Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮಿಳಿನ ಯಶಸ್ವಿ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ?
ರಾಜಮೌಳಿ ಜೊತೆ ಆರ್ಆರ್ಆರ್ ಸಿನಿಮಾ ಮಾಡುತ್ತಿರುವ ರಾಮ್ ಚರಣ್ ತೇಜ ತಮ್ಮ ಮುಂದಿನ ಚಿತ್ರವನ್ನು ಶಂಕರ್ ಜೊತೆ ಮಾಡುವುದಾಗಿ ಅದಾಗಲೇ ಪ್ರಕಟಿಸಿದ್ದಾರೆ.
ನಿರ್ದೇಶಕ ಶಂಕರ್ ಸಹ ರಾಮ್ ಚರಣ್ ಜೊತೆಗಿನ ಪ್ರಾಜೆಕ್ಟ್ಗೆ ಪೂರ್ವ ತಯಾರಿ ನಡೆಸುತ್ತಿದ್ದು, ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ್ಮೇಲೆ ಚಿತ್ರೀಕರಣ ಆರಂಭಿಸಬಹುದು.
ಕಮಲ್ ಹಾಸನ್ ಚಿತ್ರತಂಡ ಸೇರಿದ 'ಕೆಜಿಎಫ್' ಸಾಹಸ ನಿರ್ದೇಶಕರು
ಇದೀಗ, ತಮಿಳಿನ ಮತ್ತೊಬ್ಬ ನಿರ್ದೇಶಕನ ಜೊತೆ ಮೆಗಾಪುತ್ರ ಸಿನಿಮಾ ಮಾಡುವ ಕುರಿತು ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಶಂಕರ್-ರಾಮ್ ಚರಣ್ ಸಿನಿಮಾ ಸ್ವಲ್ಪ ತಡವಾಗಬಹುದು. ಈ ಅಂತರದಲ್ಲಿ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಮಗಧೀರ ನಟ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ಹಾಗಾಗಿ, ಮಾಸ್ಟರ್ ಚಿತ್ರ ನಿರ್ದೇಶಿಸಿದ್ದ ಲೋಕೇಶ್ ಕನಕರಾಜ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಸಮಾಚಾರ ಸದ್ದು ಮಾಡ್ತಿದೆ. ರಾಮ್ ಚರಣ್ಗಾಗಿ ಮಾಸ್ಟರ್ ಡೈರೆಕ್ಟರ್ ಭರ್ಜರಿಯಾಗಿರುವ ಕಮರ್ಷಿಯಲ್ ಸಬ್ಜೆಕ್ಟ್ ಸಿದ್ದಮಾಡಿದ್ದು, ಮೆಗಾನಟನ ಬಳಿ ಸ್ಕ್ರಿಪ್ಟ್ಗೆ ಓಕೆ ಮಾಡಿಕೊಂಡಿದ್ದಾರಂತೆ.
Recommended Video
ಒಂದು ವೇಳೆ ಶಂಕರ್ ಸಿನಿಮಾ ಮುಂದಕ್ಕೆ ಹೋದರೆ ಈ ಪ್ರಾಜೆಕ್ಟ್ ಟೇಕ್ ಆನ್ ಮಾಡುವ ಆಲೋಚನೆಯಲ್ಲಿದ್ದಾರೆ ರಾಮ್ ಚರಣ್. ಮತ್ತೊಂದೆಡೆ ಲೋಕೇಶ್ ಕನಕರಾಜ್ ತಮಿಳಿನಲ್ಲಿ ಕಮಲ್ ಹಾಸನ್ ಜೊತೆ ವಿಕ್ರಂ ಸಿನಿಮಾ ಶುರು ಮಾಡಿದ್ದಾರೆ.