Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೈದರಾಬಾದ್ ಗೆ ಬಾ, ಚಿಲ್ ಮಾಡೋಣ: ರಶ್ಮಿಕಾ ಗೆ ವಿಜಯ್ ದೇವರಕೊಂಡ ಕರೆ
ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ಖ್ಯಾತ ನಟ ವಿಜಯ್ ದೇವರಕೊಂಡ ಬಹು ಆತ್ಮೀಯರು ಎಂಬುದು ಗೊತ್ತಿರುವ ಸಂಗತಿಯೇ.
ಇಂಥಹುದರಲ್ಲಿ ರಶ್ಮಿಕಾ ಮಂದಣ್ಣ ಅನ್ನು ವಿಜಯ್ ದೇವರಕೊಂಡ ಹೈದರಾಬಾದ್ ಗೆ ಕರೆದಿದ್ದಾರೆ. 'ಹೈದರಾಬಾದ್ ಗೆ ವಾಪಸ್ ಬಾ, ಚಿಲ್ ಮೋಡೋಣ' ಎಂದಿರುವ ದೇವರಕೊಂಡ. ರಶ್ಮಿಕಾ ಅವರನ್ನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ.
ವಿಜಯ್ ದೇವರಕೊಂಡ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು
ಆದರೆ ಇದರ ಬಗ್ಗೆ ಅನ್ಯತಾ ಭಾವಿಸುವಂತಿಲ್ಲ. ವಿಜಯ್ ದೇವರಕೊಂಡ ಹೇಳಿರುವುದು ತಾವು ಮಾತ್ರವಲ್ಲ ಗೆಳೆಯರ ಗುಂಪು ರಶ್ಮಿಕಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದು.
ಹುಟ್ಟುಹಬ್ಬಕ್ಕೆ ಕ್ಯೂಟ್ ಆಗಿ ವಿಶ್ ಮಾಡಿದ್ದ ರಶ್ಮಿಕಾ
ಮೇ 9, ವಿಜಯ್ ದೇವರಕೊಂಡ ಹುಟ್ಟಹಬ್ಬವಿತ್ತು. ಅದಕ್ಕೆ ರಶ್ಮಿಕಾ ಅವರು ವಿಜಯ್ ಅವರಿಗೆ ವಿಶ್ ಮಾಡಿದ್ದರು. 'ನನ್ನ ಕಾಮ್ರೆಡ್ ದೇವರಕೊಂಡಗೆ ಹುಟ್ಟುಹಬ್ಬದ ಶುಭಾಶಯಗಳು' ಎಂಬುದು ರಶ್ಮಿಕಾ ಸಂದೇಶವಾಗಿತ್ತು.
'ಹೈದರಾಬಾದ್ಗೆ ವಾಪಸ್ ಬಾ'
ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ, 'ಮಂದಣ್ಣ, ಹೈದರಾಬಾದ್ ಗೆ ವಾಪಸ್ ಬಾ, ನಮ್ಮ ಜೊತೆ ಸಮಯ ಕಳಿ, ಗೆಳೆಯರ ಗ್ಯಾಂಗ್ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ' ಎಂದಿದ್ದಾರೆ.
ದೇವರಕೊಂಡರನ್ನು ದೂರ ಇಟ್ಟರೇ ರಶ್ಮಿಕಾ: ವಿಜಯ್ ಬಗ್ಗೆ ಮಾತನಾಡಲು ಹಿಂದೇಟ್ಹಾಕಿದ್ದೇಕೆ ಕಿರಿಕ್ ನಟಿ?
ಕೊಡಗಿನಲ್ಲಿ ವಾಸವಿದ್ದಾರೆ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಲಾಕ್ಡೌನ್ನಿಂದಾಗಿ ಕೊಡಗಿನ ತಮ್ಮ ನಿವಾಸದಲ್ಲಿದ್ದಾರೆ ಎನ್ನಲಾಗಿದೆ. ಲಾಕ್ಡೌನ್ನಲ್ಲಿ ಹಲವು ಕಾರ್ಯಗಳನ್ನು ಮಾಡುತ್ತಿರುವ ಅವರು, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಹಲವರಿಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ
ರಶ್ಮಿಕಾ ಗೆ ಮಾತ್ರವಲ್ಲದೆ ಹಲವು ನಟ-ನಟಿಯರಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ. ಕರಣ್ ಜೋಹರ್, ಪುರಿ ಜಗನ್ನಾಥ್, ನಟಿ ರಾಶಿ, ರಿತು ವರ್ಮಾ ಇನ್ನೂ ಹಲವರಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ.