Don't Miss!
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುರ್ಚಿಯಿಂದ ಚಿರಂಜೀವಿಯನ್ನು ಎಬ್ಬಿಸಿ ಅವಮಾನಿಸಿದ್ದ ದೊಡ್ಡ ನಟ
ಭಾರತದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕೆಲವೇ ನಟರಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹ ಒಬ್ಬರು.
Recommended Video
150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಚಿರಂಜೀವಿ ಈಗಲೂ ತೆಲುಗಿನ ನಂಬರ್ 1 ನಟ. ಅವರ ಸಿನಿಮಾಗಳು ಬಿಡುಗಡೆಯಾದರೆ ಅಭಿಮಾನಿಗಳಿಗೆ ಹಬ್ಬ, ಚಿತ್ರಮಂದಿರಗಳು ಹೌಸ್ಫುಲ್.
ಯಾವುದೇ ಗಾಡ್ಫಾದರ್ಗಳಿಲ್ಲದೆ ಸ್ವಂತ ಪರಿಶ್ರಮದಿಂದ ನಂಬರ್ ಒನ್ ಸ್ಟಾರ್ ಆಗಿ ಬೆಳೆದ ಚಿರಂಜೀವಿ, ಸಿನಿ ಬದುಕಿನ ಆರಂಭದಲ್ಲಿ ಬಹುಕಷ್ಟಪಟ್ಟವರು. ಅವರು ಅನುಭವಿಸಿದ ಅವಮಾನವೊಂದರ ಬಗ್ಗೆ ಚಿರಂಜೀವಿ ಸಹೋದರ ನಾಗಬಾಬು ಇತ್ತೀಚೆಗಷ್ಟೆ ಬಹಿರಂಗವಾಗಿ ಮಾತನಾಡಿದ್ದಾರೆ.
ಚೆನ್ನೈ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ರಜನೀಕಾಂತ್ ಅವರದ್ದು ಮೊದಲನೇ ಬ್ಯಾಚ್ ಆಗಿದ್ದರೆ, ಚಿರಂಜೀವಿ ಅವರದ್ದು ಎರಡನೇಯ ಬ್ಯಾಚ್ ಅಂತೆ. ನಂತರ ಅದನ್ನು ಅಡಿಯಾರ್ ಇನ್ಸ್ಟಿಟ್ಯೂಟ್ ಆಗಿ ಬದಲಾಯಿಸಿದರಂತೆ. ಆಗ ಚಿರಂಜೀವಿ ಜೊತೆಗೆ ಸುಧಾಕರ್, ಹರಿ ಪ್ರಸಾದ್ ಹಾಗೂ ಪುರಾಣಂ ಸೂರಿ ಎಂಬ ಗೆಳೆಯರು ಇದ್ದರಂತೆ.
ಮೊದಲ ಸಾಲಿನಲ್ಲಿ ಕೂತಿದ್ದ ಚಿರಂಜೀವಿ ಹಾಗೂ ಗೆಳೆಯರು
ಪುರಾಣಂ ಸೂರಿ ಕುಟುಂಬದವರು ಅದಾಗಲೇ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಮಾಡುತ್ತಿದ್ದರಂತೆ. ಒಮ್ಮೆ ಒಬ್ಬ ಸ್ಟಾರ್ ನಟನ ಸಿನಿಮಾದ ಪ್ರಿವ್ಯೂ ಶೋಗೆ ಪುರಾಣಂ ಸೂರಿ ಕುಟುಂಬದ ಕಡೆಯಿಂದ ಚಿರಂಜೀವಿ, ಸುಧಾಕರ್ ಹಾಗೂ ಹರಿ ಪ್ರಸಾದ್ ಹೋಗಿ ಮೊದಲನೇ ಸಾಲಿನಲ್ಲಿ ಕುಳಿತುಕೊಂಡಿದ್ದರಂತೆ.
ಚಿರಂಜೀವಿಯನ್ನು ಎಬ್ಬಿಸಿ ಕಳಿಸಿದ್ದ ಸ್ಟಾರ್ ನಟ
ಆಗ ಬಂದ ಸ್ಟಾರ್ ನಟ, ಅವರ ಕಡೆಯವರಿಗಾಗಿ ಆ ಸೀಟುಗಳು ಬೇಕೆಂದು ಚಿರಂಜೀವಿ ಹಾಗೂ ಗೆಳೆಯರು ಕೂತಿದ್ದ ಕುರ್ಚಿಗಳಿಂದ ಗಡುಸಾಗಿಯೇ ಮಾತನಾಡಿ ಎಬ್ಬಿಸಿ ಹಿಂದೆ ಕಳಿಸಿಬಿಟ್ಟರಂತೆ. ಇದು ಚಿರಂಜೀವಿಗೆ ಬಹಳ ಬೇಸರ ತರಿಸಿತ್ತಂತೆ.
ಅಭಿಪ್ರಾಯ ಹೇಳಲು ಹೋಗದಿದ್ದ ಚಿರಂಜೀವಿ
ಸಿನಿಮಾ ಬಗ್ಗೆ ಅಭಿಪ್ರಾಯ ತಿಳಿಸಲು ಪುರಾಣಂ ಸೂರಿ ಮನೆಗೆ ಸುಧಾಕರ್ ಮತ್ತು ಹರಿ ಪ್ರಸಾದ್ ಮಾತ್ರವೇ ಹೋಗಿದ್ದರಂತೆ. ಆಗ ಚಿರಂಜೀವಿ ಏಕೆ ಬರಲಿಲ್ಲವೆಂದು ವಿಚಾರಿಸಿದಾಗ ಚಿತ್ರಮಂದಿರದಲ್ಲಿ ನಡೆದ ಘಟನೆ ವಿವರಿಸಿದರಂತೆ ಸುಧಾಕರ್.
ಚಿರಂಜೀವಿ ಅಂದು ಮಾಡಿದ್ದ ಸಂಕಲ್ಪ
ಕೂಡಲೇ ಚಿರಂಜೀವಿಯನ್ನು ಭೇಟಿಯಾದ ಪುರಾಣಂ ಸೂರಿ, 'ನೀನು ಖಂಡಿತ ದೊಡ್ಡ ನಟನಾಗುತ್ತೀಯ, ಇಂಥಹಾ ಕ್ಷುಲ್ಲಕ ವಿಷಯಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡ ಎಂದು ಸಮಾಧಾನದ ಮಾತಾಡಿದರಂತೆ ಸೂರಿ. ಇದಕ್ಕೆ ಪ್ರತಿಕ್ರಿಯಿಸಿದ ಚಿರಂಜೀವಿ, ಇಷ್ಟು ದಿನ ನಾಯಕ ನಟ ಆದರೆ ಸಾಕು ಎಂದುಕೊಂಡಿದ್ದೆ. ನಂಬರ್ ಒನ್ ನಾಯಕ ನಟ ಆಗಬೇಕೆಂದು ಈಗ ನಿಶ್ಚಯಿಸಿದೆ ಎಂದರಂತೆ ಚಿರಂಜೀವಿ. ನಂತರ ಅವರು ನಂಬರ್ 1 ನಟ ಆದರೂ ಸಹ.