Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಳೆಯ ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ದೂರು ನೀಡಿದ ನಟ ಆಲಿ!
ತೆಲುಗು ಹಾಸ್ಯನಟ ಆಲಿ ಮತ್ತು ನಾಯಕ ನಟ ಪವನ್ ಕಲ್ಯಾಣ್ ಮಧ್ಯೆ ಇರುವ ಸ್ಸನೇಹ ತೆಲುಗು ಸಿನಿ ಅಭಿಮಾನಿಗಳಿಗೆ ಗೊತ್ತಿರುವುದೇ.
Recommended Video
ಪವನ್ ಕಲ್ಯಾಣ್ ಅವರ ಮೊದಲ ಸಿನಿಮಾದಿಂದ ಹಿಡಿದು ಬಹುತೇಕ ಎಲ್ಲಾ ಸಿನಿಮಾಗಳಲ್ಲಿಯೂ ಆಲಿ ಪಾತ್ರ ಮಾಡಿದ್ದಾರೆ. ಪೂರ್ಣ ಪಾತ್ರ ಮಾಡಲು ಆಗದಿದ್ದ ಸಮಯದಲ್ಲಿ ಸಣ್ಣ ದೃಶ್ಯದಲ್ಲಾದರೂ ಕಾಣಿಸಿ ಮರೆಯಾಗಿದ್ದಾರೆ ಆಲಿ.
ದಶಕಗಳ ಈ ಸ್ನೇಹ ಇತ್ತೀಚೆಗೆ ತುಸು ಹಳಸಿದೆ. ಅದರಲ್ಲಿಯೂ ಪವನ್ ಕಲ್ಯಾಣ್ ರಾಜಕೀಯಕ್ಕೆ ಬಂದ ನಂತರ ಇಬ್ಬರ ನಡುವೆ ದೊಡ್ಡ ಬಿರುಕು ಮೂಡಿದೆ. ಅದು ಈಗ ಪೊಲೀಸ್ ಠಾಣೆ ಮೆಟ್ಟಿಲೇರುವವರೆಗೂ ಬಂದಿದೆ.
ಹಳಸಿದ ಆಲಿ-ಪವನ್ ಸ್ನೇಹ
ನಟ ಆಲಿ ಬಗ್ಗೆ ಪವನ್ ಕಲ್ಯಾಣ್ ಅಭಿಮಾನಿಗಳು ಸಿಟ್ಟಾಗಿದ್ದು, ಆಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ಗಳು, ಪೋಸ್ಟ್ಗಳು ಪವನ್ ಕಲ್ಯಾಣ್ ಅಭಿಮಾನಿಗಳಿಂದ ಹೆಚ್ಚಾಗುತ್ತಿವೆ. ಇದರ ಬಗ್ಗೆ ನಟ ಆಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ದೂರು ದಾಖಲಿಸಿದ ನಟ ಆಲಿ
ನಟ ಆಲಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಪೋಸ್ಟ್ ಮಾಡಿದವರ, ಹಾಗೂ ತಮ್ಮ ಹೆಸರಲ್ಲಿ ನಕಲಿ ಖಾತೆ ತೆರೆದು ಪೋಸ್ಟ್ ಮಾಡುತ್ತಿರುವವರ ವಿರುದ್ಧ ದೂರು ದಾಖಲಿದ್ದಾರೆ. ಇದರ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದಾರೆ.
ನಕಲಿ ಖಾತೆಯಿಂದ ಪವನ್ ಕಲ್ಯಾಣ್ಗೆ ಶುಭಾಶಯ
ಇತ್ತೀಚೆಗೆ ಆಲಿ ಅವರ ನಕಲಿ ಖಾತೆಯಿಂದ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬಕ್ಕೆ ಮುಂದಾಗಿ ಶುಭಾಶಯ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಪವನ್ ಅಭಿಮಾನಿಗಳು ಗೆಳೆಯ ಕಷ್ಟದಲ್ಲಿದ್ದಾಗ ನೀವು ಜೊತೆಗೆ ನಿಲ್ಲವೆಂದು ಬೈಯಲು ಪ್ರಾರಂಭಿಸಿದ್ದರು. ಇದು ದೊಡ್ಡದಾಗಿ ಬೆಳೆದಾಗ ಆಲಿ ದೂರು ನೀಡಿದರು.
ಆಲಿ ಬಗ್ಗೆ ಪವನ್ ಕಲ್ಯಾಣ್ ಮಾತುಗಳು
ಪವನ್ ಕಲ್ಯಾಣ್ ಒಮ್ಮೆ ಕಷ್ಟದಲ್ಲಿದ್ದಾಗ ಗೆಳೆಯ ಜೊತೆಗೆ ನಿಲ್ಲಲಿಲ್ಲ. ನಾನು ಅವರಿಗೆ ಜೀವನ ನೀಡಿದೆ ಆದರೆ ಆತ ನನಗೆ ಮೋಸ ಮಾಡಿದ ಎಂದು ಆಲಿ ಹೆಸರು ಹೇಳದೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಲಿ, ಯಾರು ಯಾರಿಗೆ ಜೀವನ ನೀಡಿದರು ಎಂಬುದನ್ನು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದರು. ಅಂದಿನಿಂದ ಪವನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಆಲಿ.