Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮಂತಾ ಗೆ ಸಿಕ್ಕ ಅವಕಾಶವನ್ನು ಕಿತ್ತುಕೊಂಡರೇ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾರಂಗದಲ್ಲಿ ಬಹು ಬೇಡಿಕೆಯ ನಟಿ. ಹಳೆಯ ನಟಿಯರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರೆ ರಶ್ಮಿಕಾ.
Recommended Video
ರಶ್ಮಿಕಾ ಯಾವ ಮಟ್ಟಿಗೆ ಖ್ಯಾತರಾಗಿದ್ದಾರೆಂದರೆ ಅನುಭವಿ ನಟಿ ಸಮಂತಾ ಅವಕಾಶವನ್ನೇ ಕಿತ್ತುಕೊಂಡಿದ್ದಾರಂತೆ. ಹಾಗೆಂದು ತೆಲುಗು ಮಾಧ್ಯಮಗಳೇ ವರದಿ ಮಾಡುತ್ತಿವೆ.
ನಟ ಮಹೇಶ್ ಬಾಬುಗೆ ಕೂರ್ಗ್ ನಿಂದ ವಿಶೇಷ ಉಡುಗೊರೆ ಕಳುಹಿಸಿಕೊಟ್ಟ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆಯಾಗಿ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತಿರುವ ಸಂಗತಿಯೇ ಆದರೆ ಈ ಸಿನಿಮಾಕ್ಕೆ ನಾಯಕಿಯಾಗಿ ಮೊದಲಿಗೆ ಸಮಂತಾ ಅಕ್ಕಿನೇನಿ ಅವರನ್ನು ಆಯ್ಕೆ ಮಾಡಲಾಗಿತ್ತಂತೆ ನಂತರ ಆ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ ಬಂದಿದ್ದಾರೆ.
ಸಮಂತಾ ಬದಲಿಗೆ ರಶ್ಮಿಕಾ ಆಯ್ಕೆ?
ಪುಷ್ಪಾ ಸಿನಿಮಾ ನಿರ್ದೇಶಕ ಸುಕುಮಾರನ್ ಮೊದಲಿಗೆ ನಾಯಕಿಯಾಗಿ ಸಮಂತಾ ಅವರನ್ನು ಆಯ್ಕೆ ಮಾಡಿದ್ದರಂತೆ. ನಂತರ ನಾಯಕಿ ಪಾತ್ರಕ್ಕೆ ಸಮಂತಾಗಿಂತಲೂ ರಶ್ಮಿಕಾ ಹೆಚ್ಚು ಸೂಕ್ತ ಎನಿಸಿದ ಕಾರಣ ರಶ್ಮಿಕಾ ಅವರನ್ನು ಆಯ್ಕೆ ಮಾಡಿದರಂತೆ!
ರಶ್ಮಿಕಾ ಮಂದಣ್ಣ ಹುಟ್ಟುವ ಎರಡು ದಿನ ಮುನ್ನ ಅಪ್ಪನಿಗೆ ಬಿದ್ದಿತ್ತೊಂದು ಕನಸು
ಸಮಂತಾ ಅವರೇ ಒಲ್ಲೆ ಎಂದರೆ?
ಇನ್ನೊಂದು ಸುದ್ದಿಯ ಪ್ರಕಾರ, ಸಮಂತಾ ಅವರೇ ಸುಕುಮಾರನ್ ಅವರ ಆಫರ್ ಅನ್ನು ರಿಜೆಕ್ಟ್ ಮಾಡಿದರಂತೆ. ಸುಕುಮಾರನ್ ನಿರ್ದೇಶನದ ರಂಗಸ್ಥಳಂ ಸಿನಿಮಾದಲ್ಲಿ ಈಗಾಗಲೇ ಹಳ್ಳಿ ಹುಡುಗಿ ಪಾತ್ರವನ್ನು ಸಮಂತಾ ಮಾಡಿದ್ದರು, ಹಾಗಾಗಿ ಮತ್ತೆ ಅದೇ ಮಾದರಿಯ ಪಾತ್ರವನ್ನು ಮಾಡಲು ಸಮಂತಾ ಒಪ್ಪಲಿಲ್ಲ ಎನ್ನಲಾಗುತ್ತಿದೆ.
ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ಒಟ್ಟಿಗೆ ನಟಿನೆ
ಸಮಂತಾ ಹಾಗೂ ಅಲ್ಲು ಅರ್ಜುನ್ ಈಗಾಗಲೇ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇನ್ನು ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರನ್ ಜೊತೆಗೆ ರಂಗಸ್ಥಳ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.
ತಮಿಳು ಪತ್ರಿಕೆಗೆ ಫೋಸು ನೀಡಿರುವ ಕನ್ನಡದ ನಟಿಯನ್ನು ಗುರುತಿಸಬಲ್ಲಿರಾ?
ರಶ್ಮಿಕಾ ಮಂದಣ್ಣ ಅಭಿನಯದ ಏಳನೇ ತೆಲುಗು ಸಿನಿಮಾ
ರಶ್ಮಿಕಾ ಮಂದಣ್ಣ ಅವರು ಪುಷ್ಪಾ ಸಿನಿಮಾದ ನಾಯಕಿಯಾಗಿದ್ದು, ಈ ವರೆಗೆ ಮಾಡಿದ ಪಾತ್ರಗಳಿಗಿಂತಲೂ ಭಿನ್ನವಾದ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಪುಷ್ಪಾ ಸಿನಿಮಾವು ರಶ್ಮಿಕಾ ನಟಿಸುತ್ತಿರುವ ಏಳನೇ ತೆಲುಗು ಸಿನಿಮಾ. ಅವರ ಅಭಿನಯದ ಕನ್ನಡ ಸಿನಿಮಾ ಪೊಗರು ಬಿಡುಗಡೆಗೆ ತಯಾರಾಗಿದೆ.