Don't Miss!
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆ ನಟಿ ನಿಗೂಢ ಸಾವು, ಮೊಬೈಲಿನಲ್ಲಿ ಸುಳಿವಿಗಾಗಿ ಪೊಲೀಸರು ಸರ್ಚಿಂಗ್!
ತೆಲುಗು ಚಿತ್ರರಂಗ ಹಾಗೂ ಟಿವಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಕಳೆದ ಹಲವು ದಿನಗಳಿಂದ ತನ್ನ ಅಪಾರ್ಟ್ಮೆಂಟ್ ನಿಂದ ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಲಾಕ್ ಡೌನ್ ಕಾರಣದಿಂದ ಹೊರಗೆ ಬಂದಿಲ್ಲದರಬಹುದು ಎಂದು ನೆರೆಮನೆಯವರು ಸುಮ್ಮನಾಗಿದ್ದರು. ಆದರೆ, ಗುರುವಾರದಂದು ಆಕೆ ತಾಯಿ ಕರೆ ಮಾಡಿದರೂ ಉತ್ತರಿಸಿರಲಿಲ್ಲ. ಅನುಮಾನ ಬಂದು ವಾಚ್ಮನ್ ವಿಷಯವನ್ನು ನೆರೆಮನೆಯವರಿಗೆ ತಿಳಿಸಿದ್ದಾನೆ. ನಂತರ ಪೊಲೀಸರಿಗೆ ವಿಷಯ ಮುಟ್ಟಿದೆ. ಹೈದರಾಬಾದಿನ ಯೆಲ್ಲಾರೆಡ್ಡಿಗುಡಾದ ಇಂಜಿನಿಯರ್ಸ್ ಕಾಲೋನಿಯ ಅಪಾರ್ಟ್ಮೆಂಟ್ ನಲ್ಲಿ ನಟಿ ಶಾಂತಿ ಅಲಿಯಾಸ್ ವಿಶ್ವಶಾಂತಿ ಶವವಾಗಿ ಮಲಗಿರುವುದು ಕಂಡು ಬಂದಿದೆ.
ಘಟನಾ ಸ್ಥಳದ ಮಹಜರು ಮಾಡಿದ ಎಸ್ ಆರ್ ನಗರ ಪೊಲೀಸರು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಂತೆ ಶಾಂತಿ ಮದ್ಯಪಾನ ಮಾಡಿರುವುದು ಕಂಡು ಬಂದಿದೆ. ಅತಿಯಾಗಿ ಮದ್ಯ ಸೇವಿಸಿ ಹಾಸಿಗೆಯಿಂದ ಕೆಳಗೆ ನೆಲದ ಮೇಲೆ ಬಿದ್ದಿರಬಹುದು ಎಂದು ಊಹಿಸಲಾಗಿದೆ. ಶವವನ್ನು ಮೊದಲು ಕಂಡ ಪ್ರತ್ಯಕ್ಷದರ್ಶಿಗಳು ಇದೇ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಶಾಂತಿ ಸಾವಿಗೆ ನೈಜ ಕಾರಣ ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ.
ಕೊವಿಡ್19: ಮದ್ಯ ಸಿಗದೆ ನಿದ್ರೆ ಮಾತ್ರೆ ಸೇವಿಸಿದ ಹಿರಿಯ ನಟಿ ಪುತ್ರ
ಘಟನಾ ಸ್ಥಳದಲ್ಲಿ ಸಿಕ್ಕಿರುವ ಮದ್ಯದ ಬಾಟಲಿಗಳು, ಆಕೆ ಅತಿಯಾಗಿ ಮದ್ಯ ಸೇವಿಸಿರಬಹುದು ಎಂಬ ಸಂದೇಹ ಮೂಡುವಂತೆ ಮಾಡಿದೆ. ಪೊಲೀಸರು ಕೂಡಾ ಇದೇ ಅನುಮಾನದಿಂದ ಈ ಪ್ರಕರಣವನ್ನು ನೋಡುತ್ತಿದ್ದಾರೆ.
ಮದ್ಯವ್ಯಸನಿಯಾಗಿದ್ದರೇ ಶಾಂತಿ?
ಪ್ರಾಥಮಿಕ ತನಿಖಾ ವರದಿಯಂತೆ ಶಾಂತಿ ಸಾಯುವುದಕ್ಕೂ ಮುನ್ನ ಮದ್ಯಪಾನ ಮಾಡಿದ್ದಾರೆ. ಆದರೆ, ಶಾಂತಿ ದೇಹದಲ್ಲಿರುವ ಆಲ್ಕೋಹಾಲ್ ಅಂಶ ಮಿತಿ ಮೀರಿತ್ತೇ? ಪ್ರಜ್ಞೆ ತಪ್ಪಿ ನೆಲಕ್ಕೆ ತಲೆ ಬಡಿದು ಕೊನೆಯುಸಿರೆಳೆದಿರಬಹುದೇ? ಎಂಬ ನಿಟ್ಟಿನಲ್ಲಿ ತನಿಖೆ ಸಾಗಿದೆ. ಮರಣೋತ್ತರ ಪರೀಕ್ಷೆ ನಂತರ ದೇಹದಲ್ಲಿರುವ ಆಲ್ಕೋಹಾಲ್ ಅಂಶ, ವಿಷಪ್ರಾಶನವಾಗಿದೆಯೇ? ವಿಸೇರಾದಲ್ಲಿ ಏನಿದೆ? ತಲೆ ಅಥವಾ ದೇಹದ ಇತರೆ ಭಾಗಕ್ಕೆ ಮಾರಾಣಾಂತಿಕ ಪೆಟ್ಟು ಬಿದ್ದಿದೆಯೆ? ಎಂಬುದು ತಿಳಿದು ಬರಲಿದೆ.
