Don't Miss!
- News Lok Sabha election: ಬೆಂಗಳೂರಿನಲ್ಲಿ ಒಂದು ಕೋಟಿ ದಾಟಿದ ಮತದಾರರ ಸಂಖ್ಯೆ
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Automobiles ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಣಾ ದಗ್ಗುಬಾಟಿ ಲವ್ ಸ್ಟೋರಿ ಬಗ್ಗೆ ಶ್ರೀ ರೆಡ್ಡಿ ಕಮೆಂಟ್
ನಟ ರಾಣಾ ದಗ್ಗುಬಾಟಿ ತಮ್ಮ ಪ್ರೀತಿಯ ಹುಡುಗಿ ಬಗ್ಗೆ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. 'ಮಿಹಿಕಾ ಬಜಾಜ್ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ' ಎಂದು ರಾಣಾ ದಗ್ಗುಬಾಟಿ ಹೇಳಿದ್ದರು.
Recommended Video
ರಾಣಾ ದಗ್ಗುಬಾಟಿ ಅವರು ಮದುವೆ ಆಗುವ ನಿರ್ಧಾರ ಪ್ರಕಟಿಸಿದ್ದಕ್ಕೆ ತೆಲುಗು ಚಿತ್ರರಂಗದ ಗಣ್ಯರು, ಬೇರೆ ಭಾಷೆಯ ಚಿತ್ರ ನಟ-ನಟಿಯರೂ ಸಹ ರಾಣಾ ದಗ್ಗುಬಾಟಿಗೆ ಶುಭಾಶಯ ಹೇಳಿದ್ದರು.
ಲಾಕ್ಡೌನ್ ವಿಸ್ತರಿಸಿದ ಮೋದಿಗೆ ಸಾಲು-ಸಾಲು ಪ್ರಶ್ನೆ ಕೇಳಿದ ನಟಿ ಶ್ರೀರೆಡ್ಡಿ
ನಟ-ನಟಿಯರ ಬಗ್ಗೆ, ಅವರ ಸಂಬಂಧಗಳ ಬಗ್ಗೆ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಶ್ರೀರೆಡ್ಡಿ, ರಾಣಾ ದಗ್ಗುಬಾಟಿ ಮತ್ತು ಪ್ರೇಯಸಿ ವಿಹಿಕಾ ಬಜಾಬ್ ಬಗ್ಗೆ ಫೇಸ್ಬುಕ್ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಎಲ್ಲರ ಹುಬ್ಬೇರಿಸಿದೆ.
ಪಾಸಿಟಿವ್ ಪೋಸ್ಟ್ ಹಾಕಿದ ಶ್ರೀ ರೆಡ್ಡಿ
ರಾಣಾ ದಗ್ಗುಬಾಟಿ ನಿಮಗೆ ಜೀವನದಲ್ಲಿ ಏನೇನು ಅನುಭವಿಸಿದ್ದೀರಿ ಎಂದು ನನಗೆ ಗೊತ್ತಿದೆ. ಈಕೆಯೊಂದಿಗಾದರೂ ಶಾಂತಿ-ನೆಮ್ಮಿದಯಿಂದ ಜೀವನ ಸಾಗಿಸಿ ಎಂದು ಶ್ರೀರೆಡ್ಡಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ರಾಮಾ ನಾಯ್ಡು ಸ್ಟುಡಿಯೋ ಬಗ್ಗೆ ಕಮೆಂಟ್
ಈ ಹಿಂದೆ ರಾಣಾ ದಗ್ಗುಬಾಟಿ ಕುಟುಂಬಕ್ಕೆ ಸೇರಿದವರ ಮೇಲೆಯೇ ಆರೋಪಗಳನ್ನು ಮಾಡಿದ್ದರು ಶ್ರೀ ರೆಡ್ಡಿ. 'ನನ್ನ ಮೊದಲ ರಾತ್ರಿ ನಡೆದಿದ್ದು ರಾಮಾ ನಾಯ್ಡು ಸ್ಟುಡಿಯೋದಲ್ಲಿ' ಎಂದು ಸಹ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ತ್ರಿಶಾ-ರಾಣಾ ದಗ್ಗುಬಾಟಿ ಬಗ್ಗೆ ಮಾತು
ರಾಣಾ ದಗ್ಗುಬಾಟಿ ಬಗ್ಗೆ ಈ ಹಿಂದೆಯೂ ಶ್ರೀ ರೆಡ್ಡಿ ಮಾತನಾಡಿದ್ದರು. ತ್ರಿಶಾ ಮತ್ತು ರಾಣಾ ದಗ್ಗುಬಾಟಿ ತೀವ್ರವಾಗಿ ಪ್ರೀತಿಸುತ್ತಿದ್ದರು. ಆದರೆ ಆ ನಂತರ ತ್ರಿಶಾ, ದಗ್ಗುಬಾಟಿಗೆ ಕೈ ಕೊಟ್ಟರು ಎಂದೆಲ್ಲಾ ಶ್ರೀ ರೆಡ್ಡಿ ಆಗ ಹೇಳಿದ್ದರು.
ವಿವಾದಗಳಿಂದಲೇ ಸುದ್ದಿಯಲ್ಲಿರುವ ನಟಿ
ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಶ್ರೀ ರೆಡ್ಡಿ, ತಮಿಳು ನಟ ಧನುಶ್, ಅನಿರುದ್ಧ ಹಲವು ಸ್ಟಾರ್ ನಟ-ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಬೆತ್ತಲೆ ಪ್ರತಿಭಟನೆಯನ್ನೂ ಸಹ ಮಾಡಿದ್ದರು.