Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸೈರಾ' ಡೈರೆಕ್ಟರ್ 'ಬ್ಲಾಕ್ ಮೇಲ್' ಹೇಳಿಕೆಗೆ ಜೂನಿಯರ್ NTR ಅಭಿಮಾನಿಗಳು ಕೆಂಡಾಮಂಡಲ
ತೆಲುಗಿನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾದ ಸುರೇಂದರ್ ರೆಡ್ಡಿ ಇತ್ತೀಚಿಗಷ್ಟೆ ಮೆಗಾಸ್ಟಾರ್ ಚಿರಂಜೀವಿ ಜೊತೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿ ಯಶಸ್ಸಿನಲ್ಲಿದ್ದಾರೆ. ಇದಕ್ಕೂ ಮೊದಲು ಕಿಕ್, ರೇಸಗುರ್ರಂ, ಊಸರವಳ್ಳಿ ಅಂತಹ ಚಿತ್ರಗಳನ್ನ ನಿರ್ದೇಶಿಸಿರುವ ಸುರೇಂದರ್ ರೆಡ್ಡಿ ಈಗ ಜೂನಿಯರ್ ಎನ್.ಟಿ.ಆರ್ ಅಭಿಮಾನಿಗಳನ್ನ ಕೆಂಗಣ್ಣಿಗೆ ಬಿದ್ದಿದ್ದಾರೆ.
ಖಾಸಗಿ ಸುದ್ದಿವಾಹಿನಿ ಜೊತೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ವೇಳೆ ಯಂಗ್ ಟೈಗರ್ ಎನ್.ಟಿ.ಆರ್ ಕುರಿತು ಕುತೂಹಲಕಾರಿ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದು, ಈ ಹೇಳಿಕೆ ಈಗ ಎನ್.ಟಿ.ಆರ್ ಅಭಿಮಾನಿ ಬಳಗವನ್ನ ಕೆರಳಿಸುವಂತೆ ಮಾಡಿದೆ.
ಜೂನಿಯರ್ ಎನ್.ಟಿ.ಆರ್ ಗೆ ಧಮ್ ಇಲ್ಲ: ಎನ್.ಟಿ ರಾಮರಾವ್ ಪತ್ನಿ ಪಂಚ್
ಸುರೇಂದರ್ ರೆಡ್ಡಿ ಹೇಳಿದ ಆ ಮಾತನ್ನು ಖಂಡಿಸಿ, ಎನ್.ಟಿ.ಆರ್ ಫ್ಯಾನ್ಸ್ ಆಕ್ರೋಶ ಹೊರಹಾಕುತ್ತಿದ್ದಾರೆ. ಸುರೇಂದರ್ ರೆಡ್ಡಿ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ, ಸೈರಾ ನಿರ್ದೇಶಕ ಯಂಗ್ ಟೈಗರ್ ಕುರಿತು ಹೇಳಿದ್ದೇನು? ಮುಂದೆ ಓದಿ....
ಪ್ರಭಾಸ್ ಜೊತೆ ಸಿನಿಮಾ ಮಾಡಬೇಕಿತ್ತಂತೆ
ಜೂನಿಯರ್ ಎನ್.ಟಿ.ಆರ್ ಅವರ ಸಹೋದರ ಕಲ್ಯಾಣ್ ರಾಮ್ ನಟನೆಯ ಆತನೊಕ್ಕಡೆ ಚಿತ್ರಕ್ಕೆ ಸುರೇಂದರ್ ರೆಡ್ಡಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಕೂಡ ಆಯ್ತು. ಈ ಸಿನಿಮಾ ಬಳಿಕ ಪ್ರಭಾಸ್ ಜೊತೆ ಸಿನಿಮಾ ಮಾಡಲು ಸುರೇಂದರ್ ರೆಡ್ಡಿ ಸಜ್ಜಾಗಿದ್ದರಂತೆ. ಆದರೆ, ಎನ್.ಟಿ.ಆರ್ ಮ್ಯಾನೇಜರ್ ಇದಕ್ಕೆ ಅಡ್ಡಗಾಲು ಹಾಕಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ತೆಲುಗು 'ಬಿಗ್ ಬಾಸ್'ನಲ್ಲಿ ಕನ್ನಡ ಪ್ರೇಮ ಮೆರೆದ ಜೂನಿಯರ್ NTR..!
