Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾ' ಚುನಾವಣೆ: ಬೇರೆ ಇಂಡಸ್ಟ್ರಿಯ ಪ್ರಕಾಶ್ ರಾಜ್ ನಮಗೆ ಬೇಡ ಎಂದ ನಟಿ
ತೆಲುಗು ಸಿನಿಮಾ ಕಲಾವಿದರ ಸಂಘದ ಚುನಾವಣೆಯ ಬಿಸಿ ರಂಗೇರಿದೆ. ಸೆಪ್ಟೆಂಬರ್ ತಿಂಗಳಲ್ಲಿ 'ಮೂವಿ ಆರ್ಟಿಸ್ಟ್ ಅಸೋಸಿಯೇಶನ್' ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಸಲ ಭಾರಿ ಪೈಪೋಟಿ ಏರ್ಪಟ್ಟಿದೆ. ನಟ ಪ್ರಕಾಶ್ ರಾಜ್, ಮಂಚು ವಿಷ್ಣು, ಜೀವಿತಾ ರಾಜಶೇಖರ್, ಶಿವಾಜಿ ರಾಜ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಆದ್ರೀಗ, ಪ್ರಕಾಶ್ ರಾಜ್ ಸ್ಪರ್ಧೆಗೆ ತೆಲುಗಿನ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 'ಪ್ರಕಾಶ್ ರಾಜ್ ಕಲಾವಿದನಾಗಿ ನಾವು ಒಪ್ಪುತ್ತೇವೆ, ಆದರೆ ಅಧಿಕಾರ ಬಿಟ್ಟುಕೊಡಲ್ಲ' ಎಂದಿದ್ದಾರೆ. ತೆಲುಗಿನ ಪ್ರಮುಖ ಕಲಾವಿದೆ ಕರಾಟೆ ಕಲ್ಯಾಣಿ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ''ಬೇರೆ ಇಂಡಸ್ಟ್ರಿಯ ಪ್ರಕಾಶ್ ರಾಜ್ ನಮಗೆ ಬೇಡ'' ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಓದಿ...
ಪ್ರಕಾಶ್ ರಾಜ್ ಏಕೆ ಬೇಕು?
'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಶನ್) ಚುನಾವಣೆಗೆ ಸಂಬಂಧಿಸಿದಂತೆ ಟಿವಿ ವಾಹಿನಿಯೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕರಾಟೆ ಕಲ್ಯಾಣಿ, ''ನಾನು ಪ್ರಕಾಶ್ ರಾಜ್ಗೆ ಮತ ಹಾಕಲ್ಲ, ನಮ್ಮ ಇಂಡಸ್ಟ್ರಿಯವರು ಪೈಪೋಟಿ ಮಾಡಲಿ, ಬೇರೆ ಇಂಡಸ್ಟ್ರಿಯ ಬಂದಿರುವ ಪ್ರಕಾಶ್ ರಾಜ್ ಏಕೆ ಬೇಕು, ನಾನು ಅವರಿಗೆ ಬೆಂಬಲಿಸಿಲ್ಲ'' ಎಂದು ವಿರೋಧಿಸಿದ್ದಾರೆ.
ಚಿರಂಜೀವಿ ಬೆಂಬಲದೊಂದಿಗೆ ಚುನಾವಣೆಗೆ ಧುಮುಕಲಿರುವ ಪ್ರಕಾಶ್ ರೈ
ನಟನೆ ಗೌರವಿಸುತ್ತೇವೆ, ಅಧಿಕಾರ ಕೊಡಲ್ಲ
''ಪ್ರಕಾಶ್ ರಾಜ್ ಅದ್ಭುತ ನಟ, ಸಾಕಷ್ಟು ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ. ಅವರ ಕಲೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಅವರ ನಟನೆಯನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡ್ತೇವೆ, ಪ್ರಶಸ್ತಿ ಕೊಟ್ಟು ಗೌರವಿಸುತ್ತೇವೆ. ಆದರೆ, ಅಧಿಕಾರ ಕೊಡಲು ಸಾಧ್ಯವಿಲ್ಲ. ತೆಲುಗಿನ ಬಹಳಷ್ಟು ನಟರು ಇದ್ದಾರೆ'' ಎಂದು ಕರಾಟೆ ಕಲ್ಯಾಣಿ ಖಂಡಿಸಿದ್ದಾರೆ.
ನಮಗೆ ಆ ಕರ್ಮ ಬಂದಿಲ್ಲ
''ತೆಲುಗು ಕಲಾವಿದ ಸಂಘಕ್ಕೆ ಬೇರೆ ಇಂಡಸ್ಟ್ರಿಯಿಂದ ಕರೆದುಕೊಂಡು ಬಂದು ಅಧ್ಯಕ್ಷ ಮಾಡುವ ಕರ್ಮ ನಮಗೆ ಬಂದಿಲ್ಲ. ಇಲ್ಲಿ ತುಂಬಾ ಜನ ಕಲಾವಿದರು ಇದ್ದಾರೆ. ನಮ್ಮವರೇ ಆ ಸ್ಥಾನಕ್ಕೆ ಕೂರಬೇಕು'' ಎಂದು ಹಿರಿಯ ತೆಲುಗು ನಟ ತ್ರಿಪುರನೇನಿ ಚಿಟ್ಟಿ ಬಾಬು ಸಹ ಟಿವಿ ಚರ್ಚೆಯಲ್ಲಿ ಆಗ್ರಹಿಸಿದರು.
Recommended Video
ನಮ್ಮವರು vs ಬೇರೆಯವರು
ಮೂಲತಃ ಕನ್ನಡದವರಾದ ಪ್ರಕಾಶ್ ರಾಜ್ ಬಹುಭಾಷೆಯಲ್ಲಿ ನಟಿಸಿ ಖ್ಯಾತಿ ಗಳಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಮಾ' ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಪ್ರಕಾಶ್ ರಾಜ್ ಬೆಂಬಲಕ್ಕೆ ತೆಲುಗಿನ ಹಲವು ನಟರ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಿರೋಧಿ ವರ್ಗ ''ಪ್ರಕಾಶ್ ರಾಜ್ ನಮ್ಮ ನೆಲದವರಲ್ಲ, ನಮಗೆ ಅವರು ಬೇಡ'' ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.