Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋವಿಡ್ ಸೋಂಕಿತ ನಟ ರಾಜಶೇಖರ್ ಆರೋಗ್ಯ ಸ್ಥಿತಿ ಗಂಭೀರ
ತೆಲುಗಿನ ಖ್ಯಾತ ನಾಯಕ ನಟ ರಾಜಶೇಖರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು.
ಅಕ್ಟೋಬರ್ 17 ರಂದು ನಟ ರಾಜಶೇಖರ್, ಪತ್ನಿ ಜೀವಿತಾ, ಮಕ್ಕಳಾದ ಶಿವಾನಿ ಮತ್ತು ಶಿವಾತ್ಮಿಕ ಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ಗೊತ್ತಾಗಿತ್ತು. ನಂತರ ರಾಜಶೇಖರ್ ಆರೋಗ್ಯ ಕ್ಷೀಣಿಸುತ್ತಾ ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಜಶೇಖರ್ ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಾಜಶೇಖರ್ ಪುತ್ರಿ ಶಿವಾತ್ಮಿಕ ಸಾಮಾಜಿಕ ಜಾಲತಾಣದಲ್ಲಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 'ಅಪ್ಪ ಕೊರೊನಾ ವೈರಸ್ ಜೊತೆಗೆ ಕಠಿಣವಾದ ಹೋರಾಟ ಮಾಡುತ್ತಿದ್ದಾರೆ' ಎಂದಿದ್ದಾರೆ.
ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ತೆಲುಗು ಮಾಧ್ಯಮಗಳ ಪ್ರಕಾರ, ರಾಜಶೇಖರ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ರಾಜಶೇಖರ್ ಅನ್ನು ವೆಂಟಿಲೇಟರ್ ನ ಸಹಾಯದಲ್ಲಿ ಇರಿಸಲಾಗಿದೆ, ಐಸಿಯು ನಲ್ಲಿ ಸತತ ಚಿಕಿತ್ಸೆಗಳನ್ನು ರಾಜಶೇಖರ್ ಅವರಿಗೆ ನೀಡಲಾಗುತ್ತಿದೆ.
ಕಠಿಣವಾದ ಹೋರಾಟ ನಡೆಸುತ್ತಿದ್ದಾರೆ: ರಾಜಶೇಖರ್ ಪುತ್ರಿ
'ಅಪ್ಪ ಕೊರೊನಾ ಜೊತೆಗೆ ಕಠಿಣವಾದ ಹೋರಾಟದಲ್ಲಿ ನಿರತರಾಗಿದ್ದಾರೆ, ದಯವಿಟ್ಟು ನೀವುಗಳು ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ, ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನಮ್ಮನ್ನು ಗಟ್ಟಿಗೊಳಿಸಬಲ್ಲದು' ಎಂದು ರಾಜಶೇಖರ್ ಪುತ್ರಿ ಟ್ವೀಟ್ ಮಾಡಿದ್ದಾರೆ.
ಅಪ್ಪ ಚೇತರಿಸಿಕೊಳ್ಳುತ್ತಿದ್ದಾರೆ: ಶಿವಾತ್ಮಿಕ
ಮತ್ತೊಂದು ಟ್ವೀಟ್ನಲ್ಲಿ, ಅಪ್ಪ ರಾಜಶೇಖರ್ ಆರೋಗ್ಯ ತುಸು ಸುಧಾರಿಸಿದೆ, ಅವರ ಆರೋಗ್ಯ ಚಿಂತಾಜನಕವಾಗಿ ಏನೂ ಇಲ್ಲ, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾರೂ ರಾಜಶೇಖರ್ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದು ಬೇಡ, ನಮಗೆ ಪ್ರಾರ್ಥನೆ ಮತ್ತು ಧನಾತ್ಮಕತೆ ಬೇಕಷ್ಟೆ ಎಂದು ಹೇಳಿದ್ದಾರೆ ಪುತ್ರಿ ಶಿವಾತ್ಮಿಕಾ ರಾಜಶೇಖರ್.
ಬಾಲಸುಬ್ರಹ್ಮಣ್ಯಂ ಕೊನೆ ಉಸಿರೆಳೆದರು
ಇತ್ತೀಚೆಗಷ್ಟೆ ಭಾರತದ ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ಸೋಂಕಿಗೆ ಗುರಿಯಾಗಿ ಬಹುಕಾಲದ ಹೋರಾಟದ ಬಳಿಕ ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದರು. ಆ ನೆನಪು ಇನ್ನೂ ತಾಜಾ ಇರುವಾಗಲೇ ರಾಜಶೇಖರ್ ಆರೋಗ್ಯ ಸ್ಥಿತಿ ಗಂಭೀರ ಎಂಬ ಸುದ್ದಿ ಬಂದಿದೆ.