ತಾರಕ್ ಜೊತೆ ಸಿನಿಮಾ ಮಾಡಲು ಒತ್ತಡ
''ಆತನೊಕ್ಕಡೆ' ಸಿನಿಮಾ ಬಳಿಕ ಎನ್.ಟಿ.ಆರ್ ಜೊತೆ ಸಿನಿಮಾ ಮಾಡಲು ಅವರ ಮ್ಯಾನೇಜರ್ ಒತ್ತಡ ಹೇರಿದರು. ಮೂರು ದಿನಗಳ ಕಾಲ ಮೆಂಟಲ್ ಟಾರ್ಚರ್ ಕೊಟ್ಟಿದ್ದರು. ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಕೂಡ ಮಾಡಿದರು. ಇದರಿಂದ ಪ್ರಭಾಸ್ ಸಿನಿಮಾ ಬಿಟ್ಟು ಎನ್.ಟಿ.ಆರ್ ಜೊತೆ ಅಶೋಕ ಸಿನಿಮಾ ಮಾಡಬೇಕಾಯಿತು'' ಎಂದು ಸುರೇಂದರ್ ರೆಡ್ಡಿ ಹೇಳಿಕೊಂಡಿದ್ದಾರೆ.
ಎರಡನೇ ಚಿತ್ರ ಯಾಕೆ ಮಾಡಿದ್ರಿ?
'ಎನ್.ಟಿ.ಆರ್ ಜೊತೆ ಸಿನಿಮಾ ಮಾಡಲು ಒಪ್ಪಿದೆ. ಸ್ಕ್ರಿಪ್ಟ್ ಇಷ್ಟ ಆಗಲಿಲ್ಲ. ಆದರೂ ಮಾಡಬೇಕಾಯಿತು' ಎಂದು ಸುರೇಂದರ್ ರೆಡ್ಡಿ ಹೇಳಿದ್ದಾರೆ ಎನ್ನಲಾಗಿದೆ. ಅಶೋಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತ್ತು. 'ಬ್ಲಾಕ್ ಮೇಲ್ ಮಾಡಿದ್ದಕ್ಕೆ ಎನ್.ಟಿ.ಆರ್ ಜೊತೆ ಸಿನಿಮಾ ಮಾಡಿದೆ ಎಂದಾದರೆ ಮತ್ತೆ ಅವರ ಜೊತೆ ಊಸರವಳ್ಳಿ ಸಿನಿಮಾ ಯಾಕೆ ಮಾಡಿದ್ರೀ?' ಎಂದು ಈಗ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಸುರೇಂದರ್ ರೆಡ್ಡಿ ಟ್ರೋಲ್
ಸುರೇಂದರ್ ರೆಡ್ಡಿ ಅದ್ಯಾವ ಅರ್ಥದಲ್ಲಿ ಇಂತಹದೊಂದು ಹೇಳಿಕೆ ನೀಡಿದರೋ ಗೊತ್ತಿಲ್ಲ. ಆದರೆ, ಜೂನಿಯರ್ ಎನ್.ಟಿ.ಆರ್ ಅಭಿಮಾನಿಗಳಂತೂ ಸೈರಾ ನರಸಿಂಹ ರೆಡ್ಡಿ ನಿರ್ದೇಶಕರನ್ನ ಟ್ರೋಲ್ ಮಾಡುತ್ತಿದ್ದಾರೆ. ಅವರ ನಿರ್ದೇಶನವನ್ನ ಕಾಲೆಳೆಯುತ್ತಿದ್ದಾರೆ.