ನೆರೆಮನೆಯವರ ಹೇಳಿಕೆ
32 ವರ್ಷ ವಯಸ್ಸಿನ ನಟಿ ಶಾಂತಿ ಬಗ್ಗೆ ನೆರೆಮನೆಯವರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಆಕೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ, ನೋಡಿದಾಗ ಸ್ಮೈಲ್ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಹೊರಗಡೆ ಬಂದಿರಲಿಲ್ಲ. ಹೀಗಾಗಿ ಅನುಮಾನ ಮೂಡಿ, ಅಪಾರ್ಟ್ಮೆಂಟ್ ಅಸೋಸಿಯೇಷನ್ ಮುಖ್ಯಸ್ಥರಿಗೆ ತಿಳಿಸಿದೆವು. ಆಕೆ ಮದ್ಯವ್ಯಸನಿಯಾಗಿದ್ದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮದ್ಯ ಸೇವಿಸಿ ರಾದ್ಧಾಂತ ಮಾಡಿದ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ.
ಘಟನಾ ಸ್ಥಳದಲ್ಲಿ ಸಿಕ್ಕಿರುವ ಮೊಬೈಲ್ ಫೋನ್
ಶಾಂತಿ ನೆಲೆಸಿದ್ದ ಅಪಾರ್ಟ್ಮೆಂಟ್ ಗೆ ಬೇರೆ ಯಾರೂ ಬಂದು ಹೋಗಿರುವ ಮಾಹಿತಿಯಿಲ್ಲ. ಶವ ಸಿಕ್ಕ ಸ್ಥಳದಲ್ಲಿ ಒಂದು ಮೊಬೈಲ್ ಫೋನ್ ಸಿಕ್ಕಿದೆ. ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತ ಪ್ರದೇಶದ ಸಿಸಿಟಿವಿ ಫುಟೇಜ್ ಕೂಡಾ ಪರಿಶೀಲಿಸಲಾಗುತ್ತಿದೆ. ಸಿಆರ್ ಪಿಸಿ ಸೆಕ್ಷನ್ 174 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಬೈಲ್ ಫೋನ್ ಸದ್ಯ ಲಾಕ್ ಆಗಿದ್ದು, ಸೈಬರ್ ಕ್ರೈಂ ವಿಭಾಗದ ನೆರವು ಪಡೆದು ಅದರಲ್ಲಿರುವ ಡೇಟಾದಲ್ಲಿ ಏನಾದರೂ ಸುಳಿವು ಸಿಗುವುದೋ ಎಂದು ಪೊಲೀಸರು ನೋಡುತ್ತಿದ್ದಾರೆ.
ವಿಶಾಖಪಟ್ಟಣಂ ಮೂಲದ ನಟಿ ಶಾಂತಿ
ಶಾಂತಿ ಸಾವಿನ ಬಗ್ಗೆ ಆಕೆಯ ಪೋಷಕರಿಗೆ ಪೊಲೀಸರು ತಿಳಿಸಿದ್ದಾರೆ. ಇಂಜಿನಿಯರ್ಸ್ ಕಾಲೋನಿಯ ಅಪಾರ್ಟ್ಮೆಂಟ್ ನ ಐದನೇ ಮಹಡಿಯಲ್ಲಿ ಬಂಧು ಮಿತ್ರ ರೋದನ ಮುಗಿಲು ಮುಟ್ಟಿದೆ. ಕೆಲವು ಟಿವಿ ಶೋ, ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಶಾಂತಿ ತಮ್ಮ ಊರು ವಿಶಾಖಪಟ್ಟಣಂಗೆ ಬಿಡುವುದ್ದಾಗ ಮಾತ್ರ ಹೋಗಿ ಬರುತ್ತಿದ್ದರು ಎಂದು ತಿಳಿದು ಬಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಸಿಗದೆ ನಿದ್ದೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿರುವ ನಟ, ಗಾಯಕಿ ಭೂಪತಿ(ದಿವಂಗತ ನಟಿ ಮನೋರಮಾ ಪುತ್ರ) ಪ್ರಕರಣ ಕಣ್ಮುಂದೆ ಇರುವಾಗ ಈ ಘಟನೆ ಸಿನಿಮಾರಂಗವನ್ನು ಬೆಚ್ಚಿ ಬೀಳಿಸಿದೆ.