Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನಸಿನ ರಾಜಕುಮಾರನ ಬಗ್ಗೆ ಮನಬಿಚ್ಚಿ ಮಾತನಾಡಿದ ರಾಶಿ ಖನ್ನಾ!
ಸಿನಿಮಾ ನಟಿಯರ ಬಗ್ಗೆ ಜನಸಾಮಾನ್ಯರಲ್ಲೊಂದು ಕೆಟ್ಟ ಕುತೂಹಲ ಸದಾ ಮನೆ ಮಾಡಿರುತ್ತದೆ. ಧರೆಗಿಳಿದ ಬೊಂಬೆಗಳು ಇವರು, ಯಾರನ್ನು ಯಾರು ಮದುವೆಯಾಗುತ್ತಾರೆ? ಇವರ ಮನ ಕದ್ದು, ಇವರನ್ನು ಮದುವೆಯಾಗುವ ರಾಜಕುಮಾರ ಯಾರು? ಹೇಗೆ ಇರುತ್ತಾನೆ? ಅದರಲ್ಲೂ ಪಡ್ಡೆಗಳ ನಿದ್ದೆ ಕದ್ದ ನಾಯಕ ನಟಿಯರ ಜೀವನದ ಬಗ್ಗೆ ವಿಶೇಷವಾದ ಕುತೂಹಲ ಸದಾ ಮನೆ ಮಾಡಿರುತ್ತದೆ. ಟಾಲಿವುಡ್ ನ ಗುಳಿಕೆನ್ನೆಯ ಬೆಡಗಿ ರಾಶಿ ಖನ್ನಾ ಇತ್ತೀಚೆಗೆ ತನ್ನ ಮದುವೆಯಾಗಲಿರುವ ರಾಜಕುಮಾರನ ಬಗ್ಗೆ ಕನಸೊಂದನ್ನು ಬಿಚ್ಚಿಟ್ಟಿದ್ದಾಳೆ.
ಮದ್ರಾಸ್ ಕೆಫೆ ಹುಡುಗಿ
ಸೌಂದರ್ಯದ ನಿಧಿ ಯಾಗಿರುವ ರಾಶಿ ಖನ್ನಾ 2013ರಲ್ಲಿ ಹಿಂದಿ ಚಿತ್ರ 'ಮದ್ರಾಸ್ ಕೆಫೆ' ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದಳು. ಮುಂದೆ ಲೇಡಿ ಶ್ರೀರಾಮ ಕಾಲೇಜಿನ ಈ ಬ್ಯೂಟಿ 2014 ರಲ್ಲಿ ಶ್ರೀನಿವಾಸ್ ಅವಸರಾಲ ನಿರ್ದೇಶನದ 'ಊಹಲು ಗುಸಾಗುಸಾಲಾಡೇ' ಸಿನಿಮಾದ ಮೂಲಕ ತೆಲುಗು ಸಿನಿಮಾ ಚಲನಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದಳು. ಮೊದಲ ಚಿತ್ರದಲ್ಲೇ ಸಿನಿರಸಿಕರ ಮನಗೆದ್ದ ರಾಶಿ ಇದುವರೆಗೆ ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಸುಮಾರು 15 ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಈ ಸಹಜ ನಗುವಿನ ಸುಂದರಿ ಇತ್ತೀಚೆಗೆ ತಾನು ಮದುವೆ ಆಗಲು ಬಯಸಿರುವ ರಾಜಕುಮಾರನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಕಿಚ್ಚನ ನಾಯಕಿಯ ವಿಚ್ಛೇದನದ ಬದುಕು ಮತ್ತು ಸಿನಿಮಾ ಪಯಣ
ಆಧ್ಯಾತ್ಮ ಜೀವಿಯಾಗಿರಬೇಕು
ಒಂದು ಕಾಲದಲ್ಲಿ ದಷ್ಟಪುಷ್ಟವಾಗಿ ಮೈ ತುಂಬಿಕೊಂಡಿದ್ದ ರಾಶಿ, ಈಗ ಸಣ್ಣಗೆ ಬಳುಕುವ ಬಳ್ಳಿಯಂತೆ ಆಗಿದ್ದಾಳೆ. ಈ ಸಹಜ ಸೌಂದರ್ಯದ ನಿಧಿಗೆ ಗಂಡನಾಗುವ ವ್ಯಕ್ತಿ ಹೇಗಿರಬೇಕೆಂಬ ಪ್ರಶ್ನೆಗೆ ಆಕೆಯ ಉತ್ತರ 'ನನ್ನನ್ನು ಮದುವೆಯಾಗುವ ವ್ಯಕ್ತಿ ದೊಡ್ಡ ಬಿಸಿನೆಸ್ ಮ್ಯಾನ್ ಆಗಬೇಕಾಗಿಲ್ಲ, ನಾಯಕ ನಟನಾಗಿರಬೇಕಿಲ್ಲ, ಬದಲಾಗಿ ಒಳ್ಳೆ ಆಧ್ಯಾತ್ಮಿಕ ಜೀವಿಯಾಗಿರಬೇಕು. ದೇವರಲ್ಲಿ ವಿಶೇಷವಾದ ಭಕ್ತಿ ಇರಬೇಕು. ದೇವರಲ್ಲಿ ಭಕ್ತಿ ಇರುವ ವ್ಯಕ್ತಿ ಜೀವನದಲ್ಲಿ ಖಂಡಿತ ಮತ್ತೊಬ್ಬರಿಗೆ ಕೇಡು ಬಯಸುವುದಿಲ್ಲ' ಅಂತ ಮನಬಿಚ್ಚಿ ಮಾತನಾಡಿದ್ದೆ ತಡ ಟಾಲಿವುಡ್ ಮಂದಿ ಇವಳನ್ನು ವರಿಸುವ ಅದೃಷ್ಟವಂತ ಯಾರು ಇರಬಹುದು ಅಂತ ತಲೆಕೆಡಿಸಿಕೊಳ್ಳುತ್ತಿದ್ದಾರೆ.
ಸದ್ಯಕ್ಕೆ ತೆಲುಗು ಮತ್ತು ತಮಿಳಿನಲ್ಲಿ ಒಂಬತ್ತು ಚಿತ್ರಗಳಲ್ಲಿ ಬಿಜಿಯಾಗಿದ್ದು ಅವಳ ಕನಸಿನ ರಾಜಕುಮಾರನ ಜೊತೆ ಯಾವಾಗ ವಿವಾಹವಾಗುತ್ತಾರೆ ಅಂತ ಕಾದುನೋಡಬೇಕಿದೆ.