"ಮಹೇಶ್ - ಮೌಳಿ ಚಿತ್ರಕ್ಕೆ ಓಪನ್ ಎಂಡ್ ಕ್ಲೈಮ್ಯಾಕ್ಸ್.. ಇದು 'ಇಂಡಿಯಾನಾ ಜೋನ್ಸ್' ಸ್ಟೈಲ್ ಫ್ರಾಂಚೈಸಿ": ವಿಜಯೇಂದ್ರ ಪ್ರಸಾದ್

'RRR' ಸಕ್ಸಸ್ ನಂತರ ರಾಜಮೌಳಿ ತಮ್ಮ ಮುಂದಿನ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಜೊತೆ ಸಿನಿಮಾ ಮಾಡೋದಾಗಿ ಈಗಾಗಲೇ ಜಕ್ಕಣ್ಣ ಹೇಳಿದ್ದಾರೆ. ಹಾಲಿವುಡ್ ಶೈಲಿಯಲ್ಲಿ ಈ ಆಕ್ಷನ್ ಅಡ್ವೆಂಚರಸ್ ಸಿನಿಮಾ ಮೂಡಿ ಬರಲಿದೆ ಎನ್ನುವ ಸುಳಿವು ಸಿಕ್ಕಿದೆ. ಇದೀಗ ವಿಜಯೇಂದ್ರ ಪ್ರಸಾದ್ ಈ ಕ್ರೇಜಿ ಪ್ರಾಜೆಕ್ಟ್ ಬಗ್ಗೆ ಇಂಟ್ರೆಸ್ಟಿಂಗ್ ಅಪ್‌ಡೇಟ್ ಕೊಟ್ಟಿದ್ದಾರೆ.

ಇನ್ನು ಹೆಸರಿಡದ ಈ ಚಿತ್ರವನ್ನು ಸದ್ಯ #SSMB29 ಎಂದೇ ಅಭಿಮಾನಿಗಳು ಕರೆಯುತ್ತಿದ್ದಾರೆ. ಅಂದರೆ ಇದು ಮಹೇಶ್ ಬಾಬು ನಟನೆಯ 29ನೇ ಸಿನಿಮಾ. ಅದ್ಧೂರಿ ಬಜೆಟ್‌ನಲ್ಲಿ ಜಕ್ಕಣ್ಣ ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಲ್ಯಾನ್ ಮಾಡುತ್ತಿದ್ದಾರೆ. ಜಾಗತಿಕವಾಗಿ 'RRR' ಸಿನಿಮಾ ಎಷ್ಟರಮಟ್ಟಿಗೆ ಸದ್ದು ಮಾಡ್ತು ಅನ್ನೋದು ಗೊತ್ತೇಯಿದೆ. ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಹ ಸಿಕ್ಕಿತ್ತು. ಇದರಿಂದ ಮೌಳಿ ಇಮೇಜ್ ಅಂತರಾಷ್ಟ್ರೀಯಮಟ್ಟದಲ್ಲಿ ಹೆಚ್ಚಾಗಿದೆ. ಹಾಗಾಗಿ ಸಹಜವಾಗಿಯೇ ಜಕ್ಕಣ್ಣನ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ.

Vijayendra Prasad Shares crazy Update On Rajamouli, Mahesh babu Film

'RRR' ಸಿನಿಮಾ ಮೂಲಕ ಇಂಡಿಯನ್ ಸಿನಿಮಾ ಮಾರ್ಕೆಟ್ ಅದರಲ್ಲೂ ತೆಲುಗು ಸಿನಿಮಾ ಮಾರ್ಕೆಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿತು. ಇದೀಗ ಮಹೇಶ್‌ ಬಾಬುನ ಹೀರೊ ಮಾಡಿ ಹಾಲಿವುಡ್ ರೇಂಜ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಮೌಳಿ ಸಿನಿಮಾಗಳಿಗೆಲ್ಲಾ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಾ ಬರ್ತಿದ್ದಾರೆ. ಸದ್ಯ #SSMB29 ಚಿತ್ರಕ್ಕೂ ಅವರದ್ದೇ ಕಥೆ ಇರುತ್ತದೆ. ಸಂದರ್ಶನವೊಂದರಲ್ಲಿ ಈ ಸಿನಿಮಾ ವಿಜಯೇಂದ್ರ ಪ್ರಸಾದ್ ಅಪ್‌ಡೇಟ್ ನೀಡಿದ್ದಾರೆ.

Vijayendra Prasad Shares crazy Update On Rajamouli, Mahesh babu Film

ಜುಲೈನಲ್ಲಿ ಚಿತ್ರದ ಸ್ಕ್ರಿಪ್ಟ್ ಪೂರ್ಣ

"ಜುಲೈ ವೇಳೆಗೆ #SSMB29 ಸಿನಿಮಾ ಸ್ಕ್ರಿಪ್ಟ್ ಸಂಪೂರ್ಣವಾಗಿ ಸಿದ್ಧವಾಗುತ್ತದೆ. ಸ್ಕ್ರಿಪ್ಟ್ ಮುಗಿಯುತ್ತಿದ್ದಂತೆ ರಾಜಮೌಳಿ ಕೈಗಿಡುತ್ತೇನೆ. ಇದು ಹಾಲಿವುಡ್ ಸೂಪರ್ ಹಿಟ್ ಫ್ರಾಂಚೈಸಿ 'ಇಂಡಿಯಾನಾ ಜೋನ್ಸ್' ತರಹದ ಸಿನಿಮಾ ಆಗಿರಲಿದೆ. 'ರೈಡರ್ಸ್ ಆಫ್ ದಿ ಲಾಸ್ಟ್ ಆರ್ಕ್'(1981) ರೀತಿ ಬಹಳ ಭಾವದ್ವೇಗದಿಂದ ಕೂಡಿದ ಆಕ್ಷನ್ ಡ್ರಾಮಾ ಸಿನಿಮಾ ಆಗುತ್ತದೆ ಎಂದು ವಿಜಯೇಂದ್ರ ಪ್ರಸಾದ್ ಹಿಂಟ್ ಕೊಟ್ಟಿದ್ದಾರೆ.

