Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುಷ್ಪಾ ಸಿನಿಮಾಕ್ಕಾಗಿ ಶಾಲೆಗೆ ಸೇರಿದ ರಶ್ಮಿಕಾ ಮಂದಣ್ಣ!
ತೆಲುಗಿನ ಬಹುನಿರೀಕ್ಷಿತ ಸಿನಿಮಾ ಪುಷ್ಪಾ ದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕ ನಟಿಯಾಗಿ ನಟಿಸುತ್ತಿರುವುದು ಹಳೆಯ ಸುದ್ದಿ, ಹೊಸ ಸುದ್ದಿಯೆಂದರೆ ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣ ಶಾಲೆಗೆ ಸೇರಿದ್ದಾರಂತೆ!
ಹೌದು, ಪುಷ್ಪಾ ಸಿನಿಮಾ ಆಂಧ್ರದ ಗ್ರಾಮ್ಯ ಭಾಗದಲ್ಲಿ ನಡೆವ ಕತೆ ಅದರಲ್ಲಿಯೂ ಚಿತ್ತೂರು ಪ್ರದೇಶದಲ್ಲಿ ಕತೆ ನಡೆಯುತ್ತದೆ. ಸಿನಿಮಾದಲ್ಲಿನ ಭಾಷೆಯೂ ಚಿತ್ತೂರು, ತಿರುಪತಿ, ಕಡಪ ಭಾಗದ ತೆಲುಗು ಭಾಷೆಯಲ್ಲಿಯೇ ಇರಲಿದೆ.
ಕಾಡಿಗೆ ಎಂಟ್ರಿ ಕೊಟ್ಟಿದ್ದ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲು
ಕನ್ನಡದಿಂದ ಆಂಧ್ರಕ್ಕೆ ಹೋಗಿರುವ ರಶ್ಮಿಕಾ ಗೆ ಸಾಮಾನ್ಯ ತೆಲುಗು ಭಾಷೆಯೇ ಇನ್ನೂ ಕರಗತವಾಗಿಲ್ಲ, ಹೀಗಿರುವಾಗ ಅವರನ್ನು ಚಿತ್ತೂರು ಭಾಷೆ ಮಾತನಾಡುವಂತೆ ಹೇಳಿದ್ದಾರಂತೆ ನಿರ್ದೇಶಕ ಸುಕುಮಾರ್. ಹಾಗಾಗಿ ಚಿತ್ತೂರು ಭಾಗದ ಭಾಷೆ ಕಲಿಯಲು ಆರಂಭಿಸಿದ್ದಾರಂತೆ ರಶ್ಮಿಕಾ.
ಚಿತ್ತೂರು ತೆಲುಗು ಕಲಿಯಲು ತರಬೇತುದಾರ
ಚಿತ್ತೂರು ತೆಲುಗು ಕಲಿಯಲೆಂದು ಒಬ್ಬ ತರಬೇತುದಾರರನ್ನು ಸಹ ನೇಮಿಸಿಕೊಂಡಿದ್ದಾರೆ. ಪ್ರತಿದಿನ ಚಿತ್ತೂರು ತೆಲುಗು ಕಲಿಯುತ್ತಿದ್ದಾರೆ ರಶ್ಮಿಕಾ, ಸಿನಿಮಾಕ್ಕೆ ಅವರೇ ಡಬ್ಬಿಂಗ್ ಮಾಡಬೇಕಾಗಿರುವ ಕಾರಣ ಭಾಷೆ ಕಲಿಯಲೇಬೇಕಾದ ಒತ್ತಡದಲ್ಲಿದ್ದಾರೆ.
ನವೆಂಬರ್ 6 ರಿಂದ ಚಿತ್ರೀಕರಣ
ಪುಷ್ಪಾ ಸಿನಿಮಾದ ಚಿತ್ರೀಕರಣವು ನವೆಂಬರ್ 6 ರಿಂದ ಚಿತ್ರೀಕರಣ ಪ್ರಾರಂಭ ಮಾಡಲಿದೆ. ವಿಶಾಖಪಟ್ಟಣ ಮುಂತಾದ ಕಡೆಗಳಲ್ಲಿ ಚಿತ್ರೀಕರಣವು ನಡೆಯಲಿದೆ. ಈ ಮೊದಲು ಕೇರಳದಲ್ಲಿ ಚಿತ್ರೀಕರಣ ಪ್ರಾರಂಭಗೊಂಡಿತ್ತು. ನಂತರ ಲಾಕ್ಡೌನ್ ಕಾರಣದಿಂದ ಚಿತ್ರೀಕರಣ ಸ್ಥಗಿತವಾಗಿತ್ತು.
ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ಚಿತ್ರಕ್ಕೆ ರಶ್ಮಿಕಾ ನಾಯಕಿ: ಯಾವ ಸಿನಿಮಾ?
ರಕ್ತ ಚಂದನ ಕಳ್ಳಸಾಗಾಣೆದಾರರ ಬಗ್ಗೆ ಸಿನಿಮಾ
ಪುಷ್ಪಾ ಸಿನಿಮಾವು ರಕ್ತಚಂದನ ಕಳ್ಳಸಾಗಾಣೆದಾರರ ಸುತ್ತ ಹೆಣೆದ ಕತೆಯಾಗಿದೆ. ಆರ್ಯಾ, ರಂಗಸ್ಥಳ, ನಾನಕ್ಕು ಪ್ರೇಮತೋ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸುಕುಮಾರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಸಹ ಸಿನಿಮಾಕ್ಕೆ ಭರ್ಜರಿ ದೈಹಿಕ ಕಸರತ್ತು ಮಾಡಿ ತಯಾರಾಗಿದ್ದಾರೆ. ಹೇರ್ಸ್ಟೈಲ್ ಸಹ ಭಿನ್ನವಾಗಿದೆ. ಇತ್ತೀಚೆಗಷ್ಟೆ ತೆಲಂಗಾಣದ ಅಡಿಲಾಬಾದ್ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದರು.
ರಶ್ಮಿಕಾ ಮಂದಣ್ಣ ಮೇಲೆ ಮುನಿಸಿಕೊಂಡ ಉತ್ತರ ಕರ್ನಾಟಕ ಫ್ಯಾನ್ಸ್