Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರತಿಬಾರಿ ಅನುಷ್ಕಾ ಶೆಟ್ಟಿ ಕಾಲಿಗೆ ಬೀಳ್ತಾರಂತೆ ಪುರಿ ಜಗನ್ನಾಥ್, ರವಿತೇಜ
ದೊಡ್ಡವರು ಅದರಲ್ಲೂ ದೊಡ್ಡ ಸ್ಟಾರ್ಗಳು ತಮಗಿಂತ ಕಿರಿಯರಾದ ನಟಿಯ ಕಾಲಿಗೆ ಬೀಳುತ್ತಾರೆಂದರೆ ನಂಬಲು ಅಸಾಧ್ಯ ಎನಿಸಬಹುದು ಆದರೆ ಇದು ನಿಜ.
ಹೌದು, ಕನ್ನಡತಿ, ತೆಲುಗಿನ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರಂತೆ ಮೂರು ದೊಡ್ಡ ಸ್ಟಾರ್ಗಳು. ಅದೂ ಪ್ರತಿಭಾರಿ ಭೇಟಿಯಾದಾಗಲೂ ಹೀಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರಂತೆ..
ಕನ್ನಡತಿ ಅನುಷ್ಕಾ ಶೆಟ್ಟಿ ಬಗ್ಗೆ ಪುರಿ ಜಗನ್ನಾಥ್ ಹೇಳಿದ ಸತ್ಯ
ನಟಿ ಅನುಷ್ಕಾ ಶೆಟ್ಟಿ ಎದುರಾದಾಗೆಲ್ಲಾ ತೆಲುಗಿನ ಹಿರಿಯ ನಟ ರವಿತೇಜಾ, ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ ಮತ್ತು ಖ್ಯಾತ ನಟಿ ಚಾರ್ಮಿ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರಂತೆ. ಹೀಗೆಂದು ಸ್ವತಃ ಪುರಿ ಜಗನ್ನಾಥ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಸತ್ಯ ಬಿಚ್ಚಿಟ್ಟ ಪುರಿ ಜಗನ್ನಾಥ್
ಅನುಷ್ಕಾ ಶೆಟ್ಟಿ ಅವರ ಹೊಸ ಸಿನಿಮಾ ನಿಷ್ಯಬ್ಧಂ ಕುರಿತ ಕಾರ್ಯಕ್ರಮವೊಂದರಲ್ಲಿ ಪುರಿ ಜಗನ್ನಾಥ್ ಹೀಗೆ ಹೇಳಿದ್ದು, 'ಅನುಮಾನವಿದ್ದರೆ ರವಿತೇಜಾ ಹಾಗೂ ಚಾರ್ಮಿಯನ್ನು ಬೇಕಾದರೆ ಕೇಳಿ' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅನುಷ್ಕಾ ಶೆಟ್ಟಿಯನ್ನು ರವಿತೇಜಾ, ಚಾರ್ಮಿ ಮತ್ತು ಪುರಿ ಜಗನ್ನಾಥ್ ಅಮ್ಮ ಎಂದೇ ಕರೆಯುತ್ತಾರಂತೆ.
ಅನುಷ್ಕಾ ಶೆಟ್ಟಿ ಕಾಲಿಗೆ ಬೀಳುವುದು ಏಕೆ?
ತಾವೇಕೆ ಅನುಷ್ಕಾ ಶೆಟ್ಟಿ ಕಾಲಿಗೆ ಬೀಳುತ್ತೇವೆ ಎಂಬುದಕ್ಕೆ ಕಾರಣವನ್ನೂ ನೀಡಿರುವ ಪುರಿ ಜಗನ್ನಾಥ್, 'ಅನುಷ್ಕಾ ಶೆಟ್ಟಿ ಅಷ್ಟು ಒಳ್ಳೆಯ ವ್ಯಕ್ತಿಯನ್ನು ನಾನು ಕಂಡಿಲ್ಲ, ಆಕೆ ಬುದ್ದಿವಂತಿಕೆ ಮತ್ತು ಒಳ್ಳೆಯತನ ಸಮವಾಗಿ ಬೆರೆತ ವ್ಯಕ್ತಿ, ಅವರಲ್ಲಿನ ಒಳ್ಳೆಯ ಗುಣಗಳು ನಮಗೆ ಬರಲೆಂದು ನಾವು ಅವರ ಕಾಲಿಗೆ ಬೀಳುತ್ತೇವೆ' ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.
ಸೂಪರ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ ಮೊದಲಿಗೆ ತೆಲುಗಿನ 'ಸೂಪರ್' ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದರು. ನಾಗಾರ್ಜುನ ನಾಯಕರಾಗಿದ್ದ ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದರು. ಆ ಸಿನಿಮಾ ಬಿಡುಗಡೆ ಆಗಿ ಹದಿನೈದು ವರ್ಷವಾಗಿದೆ.
ಕನ್ನಡತಿಯಾದರೂ ಒಂದೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ
ಅನುಷ್ಕಾ ಶೆಟ್ಟಿ ಸತತ ಹದಿನೈದು ವರ್ಷಗಳಿಂದ ಬಿಡುವಿಲ್ಲದ ನಟಿಯಾಗಿ ಗುರಿತಿಸಿಕೊಂಡು, ಹಲವು ನೆನಪಿನಲ್ಲಿ ಉಳಿಯುವ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡತಿಯಾಗಿರುವ ಅನುಷ್ಕಾ ಶೆಟ್ಟಿ ಒಂದೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲವೆಂಬುದು ವಿಶೇಷ.