Don't Miss!
- Technology ಸದ್ಯ ನೀವೇನಾದರೂ ಹೊಸ ರೆಡ್ಮಿ ಫೋನ್ ಖರೀದಿಸ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
- News ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು: ಕಾರಣವೇನು?
- Lifestyle ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- Finance Binance: ಫೈನ್ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
"ನಾನ್ ಉಸಿರಾಡಿದ್ರು ಕಷ್ಟ, ಉಸಿರಾಡದಿದ್ರೂ ಕಷ್ಟ.. ನಾನು ಇರ್ಬೇಕಾ, ಬೇಡ್ವಾ ಹೇಳಿ: ರಶ್ಮಿಕಾ ಮಂದಣ್ಣ
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ 'ವಾರಿಸು' ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ಧಾರೆ. ದಳಪತಿ ವಿಜಯ್ ಜೋಡಿಯಾಗಿ ನಟಿಸಿದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಇನ್ನು ರಶ್ಮಿಕಾ ಮಂದಣ್ಣ ಟ್ರೋಲ್ ಮಾಡುವವರ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿಂದು ಮುಂದು ನೋಡದೇ ಸುಖಾಸುಮ್ಮನೆ ಟ್ರೋಲ್ ಮಾಡುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾನಾ ಕಾರಣಗಳಿಗೆ ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತರುತ್ತಾರೆ. ಆಕೆಯೇ ಹೇಳಿಕೆಗಳು ವಿವಾದಕ್ಕೂ ಕಾರಣವಾಗುತ್ತಿದೆ. ಕೆಲವರು ಅಸಭ್ಯ ಶಬ್ಧಗಳಿಂದಲೂ ಸೋಶಿಯಲ್ ಮೀಡಿಯಾದಲ್ಲಿ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಆಕೆ 'ಕಾಂತಾರ' ಸಿನಿಮಾ ನೋಡಿಲ್ಲ ಎಂದಿದ್ದು, ಸೌತ್ ಸಿನಿಮಾ ಸಾಂಗ್ಸ್ ಬಗ್ಗೆ ಮಾತನಾಡಿದ್ದು ಹೀಗೆ ಪ್ರತಿಯೊಂದು ಟ್ರೋಲ್ಗೆ ಕಾರಣವಾಗಿತ್ತು. ಕೆಲ ದಿನಗಳಿಂದ ಕನ್ನಡ ಚಿತ್ರರಂಗದಿಂದಲೇ ಆಕೆಯನ್ನು ಬ್ಯಾನ್ ಮಾಡಬೇಕು, ಆಕೆಯ ಯಾವುದೇ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆಗಬಾರದು ಎಂದು ಕೆಲವರು ಟ್ರೆಂಡ್ ಕ್ರಿಯೇಟ್ ಮಾಡಿದ್ದರು.
"ಹೊಸ ವರ್ಷಕ್ಕೆ ವಿಜಯ್ ಜೊತೆ ಫಾರಿನ್ ಟ್ರಿಪ್ ನಿಜ, ಲಿಂಕ್ ಮಾಡಿ ಮಾತಾಡ್ಲಿ ತಲೆ ಕೆಡಿಸಿಕೊಳ್ಳಲ್ಲ, ಆದ್ರೆ..: ರಶ್ಮಿಕಾ
ತಮ್ಮ ವಿರುದ್ಧದ ಟ್ರೋಲ್ಗಳ ಬಗ್ಗೆ ರಶ್ಮಿಕಾ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆ ಬಹಿರಂಹವಾಗಿ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಬಗ್ಗೆಯೂ ಮಾತನಾಡಿ ತಪ್ಪು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.