"ಓಪನ್ ಎಂಡ್ ಕ್ಲೈಮ್ಯಾಕ್ಸ್" ಇರಲಿದೆ

ಇದೇ ವೇಳೆ ಕಥೆಗಾರ ವಿಜಯೇಂದ್ರ ಪ್ರಸಾದ್ ಮಹೇಶ್- ಮೌಳಿ ಕಾಂಬಿನೇಷನ್‌ ಸಿನಿಮಾ ಬಗ್ಗೆ ಮತ್ತೊಂದು ಕ್ರೇಜಿ ವಿಷಯ ಬಹಿರಂಗಪಡಿಸಿದ್ದಾರೆ. "ಈ ಚಿತ್ರಕ್ಕೆ ಓಪನ್ ಎಂಡ್ ಕೊಡಲಿದ್ದೇವೆ" ಎಂದು ಹೇಳಿದ್ದಾರೆ. ಅಂದರೆ ಕಥೆಯನ್ನು ಮತ್ತೊಂದು ಸಿನಿಮಾದಲ್ಲಿ ಮುಂದುವರೆಸಲು ಅವಕಾಶ ಇರುವಂತೆ ಕ್ಲೈಮ್ಯಾಕ್ಸ್ ಡಿಸೈನ್ ಮಾಡುತ್ತಿದ್ದಾರಂತೆ. ಅಂದರೆ ಸಿನಿಮಾ ಸೀಕ್ವೆಲ್ ಮಾಡಲು ಅವಕಾಶ ಇರುವಂತೆ ಕಥೆ ಇರಲಿದೆ. ಆ ಮೂಲಕ ಮುಂದೆ ಈ ಕಥೆಯನ್ನು ವಿಸ್ತರಿಸುವ ಬಗ್ಗೆ ಹೇಳಿದ್ದಾರೆ. KGF ಚಾಪ್ಟರ್‌- 2 ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಕೊಟ್ಟು ಚಾಪ್ಟರ್‌- 3 ಬಗ್ಗೆ ಕುತೂಹಲ ಹುಟ್ಟುಹಾಕಿದ ತಂತ್ರವನ್ನು ಇಲ್ಲೂ ಬಳಸಲಾಗುತ್ತಿದೆ.

'ಗುಂಟೂರು ಖಾರಂ' ಚಿತ್ರದಲ್ಲಿ ಪ್ರಿನ್ಸ್

ಮಹೇಶ್ ಬಾಬು ಸದ್ಯಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಗುಂಟೂರು ಖಾರಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಂದಷ್ಟು ಗೊಂದಲಗಳಿಂದ ಈ ಸಿನಿಮಾ ಪದೇ ಪದೇ ಸುದ್ದಿ ಆಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವರ್ಷ ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಶೂಟಿಂಗ್ ತಡವಾಗಿ ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ತೆರೆಗೆ ತರುವುದಾಗಿ ಘೋಷಿಸಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಶ್ರೀಲೀಲಾ ನಾಯಕಿಯರಾಗಿ ನಟಿಸ್ತಿದ್ದಾರೆ. ಈ ಸಿನಿಮಾ ನಂತರ ಮೌಳಿ ಚಿತ್ರಕ್ಕೆ ಟಾಲಿವುಡ್ ಪ್ರಿನ್ಸ್ ಕೈ ಜೋಡಿಸಲಿದ್ದಾರೆ.

ಹಾಲಿವುಡ್ ಕಲಾವಿದರು, ತಂತ್ರಜ್ಞರು

ಈಗಾಗಲೇ ರಾಜಮೌಳಿ ತಮ್ಮ ಸಿನಿಮಾಗಳಲ್ಲಿ ಹಾಲಿವುಡ್ ಕಲಾವಿದರು ಹಾಗೂ ತಂತ್ರಜ್ಞರನ್ನು ಕರೆತಂದಿದ್ದಾರೆ. ಮಹೇಶ್ ಬಾಬು ಕಾಂಬಿನೇಷನ್ ಚಿತ್ರಕ್ಕೂ ಹಾಲಿವುಡ್ ಹಾಲಿವುಡ್ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಈ ಬಾರಿ ಸ್ಟಾರ್ ನಟರೇ ಮೌಳಿ ನಿರ್ದೇಶನದಲ್ಲಿ ನಟಿಸುವ ಸಾಧ್ಯತೆಯಿದೆ. ಅದಕ್ಕಾಗಿ ಜಕ್ಕಣ್ಣ ಭಾರೀ ಪ್ಲ್ಯಾನ್ ಕೂಡ ಮಾಡಿದ್ದಾರೆ.

More from Filmibeat

English summary
Vijayendra Prasad Shares crazy Update On Rajamouli, Mahesh babu Film. He also said that #SSMB29 story will be having an open-ended climax. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X