Don't Miss!
- Sports IPL 2024: ಚಿನ್ನಸ್ವಾಮಿಯಲ್ಲಿ ಡಾಗ್ ಔಟ್ ವಲಯ ನಿರ್ಮಾಣ? ಇದರ ಲಾಭವೇನು?
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೆಜಿಎಫ್ 2': ಅಲ್ಲು ಅರ್ಜುನ್ ಬಳಿಕ ರಾಮ್ ಚರಣ್ ಗುಣಗಾನ
'ಕೆಜಿಎಫ್ 2' ಸಿನಿಮಾ ಇತಿಹಾಸದ ಪುಟಗಳನ್ನು ಸೇರಿ ಆಗಿದೆ. ಸಿನಿಮಾ ಮಾಡಿರುವ ಹಲವು ದಾಖಲೆಗಳನ್ನು ಮುರಿಯುವುದು ಸುಲಭಕ್ಕೆ ಸಾಧ್ಯವಲ್ಲ.
'ಕೆಜಿಎಫ್ 2' ಸಿನಿಮಾ ಗಳಿಕೆ ವಿಚಾರದಲ್ಲಿ ಭಾರತದ ಹಲವು ಸಿನಿಮಾಗಳನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಗಳಿಕೆ ವಿಷಯದಲ್ಲಿ ಮಾತ್ರವೆ ಅಲ್ಲ ಸಿನಿಮಾ ತನ್ನ ತಾಂತ್ರಿಕ ಅಂಶದಿಂದಲೂ ಬಹುವಾಗಿ ಗಮನ ಸೆಳೆದಿದೆ. ಸಿನಿಮಾವನ್ನು ಪ್ರೇಕ್ಷಕರು ಮಾತ್ರವೇ ಅಲ್ಲ, ನೆರೆ-ಹೊರೆಯ ಜನಪ್ರಿಯ ಸ್ಟಾರ್ ನಟರು, ನಿರ್ದೇಶಕರು ಸಹ ಹೊಗಳುತ್ತಿದ್ದಾರೆ.
'ಕೆಜಿಎಫ್ 2' ತಂಡಕ್ಕೆ ಶುಭಕೋರಿದ ಅಲ್ಲು ಅರ್ಜುನ್
Recommended Video
ಕೆಲವು ದಿನಗಳ ಹಿಂದಷ್ಟೆ ನಟ ಅಲ್ಲು ಅರ್ಜುನ್, 'ಕೆಜಿಎಫ್ 2' ಸಿನಿಮಾವನ್ನು ಬಹುವಾಗಿ ಮೆಚ್ಚಿ ಮಾತನಾಡಿದ್ದರು, ಇದೀಗ ಮೆಗಾ ಕುಟುಂಬದ ಸ್ಟಾರ್ ನಟ ರಾಮ್ ಚರಣ್ ತೇಜ, 'ಕೆಜಿಎಫ್ 2' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಕೆಜಿಎಫ್ 2' ಸಿನಿಮಾ ನೋಡಿ ಟ್ವೀಟ್ ಮಾಡಿರುವ ನಟ ರಾಮ್ ಚರಣ್, ''ಸಹೋದರ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಮ್ಸ್ ಹಾಗೂ ಇಡೀ 'ಕೆಜಿಎಫ್ 2' ಚಿತ್ರತಂಡಕ್ಕೆ ಅಭಿನಂದನೆಗಳು. ಪ್ರಿಯ ಯಶ್ ನಿಮ್ಮ ನಟನೆ ಅದ್ಭುತ, ತೆರೆಯ ಮೇಲೆ ನೀವು ಅದ್ಭುತವಾಗಿ ಕಾಣುತ್ತೀರಿ'' ಎಂದು ರಾಮ್ ಚರಣ್ ಹೇಳಿದ್ದಾರೆ.
