Don't Miss!
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್ಪಿಬಿ ಇಲ್ಲ ಎಂಬ ನೋವಿಗಿಂತ ಬಿಲ್ ಮುಖ್ಯ ಆಯಿತೇ? ಮಗ ಚರಣ್ ಬೇಸರ
ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ ಚೆನ್ನೈನ ಎಂಜಿಎಂ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಸೆಪ್ಟೆಂಬರ್ 25 ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಐವತ್ತಕ್ಕೂ ಅಧಿಕ ದಿನಗಳ ಕಾಲ ಐಸಿಯು ಘಟಕದಲ್ಲಿದ್ದ ಎಸ್ಪಿಬಿ ಚಿಕಿತ್ಸಾ ವೆಚ್ಚದ ಬಗ್ಗೆ ಹಲವು ಚರ್ಚೆಗಳು ನಡೆದವು.
ಆಸ್ಪತ್ರೆ ಕಡೆಯಿಂದ ಭಾರಿ ಮೊತ್ತದ ಬಿಲ್ ನೀಡಿದ್ದರು. ಹಣ ಪಾವತಿಸಲಾಗದೆ ಎಸ್ಪಿಬಿ ಕುಟುಂಬ ತಮಿಳುನಾಡು ಸರ್ಕಾರದ ಬಳಿ ಮನವಿ ಮಾಡಿದ್ದರು. ಸರ್ಕಾರದ ವತಿಯಿಂದ ಪ್ರತಿಕ್ರಿಯೆ ನೀಡಲು ವಿಳಂಬವಾಯಿತು. ಅಷ್ಟರಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಬಳಿ ಮನವಿ ಮಾಡಲಾಯಿತು. ನಂತರ ಅವರ ಮಗಳು ಖುದ್ದು ಆಸ್ಪತ್ರೆ ಬಿಲ್ ಕಟ್ಟಿದರು ಎಂಬ ಸುದ್ದಿ ಹರಿದಾಡಿದವು. ಇದೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿರುವ ಎಸ್ಪಿಬಿ ಮಗ ಚರಣ್ ವದಂತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...
Recommended Video
ಇದು ನಮ್ಮ ಸಂಸ್ಕೃತಿ ಅಲ್ಲ
''ಬಾಲಸುಬ್ರಹ್ಮಣ್ಯಂ ಅವರು ಒಂದು ದಿನ ಮುಂಚಿತವಾಗಿಯೇ ಮೃತಪಟ್ಟಿದ್ದರು. ಆಸ್ಪತ್ರೆ ಬಿಲ್ ಕಟ್ಟಲಾಗದೆ ಸರ್ಕಾರದ ಮೊರೆ ಹೋಗಿದ್ದರು. ಅದಕ್ಕಾಗಿಯೇ ಒಂದು ವಿಳಂಬವಾಗಿ ಸಾವಿನ ಸುದ್ದಿ ಘೋಷಿಸಿದರು ಎಂದೆಲ್ಲ ಕಥೆ ಕಟ್ಟಲಾಗಿದೆ. ಇದೆಲ್ಲ ಏಕೆ, ಇದು ನಮ್ಮ ಸಂಸ್ಕೃತಿ ಅಲ್ಲ, ನಿಮಗೂ ಅವರ ಮೇಲೆ ಅಭಿಮಾನ ಇದೆ, ಹಾಗಿದ್ದರೂ ಇಂತಹ ಸುದ್ದಿಗಳು ನೋವು ತಂದಿದೆ'' ಎಂದು ಚರಣ್ ಹೇಳಿದ್ದಾರೆ.