Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಣಾ ದಗ್ಗುಬಾಟಿ ಲವ್ ಸ್ಟೋರಿ ಬಗ್ಗೆ ಶ್ರೀ ರೆಡ್ಡಿ ಕಮೆಂಟ್
ನಟ ರಾಣಾ ದಗ್ಗುಬಾಟಿ ತಮ್ಮ ಪ್ರೀತಿಯ ಹುಡುಗಿ ಬಗ್ಗೆ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. 'ಮಿಹಿಕಾ ಬಜಾಜ್ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ' ಎಂದು ರಾಣಾ ದಗ್ಗುಬಾಟಿ ಹೇಳಿದ್ದರು.
Recommended Video
ರಾಣಾ ದಗ್ಗುಬಾಟಿ ಅವರು ಮದುವೆ ಆಗುವ ನಿರ್ಧಾರ ಪ್ರಕಟಿಸಿದ್ದಕ್ಕೆ ತೆಲುಗು ಚಿತ್ರರಂಗದ ಗಣ್ಯರು, ಬೇರೆ ಭಾಷೆಯ ಚಿತ್ರ ನಟ-ನಟಿಯರೂ ಸಹ ರಾಣಾ ದಗ್ಗುಬಾಟಿಗೆ ಶುಭಾಶಯ ಹೇಳಿದ್ದರು.
ಲಾಕ್ಡೌನ್ ವಿಸ್ತರಿಸಿದ ಮೋದಿಗೆ ಸಾಲು-ಸಾಲು ಪ್ರಶ್ನೆ ಕೇಳಿದ ನಟಿ ಶ್ರೀರೆಡ್ಡಿ
ನಟ-ನಟಿಯರ ಬಗ್ಗೆ, ಅವರ ಸಂಬಂಧಗಳ ಬಗ್ಗೆ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಶ್ರೀರೆಡ್ಡಿ, ರಾಣಾ ದಗ್ಗುಬಾಟಿ ಮತ್ತು ಪ್ರೇಯಸಿ ವಿಹಿಕಾ ಬಜಾಬ್ ಬಗ್ಗೆ ಫೇಸ್ಬುಕ್ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಎಲ್ಲರ ಹುಬ್ಬೇರಿಸಿದೆ.
ಪಾಸಿಟಿವ್ ಪೋಸ್ಟ್ ಹಾಕಿದ ಶ್ರೀ ರೆಡ್ಡಿ
ರಾಣಾ ದಗ್ಗುಬಾಟಿ ನಿಮಗೆ ಜೀವನದಲ್ಲಿ ಏನೇನು ಅನುಭವಿಸಿದ್ದೀರಿ ಎಂದು ನನಗೆ ಗೊತ್ತಿದೆ. ಈಕೆಯೊಂದಿಗಾದರೂ ಶಾಂತಿ-ನೆಮ್ಮಿದಯಿಂದ ಜೀವನ ಸಾಗಿಸಿ ಎಂದು ಶ್ರೀರೆಡ್ಡಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ರಾಮಾ ನಾಯ್ಡು ಸ್ಟುಡಿಯೋ ಬಗ್ಗೆ ಕಮೆಂಟ್
ಈ ಹಿಂದೆ ರಾಣಾ ದಗ್ಗುಬಾಟಿ ಕುಟುಂಬಕ್ಕೆ ಸೇರಿದವರ ಮೇಲೆಯೇ ಆರೋಪಗಳನ್ನು ಮಾಡಿದ್ದರು ಶ್ರೀ ರೆಡ್ಡಿ. 'ನನ್ನ ಮೊದಲ ರಾತ್ರಿ ನಡೆದಿದ್ದು ರಾಮಾ ನಾಯ್ಡು ಸ್ಟುಡಿಯೋದಲ್ಲಿ' ಎಂದು ಸಹ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ತ್ರಿಶಾ-ರಾಣಾ ದಗ್ಗುಬಾಟಿ ಬಗ್ಗೆ ಮಾತು
ರಾಣಾ ದಗ್ಗುಬಾಟಿ ಬಗ್ಗೆ ಈ ಹಿಂದೆಯೂ ಶ್ರೀ ರೆಡ್ಡಿ ಮಾತನಾಡಿದ್ದರು. ತ್ರಿಶಾ ಮತ್ತು ರಾಣಾ ದಗ್ಗುಬಾಟಿ ತೀವ್ರವಾಗಿ ಪ್ರೀತಿಸುತ್ತಿದ್ದರು. ಆದರೆ ಆ ನಂತರ ತ್ರಿಶಾ, ದಗ್ಗುಬಾಟಿಗೆ ಕೈ ಕೊಟ್ಟರು ಎಂದೆಲ್ಲಾ ಶ್ರೀ ರೆಡ್ಡಿ ಆಗ ಹೇಳಿದ್ದರು.
ವಿವಾದಗಳಿಂದಲೇ ಸುದ್ದಿಯಲ್ಲಿರುವ ನಟಿ
ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಶ್ರೀ ರೆಡ್ಡಿ, ತಮಿಳು ನಟ ಧನುಶ್, ಅನಿರುದ್ಧ ಹಲವು ಸ್ಟಾರ್ ನಟ-ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಬೆತ್ತಲೆ ಪ್ರತಿಭಟನೆಯನ್ನೂ ಸಹ ಮಾಡಿದ್ದರು.