'ಅಧೀರ'ನ ಯಶಸ್ಸನ್ನು ಪ್ರಶಾಂತ್ ನೀಲ್ಗೆ ಸಮರ್ಪಿಸಿದ ಸಂಜಯ್ ದತ್
ರಾಮ್ ಚರಣ್ ಮೊದಲಿನಿಂದಲೂ 'ಕೆಜಿಎಫ್' ಸಿನಿಮಾದ ಅಭಿಮಾನಿ. ಮಾರ್ಚ್ 25 ರಂದು ಬಿಡುಗಡೆ ಆದ 'RRR' ಸಿನಿಮಾದಲ್ಲಿ ನಟಿಸಿರುವ ರಾಮ್ ಚರಣ್, ಸಿನಿಮಾದ ಪ್ರಚಾರಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಮ್ ಚರಣ್, ತಮಗೆ 'ಕೆಜಿಎಫ್' ಸಿನಿಮಾ ಇಷ್ಟವಾಗಿದ್ದಾಗಿ ಹೇಳಿದ್ದರಷ್ಟೆ ಅಲ್ಲದೆ, 'ಕೆಜಿಎಫ್' ಸಿನಿಮಾದ 'ಧೀರ ಧೀರ ಧೀರ ಈ ಸುಲ್ತಾನಾ' ಹಾಡು ತನ್ನ ಜೀವನದ ಹಿನ್ನೆಲೆ ಸಂಗೀತ ಆಗಿರಬೇಕು ಎಂದಿದ್ದರು. ಜೀವನ ಪರ್ಯಂತ ರಾಮ್ ಚರಣ್ ಎಲ್ಲೇ ಹೋದರು ಆ ಹಾಡು ಹಿನ್ನೆಲೆ ಸಂಗೀತವಾಗಿ ಪ್ಲೇ ಆಗಬೇಕೆಂಬುದು ಅವರ ಆಸೆ.
ಇನ್ನು ನಟ ಅಲ್ಲು ಅರ್ಜುನ್ ಸಹ ಕೆಲವು ದಿನಗಳ ಹಿಂದಷ್ಟೆ 'ಕೆಜಿಎಫ್ 2' ಸಿನಿಮಾವನ್ನು ಹೊಗಳಿ ಟ್ವೀಟ್ ಮಾಡಿದ್ದರು, "ಕೆಜಿಎಫ್ 2 ತಂಡಕ್ಕೆ ಶುಭಾಶಯಗಳು. ಯಶ್ ನಟನೆ, ಕಾರ್ಯಕ್ಷಮತೆ ಅದ್ಭುತವಾಗಿದೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲರ ಅಭಿನಯ ಸೆಳೆಯುತ್ತಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಭುವನ್ ಗೌಡ ದೃಶ್ಯ ವೈಭವ ಸಖತ್ತಾಗಿದೆ. ಎಲ್ಲಾ ತಂತ್ರಜ್ಞರನ್ನು ನಾನು ಗೌರವಿಸುತ್ತೇನೆ." ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದರು.
ತಮಿಳಿನ ನಟ ವಿಶಾಲ್, ಸೂರ್ಯ ಸಹೋದರ ಕಾರ್ತಿ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಹಲವು ಬಾಲಿವುಡ್ ನಟ, ನಿರ್ದೇಶಕರು ಇನ್ನೂ ಹಲವಾರು ಮಂದಿ 'ಕೆಜಿಎಫ್ 2' ಸಿನಿಮಾವನ್ನು ಹೊಗಳಿದ್ದಾರೆ. ವಿಶ್ವ ಪ್ರಸಿದ್ಧ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡ ಸಹ 'ಕೆಜಿಎಫ್ 2' ಮೇನಿಯಾದಿಂದ ತಪ್ಪಿಸಿಕೊಳ್ಳಲಾಗಿಲ್ಲ, ಫುಟ್ಬಾಲ್ ಕ್ಲಬ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ 'ಕೆಜಿಎಫ್' ಕುರಿತಾದ ಪೋಸ್ಟ್ ಹಾಕಿದೆ.