Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರಾಂತಿ-ಪ್ರೀತಿ ಎರಡರ ಬಣ್ಣವೂ ಕೆಂಪು: ಬರುತ್ತಿದೆ 'ವಿರಾಟ ಪರ್ವಂ'
'ನಕ್ಸಲಿಸಮ್' ಕುರಿತಾಗಿ 1990-2000 ದಶಕದಲ್ಲಿ ಕೆಲವಾರು ಸಿನಿಮಾಗಳು ಈಗಾಗಲೇ ಬಂದಿವೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ಕುರಿತು ಸಿನಿಮಾ ಬಂದಿರುವುದು ಕಡಿಮೆ. ಬದಲಾದ ರಾಜಕೀಯ ಪರಿಸ್ಥಿತಿಯೂ ಇದಕ್ಕೆ ಕಾರಣ ಇರಬಹುದು.
ಇದೀಗ ನಕ್ಸಲಿಸಮ್ ಕುರಿತಾಗಿ ಸಿನಿಮಾ ಒಂದು ತೆಲುಗಿನಲ್ಲಿ ತೆರೆಗೆ ಬರುತ್ತಿದೆ. ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ, ಪ್ರಿಯಾಮಣಿ ಅಂಥಹಾ ದೊಡ್ಡಪಾತ್ರವರ್ಗ ಹೊಂದಿರುವ 'ವಿರಾಟ ಪರ್ವಂ' ಹೆಸರಿನ ಈ ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಕೆರಳಿಸಿದೆ.
'ವಿರಾಟ ಪರ್ವಂ' ಕೇವಲ ನಕ್ಸಲಿಸಮ್ ಕತೆಯಲ್ಲ ಬದಲಿಗೆ ಉತ್ಕಟ ಪ್ರೇಮ, ನಕ್ಸಲಿಸಮ್ ಹಾಗೂ ವಿಚಾರಗಳ ಸಂಘರ್ಷವುಳ್ಳ ಸಿನಿಮಾ ಎಂಬುದು ಟ್ರೇಲರ್ನಲ್ಲಿಯೇ ಗೊತ್ತಾಗಿದೆ.
ನಕ್ಸಲ್ ನಾಯಕನ ಪ್ರೇಮದಲ್ಲಿ ಬೀಳುವ ಸಾಯಿ ಪಲ್ಲವಿ ಪಾತ್ರ ಆತನಿಗಾಗಿ ಕುಟುಂಬವನ್ನು ಬಿಟ್ಟು ಕಾಡು ಸೇರುತ್ತಾಳೆ. ಆತನ ಬಂಡಾಯದ ವಿಚಾರಧಾರೆಯುಳ್ಳ ಕವನಗಳು ಸಾಯಿ ಪಲ್ಲವಿಗೆ ಆತನಲ್ಲಿ ಅನುರಕ್ತಳಾಗುವಂತೆ ಮಾಡುತ್ತವೆ. ಸಾಯಿ ಪಲ್ಲವಿ ಕಾಡು ಸೇರಿದ ಮೇಲೆ ಏನಾಗುತ್ತದೆ ಎಂಬುದು ಕತೆ.
ಟ್ರೇಲರ್ ನೋಡಿದರೆ ಇದೊಂದು 'ಅಮೂರ್ತ' ಕತೆಯುಳ್ಳ ಸಿನಿಮಾ ಎಂಬ ಅನುಮಾನ ಮೂಡಿಸುತ್ತದೆ. ಟ್ರೇಲರ್ನಲ್ಲಿ ಪೊಲೀಸರು ಸಾಯಿ ಪಲ್ಲವಿಯ ತಪಾಸಣೆ ಮಾಡುತ್ತಿರುವ ದೃಶ್ಯವೊಂದಿದೆ. ನಕ್ಸಲ್ ಪ್ರಭಾವದ ಪ್ರದೇಶದಲ್ಲಿ ಪೊಲೀಸರು ದೌರ್ಜನ್ಯವನ್ನು ತೋರಿಸುವ ಪ್ರಯತ್ನ ಸಿನಿಮಾದಲ್ಲಿ ಮಾಡಲಾಗಿರುವುದು ಈ ದೃಶ್ಯದಿಂದ ಗೊತ್ತಾಗುತ್ತಿದೆ.
Recommended Video
'ವಿರಾಟ ಪರ್ವಂ' ಸಿನಿಮಾವನ್ನು ವೇಣು ದುಗ್ಗಲ ನಿರ್ದೇಶನ ಮಾಡಿದ್ದಾರೆ. ಡಿ ಸುರೇಶ್ ಬಾಬು, ಸುಧಾಕರ್ ಚೆರುಕುರಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ, ಪ್ರಿಯಾಮಣಿ, ನಂದಿತಾ ದಾಸ್ ಇನ್ನೂ ಇತರರು ನಟಿಸಿದ್ದಾರೆ. ಸಿನಿಮಾವು ಏಪ್ರಿಲ್ 30 ರಂದು ಬಿಡುಗಡೆ ಆಗಲಿದೆ.