Samantha: ಮಾಜಿ ಪತಿಯ ಕುಟುಂಬದೊಂದಿಗೆ ಮತ್ತೆ ಲಿಂಕ್: ಸಮಂತಾ ಉದ್ದೇಶ ಏನು?
ನಟಿ ಸಮಂತಾ ಹಾಗೂ ನಾಗ ಚೈತನ್ಯ ಪರಸ್ಪರ ವಿಚ್ಛೇಧನ ಪಡೆದು ಆರು ತಿಂಗಳಾಯ್ತು. ಆದರೆ ಈಗಲೂ ಇವರಿಬ್ಬರ ವಿಚ್ಛೇಧನದ ಸುದ್ದಿ ಹಾಟ್ ಫೇವರೇಟ್.
Recommended Video

ಸಮಂತಾ ಹಾಗೂ ನಾಗ ಚೈತನ್ಯರ ವಿಚ್ಛೇಧನ ಚಿತ್ರರಂಗದ ಹಲವರಿಗೆ ಆಘಾತ ತಂದಿತ್ತು. ಅಭಿಮಾನಿಗಳಿಗೂ ಸಹ. ಸಮಂತಾ ಅಂತೂ ವಿಚ್ಛೇಧನದ ತಮ್ಮ ಜೀವನ ಶೈಲಿ, ಸಿನಿಮಾ ಆಯ್ಕೆಯ ವಿಷಯದಲ್ಲಿ ಸಾಕಷ್ಟು ಬದಲಾವಣೆ ತಂದುಕೊಂಡರು.
ವಿಚ್ಛೇಧನ ಘೋಷಿಸಿದ ಬಳಿಕ ನಟಿ ಸಮಂತಾ ನಾಗ ಚೈತನ್ಯರನ್ನು ಅನ್ ಫಾಲೋ ಮಾಡಿದರಲ್ಲದೆ, ಅವರೊಟ್ಟಿಗಿನ ಹಳೆಯ ಚಿತ್ರಗಳನ್ನು ಸಹ ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದರು. ಆ ಮೂಲಕ ತಾವು ನಾಗ ಚೈತನ್ಯರನ್ನು ತಮ್ಮ ಜೀವನದಿಂದ ಸಂಪೂರ್ಣವಾಗಿ ದೂರ ಸರಿಸಿದ್ದೇನೆಂದು ಸ್ಪಷ್ಟಗೊಳಿಸಿದರು.

ಆದರೆ ಈಗ ಸಮಂತಾ ಮಾಡಿರುವ ಟ್ವೀಟ್ ಒಂದು ಹೊಸ ಅನುಮಾನಕ್ಕೆ ಕಾರಣವಾಗಿದ್ದು, ಸಮಂತಾಗೆ ಮತ್ತೆ ಅಕ್ಕಿನೇನಿ ಕುಟುಂಬದ ಜೊತೆ ಸೇರುವ ಯೋಜನೆ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ನಿನ್ನೆ (ಏಪ್ರಿಲ್ 08)ರಂದು ನಾಗ ಚೈತನ್ಯ ಸಹೋದರ ಅಖಿಲ್ ಅಕ್ಕಿನೇನಿ ಹುಟ್ಟುಹಬ್ಬ ಇದ್ದು, ನಟಿ ಸಮಂತಾ ಇನ್ಸ್ಟಾಗ್ರಾಂನಲ್ಲಿ ಅಖಿಲ್ ಅಕ್ಕಿನೇನಿ ಚಿತ್ರಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ''ನೀನು ಏನೇನು ಅಂದುಕೊಂಡಿದ್ದೀಯೊ ಅದೆಲ್ಲಾ ಆಗಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿನಗೆ ಒಳ್ಳೆಯ ದಿನಗಳು ಎದುರಾಗಲಿ, ಹುಟ್ಟುಹಬ್ಬದ ಶುಭಾಶಯಗಳು'' ಎಂದು ಇನ್ಸ್ಟಾಗ್ರಾಂನಲ್ಲಿ ಸಮಂತಾ ಬರೆದುಕೊಂಡಿದ್ದಾರೆ.

ನಾಗ ಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಸಹೋದರರು. ಇಬ್ಬರ ತಂದೆ ನಾಗಾರ್ಜುನ ಆದರೆ ಅಖಿಲ್ ಅಮಲಾ ಅಕ್ಕಿನೇನಿ ಪುತ್ರ. ನಾಗ ಚೈತನ್ಯ ಲಕ್ಷ್ಮಿ ದಗ್ಗುಬಾಟಿ ಪುತ್ರ. ನಟ ನಾಗಾರ್ಜುನ ಮೊದಲಿಗೆ ಲಕ್ಷ್ಮಿ ದಗ್ಗುಬಾಟಿಯನ್ನು ವಿವಾಹವಾಗಿದ್ದರು. ಲಕ್ಷ್ಮಿ ದಗ್ಗುಬಾಟಿ, ನಟ ವೆಂಕಟೇಶ್ ಸಹೋದರಿ. ನಂತರ ಲಕ್ಷ್ಮಿಗೆ ವಿಚ್ಛೇಧನ ನೀಡಿ ನಟಿಯಾಗಿದ್ದ ಅಮಲಾರನ್ನು ವಿವಾಹವಾದರು.
ನಟಿ ಸಮಂತಾ, ತಮ್ಮ ಮಾಜಿ ಪತಿಯ ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವುದಕ್ಕೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಮಂತಾ ಹಾಗೂ ನಾಗ ಚೈತನ್ಯ ಮತ್ತೆ ಒಂದಾಗಲಿರುವ ಬಗ್ಗೆ ಮುನ್ಸೂಚನೆ ಇದು ಎಂದು ಸಹ ಕೆಲವರು ವಿಶ್ಲೇಷಿಸಿದ್ದಾರೆ.


Click it and Unblock the Notifications