|
ನನ್ನ ಬಾಡಿ ಬಗ್ಗೆ ಕೆಲವ್ರಿಗೆ ಪ್ರಾಬ್ಲಂ
ಇಷ್ಟೆಲ್ಲಾ ಸಕ್ಸಸ್ ಸಿಗುತ್ತಿರುವಾಗ ಮತ್ತೊಂದು ಕಡೆ ಇಂಡಸ್ಟ್ರಿ ಸಹವಾಸವೇ ಸಾಕು ಎನಿಸಿದ್ದು ಇದ್ಯಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ರಶ್ಮಿಕಾ, "ಕೆಲವೊಮ್ಮೆ ಖಂಡಿತ ಅನಿಸಿದೆ. ಜನರಿಗೆ ನನ್ನ ಬಾಡಿ ಬಗ್ಗೆಯೂ ಪ್ರಾಬ್ಲಂ ಇದೆ. ನಾನು ಜಾಸ್ತಿ ವರ್ಕ್ಔಟ್ ಮಾಡಿದರೆ ಗಂಡಸಿನ ತರ ಕಾಣುತ್ತೀನಿ, ವರ್ಕ್ಔಟ್ ಮಾಡಿದ್ದರೆ ದಪ್ಪ ಕಾಣಿಸುತ್ತೀನಿ. ನಾನು ಮಾತನಾಡಿದ್ರೂ ಕಷ್ಟ, ಮಾತನಾಡದಿದ್ದರೆ ಆಟಿಟ್ಯೂಡ್, ನಾನ್ ಉಸಿರಾಡಿದ್ರು ಕಷ್ಟ, ಉಸಿರಾಡದಿದ್ರೂ ಕಷ್ಟ, ನಾನು ಏನು ಮಾಡಬೇಕು ಹೇಳಿ"
ನಾನು ಏನು ಮಾಡಬೇಕು ಹೇಳಿ
"ನಾನು ಚಿತ್ರರಂಗದಲ್ಲಿ ಇರಬೇಕಾ? ಚಿತ್ರರಂಗವನ್ನು ಬಿಟ್ಟುಬಿಡಬೇಕಾ? ನಾನು ಇಂಥದ್ದು ಮಾಡಬೇಕು ಎಂದು ಸರಿಯಾಗಿ ಹೇಳಿದರೆ ನಾನು ಕೇಳಲು ಸಿದ್ಧ. ಅನುಸರಿಸಲು ಸಿದ್ಧಳಿದ್ದೇನೆ. ನೀವು ಕ್ಲಾರಿಟಿ ಕೊಡದೇ ಇದ್ದರೆ, ಮತ್ತೊಂದು ಕಡೆ ಇದನ್ನೆಲ್ಲಾ ಹೇಳುತ್ತಿದ್ದರೆ ಅದರ ಅರ್ಥ ಏನು? ಕ್ಲಾರಿಟಿ ಕೊಡಿ. ನಿಮಗೆ ನನ್ನಲ್ಲಿ ಏನಾದರೂ ಪ್ರಾಬ್ಲಂ ಅನ್ನಿಸಿದರೆ ಅದು ಏನು ಎಂದು ಹೇಳಿ. ಯಾಕೆ ಅಂತ ಹೇಳಿ. ಕೆಟ್ಟದಾಗಿ ಮಾತನಾಡಬೇಡಿ. ಅವರು ಬಳಸುವ ಪದಗಳು, ವಾಕ್ಯಗಳು ನಮಗೆ ಬಹಳ ನೋವು ಕೊಡುತ್ತದೆ ಇದು ಸರಿಯಲ್ಲ"
ಇದೇ ವರ್ಷ 'ಪುಷ್ಪ- 2' ರಿಲೀಸ್
ವಾರಿಸು ನಂತರ ರಶ್ಮಿಕಾ ಮಂದಣ್ಣ 'ಪುಷ್ಪ'- 2 ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. "ಶೀಘ್ರದಲ್ಲೇ ನಾನು ಕೂಡ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ. ಈ ಬಾರಿ ನನ್ನ ಪಾತ್ರಕ್ಕೆ ಮತ್ತಷ್ಟು ಮಹತ್ವ ಇರಲಿದೆ. ಮತ್ತೆ ಶ್ರೀವಲ್ಲಿ ಆಗಿ ಕಾಣಿಸಿಕೊಳ್ಳಲು ಉತ್ಸುಕಳಾಗಿದ್ದೇನೆ" ಎಂದು ರಶ್ಮಿಕಾ ಹೇಳಿದ್ದಾರೆ. ಸಿನಿಮಾ ರಿಲೀಸ್ ಯಾವಾಗೆ ಎನ್ನುವ ಪ್ರಶ್ನೆಗೆ ಇದೇ ವರ್ಷ ಕ್ರಿಸ್ಮಸ್ ಸ್ಪೆಷಲ್ ಆಗಿ ಸಿನಿಮಾ ಬರಬಹುದು ಎಂದಿದ್ದಾರೆ.
ಹೊಸ ಚಿತ್ರ ಒಪ್ಪಿಕೊಂಡಿಲ್ಲ
ಇತ್ತೀಚೆಗೆ ರಶ್ಮಿಕಾ ಮಂದಣ್ಣ ನಟನೆಯ 'ಮಿಷನ್ ಮಜ್ನು' ಸಿನಿಮಾ ನೇರವಾಗಿ ಓಟಿಟಿಗೆ ಬಂದಿತ್ತು. ವೀಕ್ಷಕರಿಂದ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ಬಾಲಿವುಡ್ನಲ್ಲಿ ರಣ್ಬೀರ್ ಕಪೂರ್ ನಟನೆಯ 'ಅನಿಮಲ್' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. 'ಪುಷ್ಪ'- 2 ಚಿತ್ರದಲ್ಲಿ ಶ್ರೀವಲ್ಲಿಯಾಗಿ ತಮ್ಮ ಪಾತ್ರ ಮುಂದುವರೆಸಬೇಕಿದೆ. ಇವೆರಡು ಬಿಟ್ಟರೆ ಹೊಸದಾಗಿ ಯಾವುದೇ ಚಿತ್ರವನ್ನು ಕೂಡ ರಶ್ಮಿಕಾ ಒಪ್ಪಿಕೊಂಡಿಲ್ಲ.