Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಿರೀಕ್ಷಿತ ಕಾರಣದಿಂದಾಗಿ ಕೊಟ್ಟ ಮಾತು ತಪ್ಪಿದ ರಾಜಮೌಳಿ!
ಅಭಿಮಾನಿಗಳ ಭಾವನೆಗಳಿಗೆ ಬಹುವಾಗಿ ಬೆಲೆ ಕೊಡುವ ವ್ಯಕ್ತಿ ನಿರ್ದೇಶಕ ರಾಜಮೌಳಿ. ಸಿನಿಮಾದ ಬಗ್ಗೆಯೂ ಅಪಾರ ಶಿಸ್ತು ಹೊಂದಿರುವ ಅವರು ಸಾಮಾನ್ಯವಾಗಿ ಅಭಿಮಾನಿಗಳಿಗೆ ಕೊಟ್ಟ ಮಾತು ತಪ್ಪುವುದಿಲ್ಲ, ಈ ಬಾರಿ ಏಕೋ ಮಾತು ತಪ್ಪಿದ್ದಾರೆ.
ಕೊರೊನಾ ಕಾರಣದಿಂದ 'ಆರ್ಆರ್ಆರ್' ಸಿನಿಮಾವನ್ನು ಹೇಳಿದ ದಿನಾಂಕಕ್ಕೆ ಬಿಡುಗಡೆ ಮಾಡಲಾಗಿಲ್ಲ ಎನ್ನುವುದು ಹಳೆಯ ವಿಷಯ. ಅದರಲ್ಲಿ ರಾಜಮೌಳಿಯ ತಪ್ಪೇನೂ ಇರಲಿಲ್ಲ. ಆದರೆ ಈಗ ಸಿನಿಮಾದ ಟ್ರೇಲರ್ ಬಿಡುಗಡೆಗೆ ವಿಚಾರವಾಗಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ.
ಈಗಾಗಲೇ ಕೆಲವು ಟೀಸರ್ಗಳು, ಪೋಸ್ಟರ್ಗಳು, ಹಾಡಿನ ತುಣುಕುಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ರಾಜಮೌಳಿ, ಡಿಸೆಂಬರ್ 03ರಂದು ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದರು. ಆದರೆ ಡಿಸೆಂಬರ್ 03ಕ್ಕೆ ಟ್ರೇಲರ್ ಬಿಡುಗಡೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಟ್ರೇಲರ್ ಬಿಡುಗಡೆ ಮುಂದೂಡಿಕೆ
''ಕೆಲವು ಅನಿರೀಕ್ಷಿತ ಕಾರಣಗಳಿಂದಾಗಿ 'ಆರ್ಆರ್ಆರ್' ಸಿನಿಮಾದ ಟ್ರೇಲರ್ ಅನ್ನು ಡಿಸೆಂಬರ್ 03ರಂದು ಬಿಡುಗಡೆ ಮಾಡಲಾಗುತ್ತಿಲ್ಲ. ಟ್ರೇಲರ್ ಬಿಡುಗಡೆ ಮಾಡುವ ಮುಂದಿನ ದಿನಾಂಕವನ್ನು ಶೀಘ್ರದಲ್ಲಿಯೇ ಘೋಷಿಸಲಾಗುವುದು'' ಎಂದು 'ಆರ್ಆರ್ಆರ್' ಚಿತ್ರತಂಡ ಟ್ವೀಟ್ ಮಾಡಿದೆ. ಟ್ರೇಲರ್ ಬಿಡುಗಡೆ ಮುಂದೂಡಲು ಕಾರಣವನ್ನು ಚಿತ್ರತಂಡ ತಿಳಿಸಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
'ಆರ್ಆರ್ಆರ್' ಸಿನಿಮಾ ಜನವರಿ 07ರಂದು ಬಿಡುಗಡೆ ಆಗಲಿದೆ. ಆದರೆ ಈಗ ಟ್ರೇಲರ್ ಬಿಡುಗಡೆ ಮುಂದೂಡಿರುವುದರಿಂದ ಸಿನಿಮಾದ ಬಿಡುಗಡೆಯೂ ಮುಂದೂಡಬಹುದೇ ಎಂಬ ಅನುಮಾನವನ್ನು ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದೂ ಅಲ್ಲದೆ ಡಿಸೆಂಬರ್ 03ರಂದು ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳು ಇವೆ ಹಾಗಾಗಿ ಆ ದಿನ ಟ್ರೇಲರ್ ಬಿಡುಗಡೆ ಬೇಡವೆಂದು ಚಿತ್ರತಂಡ ನಿರ್ಧರಿಸಿರುವ ಸಾಧ್ಯತೆ ಇದೆ.
ಹಾಡು ಬಿಡುಗಡೆ ಮಾಡಿದ್ದ ರಾಜಮೌಳಿ
ಕೆಲವು ದಿನಗಳ ಹಿಂದೆ ನಿರ್ದೇಶಕ ರಾಜಮೌಳಿ, 'ಆರ್ಆರ್ಆರ್' ಸಿನಿಮಾದ 'ಸೋಲ್ ಸಾಂಗ್' ಅನ್ನು ಬಿಡುಗಡೆ ಮಾಡಿದ್ದರು. 'ಜನನಿ' ಹೆಸರಿನ ಈ ಹಾಡು 'ಆರ್ಆರ್ಆರ್' ಸಿನಿಮಾದ ಆತ್ಮವಾಗಿದೆ ಎಂದು ರಾಜಮೌಳಿ ಹೇಳಿದ್ದರು. ಬೆಂಗಳೂರಿಗೆ ಆಗಮಿಸಿದ್ದ ರಾಜಮೌಳಿ ಇಲ್ಲಿ ಹಾಡಿನ ಕನ್ನಡ ವರ್ಷನ್ ಬಿಡುಗಡೆ ಮಾಡಿದ್ದರು.
ಜನವರಿ 07ಕ್ಕೆ ಸಿನಿಮಾ ಬಿಡುಗಡೆ
'ಆರ್ಆರ್ಆರ್' ಸಿನಿಮಾವು ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಆಗಿದ್ದು, ಸ್ಟಾರ್ ನಟರಾದ ರಾಮ್ ಚರಣ್ ತೇಜ, ಜೂ ಎನ್ಟಿಆರ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾವನ್ನು ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ಬಾಲಿವುಡ್ನ ಆಲಿಯಾ ಭಟ್ ನಟಿಸಿದ್ದಾರೆ. ಸಿನಿಮಾದಲ್ಲಿ ವಿದೇಶಿ ನಟರೂ ಸಹ ಇದ್ದಾರೆ. ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ರಾಮ್ ಚರಣ್ ತೇಜ ಅಲ್ಲೂರಿ ಸೀತಾರಾಮ ರಾಜು ಆಗಿಯೂ ಜೂ ಎನ್ಟಿಆರ್ ಕೋಮರಂ ಭೀಮ್ ಆಗಿಯೂ ನಟಿಸಿದ್ದಾರೆ. ಸಿನಿಮಾವು ಜನವರಿ 07 ರಂದು ಬಿಡುಗಡೆ ಆಗಲಿದೆ.