ಮತ್ತೊಬ್ಬ ಧಾರಾವಾಹಿ ನಟನಿಗೆ ಕೊರೊನಾ ಪಾಸಿಟಿವ್
ತೆಲುಗಿನ ಧಾರಾವಾಹಿ ನಟರು ಒಬ್ಬರ ಹಿಂದೊಬ್ಬರಂತೆ ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ.
Recommended Video
ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕನ್ನಡತಿ, ಮೈಸೂರು ಮೂಲದ ನವ್ಯಾ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ಪತ್ತೆಯಾಗಿತ್ತು. ನಂತರ ಆಕೆಯ ಸಹನಟನಿಗೂ ಕೊರೊನಾ ಪಾಸಿಟಿವ್ ಆಗಿತ್ತು.
ಈಗ ಮತ್ತೊಬ್ಬ ಧಾರಾವಾಹಿ ನಟ ಭಾರಧ್ವಾಜ ರಂಗವಜ್ಜುಲ ಅವರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಭಾರಧ್ವಜ ಅವರು 'ಸ್ವಾತಿಚಿನುಕುಲು' ಎಂಬ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು.
ತಮಗೆ ಕೊರೊನಾ ಸೋಂಕು ದೃಢವಾಗಿರುವ ಬಗ್ಗೆ ವಿಡಿಯೋ ಮೂಲಕ ಹೇಳಿರುವ ಭಾರಧ್ವಜ, 'ನನಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಆದರೆ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ. ಹಾಗಾಗಿ ನಾನು ಮನೆಯಲ್ಲಿಯೇ ಇಸೋಲೇಶನ್ಗೆ ಒಳಗಾಗಿದ್ದೇನೆ' ಎಂದಿದ್ದಾರೆ.

ಮುಂದುವರೆದು, ಯಾರೂ ಆತಂಕಗೊಳ್ಳಬೇಡಿ, ಸುಳ್ಳು ಸುದ್ದಿ ಹಬ್ಬಿಸಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸುರಕ್ಷತವಾಗಿರಿ ಎಂದು ಅವರು ಮನವಿ ಮಾಡಿದ್ದಾರೆ.
ಭಾರಧ್ವಜ ಅವರಿಗೆ ಮುನ್ನಾ ನಟಿ ನವ್ಯಾ ಸ್ವಾಮಿ, ನಟ ಹರಿಕೃಷ್ಣ, ರವಿ ಕೃಷ್ಣ, ಪ್ರಭಾಕರ್ ಅವರುಗಳು ಕೊರೊನಾ ಸೋಂಕಿಗೆ ಗುರಿಯಾಗಿದ್ದರು. ಇವರಲ್ಲಿ ಹಲವರು ಈಗಾಗಲೇ ಗುಣಮುಖವಾಗಿದ್ದಾರೆ.


Click it and Unblock the Notifications











