಡೂರಿ ಹೇಳಿದ್ದಾರೆ. ಆ ಕತೆಯನ್ನು ಕೆಲವು ತಿಂಗಳುಗಳ ಹಿಂದೆ ನಿರ್ಮಾಣ ಸಂಸ್ಥೆಯೊಂದಕ್ಕೆ ಹೇಳಿದ್ದೆ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಮೈತ್ರಿ ಮೂವೀಸ್ ಗೆ ಕತೆ ಹೇಳಿದ್ದ ರಾಜೇಶ್
ಕೆಲವು ತಿಂಗಳುಗಳ ಹಿಂದೆ ಕತೆಯೊಂದನ್ನು ನಾನು, 'ಮೈತ್ರಿ ಮೂವಿ ಮೇಕರ್ಸ್' ಎಂಬ ನಿರ್ಮಾಣ ಸಂಸ್ಥೆಗೆ ಹೇಳಿದ್ದೆ. ಅವರು ಆಗಲೇ ಆ ಕತೆಯನ್ನು ಮಾರಿಕೊಳ್ಳುವಂತೆ ಹೇಳಿದ್ದರು. ಆದರೆ ನಾನು ಹಾಗೆ ಮಾಡಿರಲಿಲ್ಲ ಎಂದು ರಾಜೇಶ್ ಹೇಳಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿಯನ್ನು ದೇವರಿಗೆ ಹೋಲಿಸಿದ ಸಹೋದರ
ನಿರ್ಮಾಣ ಸಂಸ್ಥೆಯೇ ಕತೆಯನ್ನು ಮಾರಿದೆ: ಆರೋಪ
ಈಗ ರಾಜೇಶ್ ಮಾಡುತ್ತಿರುವ ಆರೋಪವೆಂದರೆ, ನಿರ್ಮಾಣ ಸಂಸ್ಥೆಯು ತನ್ನ ಕತೆಯನ್ನು ಕೊರಟಾಲ ಶಿವ ಹಾಗೂ ಚಿರಂಜೀವಿಗೆ ಮಾರಿದೆ. ಚಿತ್ರ ತಂಡವು ನನಗೆ ಹಣ ಕೊಡದಿದ್ದರೂ ಪರವಾಗಿಲ್ಲ, ಸಿನಿಮಾದ ಕತೆ ನನ್ನದು ಎಂದು ಟೈಟಲ್ ಕಾರ್ಡ್ನಲ್ಲಿ ಹೆಸರು ಹಾಕಿದರೆ ಸಾಕು ಎಂದು ರಾಜೇಶ್ ಒತ್ತಾಯಿಸಿದ್ದಾರೆ.
ಮೈತ್ರಿ ಮೂವೀಸ್ ನಿಂದ ಸ್ಪಷ್ಟನೆ
ಮೈತ್ರಿ ಮೂವಿಸ್ ಸಹ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ರಾಜೇಶ್ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿವೆ. ಕಳೆದ ವರ್ಷ ನಮ್ಮ ಸಂಸ್ಥೆಯಿಂದ ಮೂರು ಹೊಸ ನಿರ್ದೇಶಕರಿಗೆ ಅವಕಾಶ ನೀಡಿದ್ದೇವೆ. ರಾಜೇಶ್ ಹೇಳಿದಂತೆ ಕತೆ ನಮಗೆ ಅಷ್ಟೋಂದು ಇಷ್ಟವಾಗಿದ್ದಿದ್ದರೆ ನಾವೇ ಅವರಿಗೆ ಅವಕಾಶ ನೀಡಿರುತ್ತಿದ್ದೆವು ಎಂದಿದೆ ಮೈತ್ರಿ ಮೂವೀಸ್. ಅಲ್ಲದೆ ಇಂಥಹಾ ಸುಳ್ಳು ಆರೋಪಗಳಿಗೆ ಸಿನಿಪ್ರೇಮಿಗಳು ತಲೆ ಕೆಡಿಸಿಕೊಳ್ಳಬಾರದು ಎಂದು ವಿನಂತಿಸಿಕೊಂಡಿದೆ.
ಇದ್ದಕ್ಕಿದ್ದಂತೆ ಟ್ವಿಟ್ಟರ್ನಿಂದ ದೂರವಾದರೇಕೆ ಮೆಗಾಸ್ಟಾರ್ ಚಿರಂಜೀವಿ
ಆರೋಪ ತಳ್ಳಿಹಾಕಿದ ಕೊರಟಾಲ ಶಿವ
ಆದರೆ ಆಚಾರ್ಯ ಸಿನಿಮಾದ ನಿರ್ದೇಶಕ ಕೊರಟಾಲ ಶಿವ ಈ ಆರೋಪವನ್ನು ತಳ್ಳಿ ಹಾಕಿದ್ದು, ಆಚಾರ್ಯ ಸಿನಿಮಾದ ಕತೆ, ಚಿತ್ರಕತೆ ತಮ್ಮದೊಬ್ಬರದ್ದೇ ಎಂದು ಹೇಳಿದ್ದಾರೆ. ದೊಡ್ಡ ಸಿನಿಮಾ ಎಂದಮೇಲೆ ಇಂಥಹಾ ಸಮಸ್ಯೆಗಳು ಇದ್ದೇ ಇರುತ್ತವೆ ಎಂದು ಅವರು ಹೇಳಿದ್ದಾರೆ.