Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನಪ್ರಿಯ ಗಾಯಕಿ ತಂದೆ ಅನುಮಾನಾಸ್ಪದ ಸಾವು: ದೂರು ದಾಖಲು
ಹಲವು ತೆಲುಗು ಸಿನಿಮಾ ಹಾಡುಗಳನ್ನು ಹಾಡಿರುವ ಜನಪ್ರಿಯ ಗಾಯಕಿ ಹರಿಣಿ ಅವರ ತಂದೆ ಎ.ಕೆ.ರಾವ್ ಅವರ ಮೃತದೇಹ ಯಲಹಂಕದ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ. ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.
ನವೆಂಬರ್ 23 ರಂದೇ ಶವ ದೊರೆತಿದೆ. ಆದರೆ ಇದು ಆತ್ಮಹತ್ಯೆಯಲ್ಲ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾವ್ ಅವರ ಕುತ್ತಿಗೆಯ ಬಳಿ ಚಾಕುವಿನಿಂದ ತಿವಿದ ಗುರುತು ಇದೆ. ಎಡಗೈ ಮುಂಗೈಗೂ ಚಾಕುವಿನಿಂದ ಇರಿಯಲಾಗಿದೆ.
ಹರಿಣಿ ಹಾಗೂ ಕುಟುಂಬಸ್ಥರು ಹೈದರಾಬಾದ್ನಲ್ಲಿ ವಾಸವಿದ್ದರು. ಆದರೆ ಕೆಲವು ದಿನಗಳಿಂದ ಅವರೂ ಸಹ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಇದು ಸಹ ಅನುಮಾನಕ್ಕೆ ಕಾರಣವಾಗಿದೆ.
ಮೃತ ದೇಹದ ಬಳಿ ಆಧಾರ್ ಕಾರ್ಡ್, ದೂರು ನೀಡಲು ಸಿದ್ಧಪಡಿಸಿಕೊಂಡಿರುವ ಪತ್ರ, ಕೆಲವು ಡಾಕ್ಯುಮೆಂಟ್ಗಳು ದೊರೆತಿವೆ. ಮೃತದೇಹದ ಬಳಿ ಚಾಕು ಸಹ ದೊರೆತಿದೆ.
ಮೃತ ಎ.ಕೆ.ರಾವ್ ಅವರ ಪುತ್ರಿ ಶಾಲಿನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಅವರ ಕೊಲೆ ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ಈಗ ಮೃತಪಟ್ಟಿರುವ ಎಕೆ ರಾವ್ ಅವರ ಕುಟುಂಬ (ಗಾಯಕಿ ಹರಿಣಿ ಸೇರಿದಂತೆ) ಕಳೆದ ಕೆಲ ದಿನಗಳಿಂದಲೂ ನಾಪತ್ತೆಯಾಗಿದ್ದರು. ಅವರ ಫೋನ್ ನಂಬರ್ಗಳು ಸ್ವಿಚ್ ಆಫ್ ಆಗಿದ್ದವು. ಎಕೆ ರಾವ್ ನಿಧನದ ಸುದ್ದಿಯನ್ನು ತಲುಪಿಸಲು ಯಲಹಂಕ ಪೊಲೀಸರು ಯತ್ನಿಸಿದಾಗಿ ಈ ವಿಷಯ ಬೆಳಕಿಗೆ ಬಂತು. ಆದರೆ ನಂತರ ಕುಟುಂಬ ಸದಸ್ಯರು ಒಟ್ಟಾಗಿ ರೈಲ್ವೆ ಪೊಲೀಸರ ಮುಂದೆ ಹಾಜರಾಗಿ ತಂದೆಯ ಮೃತದೇಹವನ್ನು ಗುರುತಿಸಿದ್ದಾರೆ.
ಎಕೆ ರಾವ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಪಡೆದಿದ್ದು, ವರದಿ ಬಂದ ಬಳಿಕ ಇದು ಆತ್ಮಹತ್ಯೆಯೋ, ಕೊಲೆಯೊ ಗೊತ್ತಾಗುತ್ತದೆ. ಮೃತ ಎಕೆ ರಾವ್ ಅವರು ಸುಜನಾ ಫೌಂಡೇಶನ್ ಸಂಸ್ಥೆಯಲ್ಲಿ ಸಿಇಓ ಆಗಿ ಕೆಲಸ ಮಾಡುತ್ತಿದ್ದರು. ಜನಪ್ರಿಯ ಸುಜನಾ ಚೌಧರಿ ಈ ಸಂಸ್ಥೆಯನ್ನು ನಡೆಸುತ್ತಾರೆ. ಕೌಟುಂಬಿಕ ಕಾರಣ, ಕಚೇರಿ ಕಾರಣ ಅಥವಾ ಇನ್ನಾವ ಕಾರಣಕ್ಕೆ ಎಕೆ ರಾವ್ ಸಾವಾಗಿದೆ ಎಂಬುದು ತನಿಖೆಯಿಂದ ತಿಳಿದು ಬರಲಿದೆ.
ಹರಿಣಿ ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿದ್ದಾರೆ. ನೂರಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಆರಂಭದ ಸಿನಿಮಾಗಳಲ್ಲಿ ಹಲವು ಹಾಡುಗಳನ್ನು ಹಾಡಿರುವ ಹರಿಣಿ, ಮಣಿಶರ್ಮಾ, ಹ್ಯಾರಿಸ್ ಜಯರಾಜ್, ದೇವಿಶ್ರೀಪ್ರಸಾದ್, ಎಸ್ ತಮನ್ ಇನ್ನೂ ಹಲವು ಜನಪ್ರಿಯ ಸಂಗೀತ ನಿರ್ದೇಶಕರಿಗಾಗಿ ಹಾಡುಗಳನ್ನು ಹಾಡಿದ್ದಾರೆ. ತೆಲುಗು ಮಾತ್ರವೇ ಅಲ್ಲದೆ ತಮಿಳಿನಲ್ಲಿಯೂ ನೂರಾರು ಹಿಟ್ ಗೀತೆಗಳನ್ನು ಹರಿಣಿ ನೀಡಿದ್ದಾರೆ.