Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹೇಶ್ ಬಾಬು ಹೊಸ ಚಿತ್ರಕ್ಕೆ ಆಕೆಯೇ ಹೀರೋಯಿನ್ ಆಗಲಿ': ಪ್ರಿನ್ಸ್ ಪತ್ನಿ ಸೂಚಿಸಿದ್ದು ಯಾರನ್ನು?
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲು ಗೆದ್ದು ಬೀಗಿರುವ ಈ ಚಿತ್ರ 200 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ.
ಈ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ವಂಶಿ ಜೊತೆ ಮಹೇಶ್ ಬಾಬು ಸಿನಿಮಾ ಮಾಡುತ್ತಿದ್ದಾರೆ. ಪ್ರಿನ್ಸ್ ನಟನೆಯ 27ನೇ ಇದಾಗಿದ್ದು, ಈ ಚಿತ್ರಕ್ಕೆ ಹೀರೋಯಿನ್ ಯಾರಾಗಬಹುದು ಎಂಬ ಕುತೂಹಲ ಮೂಡಿದೆ.
ಅಲ್ಲು ಅರ್ಜುನ್ ಜೊತೆಗಿನ ಕದನ: ಪ್ರಿನ್ಸ್ ಮಹೇಶ್ ಬಾಬು ಬಾಯ್ಬಿಟ್ಟಿದ್ದೇನು.?
ಇದೀಗ, ಮಹೇಶ್ ಬಾಬು ಪತ್ನಿ ನಮ್ರತಾ ತಮ್ಮ ಪತಿಯ ಹೊಸ ಚಿತ್ರಕ್ಕೆ ನಾಯಕಿಯನ್ನು ಸೂಚಿಸಿದ್ದು, ಈ ನಟಿಯನ್ನೇ ಆಯ್ಕೆ ಮಾಡಿಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೂ, ಮಹೇಶ್ ಪತ್ನಿ ಸೂಚಿಸಿದ ನಟಿ ಯಾರು? ಮುಂದೆ ಓದಿ...
'ಮಹರ್ಷಿ' ಡೈರೆಕ್ಟರ್ ಜೊತೆ ಸಿನಿಮಾ
ಮಹರ್ಷಿ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ವಂಶಿ ಪೈದಿಪಲ್ಲಿ ಜೊತೆ ಮಹೇಶ್ ಬಾಬು ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಈ ಮಧ್ಯೆ ಹೀರೋಯಿನ್ ವಿಷಯ ಸದ್ದು ಮಾಡ್ತಿದೆ.
ಅಲ್ಲು ಎದುರಲ್ಲಿ ತಮನ್ 'ಫೇಕ್ ಕಲೆಕ್ಷನ್' ಹೇಳಿಕೆ: ಮಹೇಶ್ ಬಾಬು ಫ್ಯಾನ್ಸ್ ಗರಂ
ನಮ್ರತಾ ಸೂಚಿಸಿದ ನಟಿ ಇವರೇ
ಮಹೇಶ್ ಬಾಬು ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳು ಹಂತದಲ್ಲಿ ನಮ್ರತಾ ಅವರ ಪಾತ್ರವೂ ಇರಲಿದೆ ಎನ್ನುವುದು ಟಾಲಿವುಡ್ನಲ್ಲಿ ತಿಳಿದಿರುವ ಸಂಗತಿ. ಇದೀಗ, 27ನೇ ಚಿತ್ರಕ್ಕೆ ಬಾಲಿವುಡ್ ನಟಿ ಕೈರಾ ಅಡ್ವಾನಿ ಹೆಸರು ಸೂಚಿಸಿರುವ ನಮ್ರತಾ, ಈಕೆ ಉತ್ತಮ ಜೋಡಿ ಎಂದಿದ್ದಾರಂತೆ.
ಬುಕ್ ಮೈ ಶೋನಲ್ಲಿ ಮಹೇಶ್, ಅಲ್ಲು, ರಕ್ಷಿತ್, ರಜನಿಗಿಂತ ಹೆಚ್ಚು ರೇಟಿಂಗ್ ಸಿಕ್ಕಿದ್ದು ಆ ಚಿತ್ರಕ್ಕೆ!
ಭರತ್ ಅನೇ ನೇನು ನಾಯಕಿ!
ಕೈರಾ ಅಡ್ವಾನಿ ಈ ಹಿಂದೆ ಮಹೇಶ್ ಬಾಬು ಜೊತೆ ಭರತ್ ಅನೇ ನೇನು ಸಿನಿಮಾ ಮಾಡಿದ್ದರು. ಕೈರಾಗೆ ಈ ಚಿತ್ರ ಮೊದಲ ತೆಲುಗು ಸಿನಿಮಾ. ಸಿನಿಮಾನೂ ಹಿಟ್ ಆಗಿತ್ತು. ಕೈರಾಗೂ ಅದೃಷ್ಟ ತಂದಿತ್ತು. ಇದಾದ ಬಳಿಕ ರಾಮ್ ಚರಣ್ ಜೊತೆ ಒಂದು ಸಿನಿಮಾ ಮಾಡಿದ್ದರು. ಈಗ ಬಾಲಿವುಡ್ನಲ್ಲಿ ಕೈರಾ ಬ್ಯುಸಿಯಾಗಿದ್ದಾರೆ.
'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?
ವಂಶಿ ಕೂಡ ಗ್ರೀನ್ ಸಿಗ್ನಲ್!
ಮಹೇಶ್ ಬಾಬು ಅವರ ಪತ್ನಿ ನಮ್ರತಾ ಅವರ ಸಲಹೆಯನ್ನು ಸ್ವೀಕರಿಸಿರುವ ನಿರ್ದೇಶಕ ವಂಶಿ, ಕೈರಾ ಅಡ್ವಾನಿಯನ್ನು ಅಪ್ರೋಚ್ ಮಾಡಲು ನಿರ್ಧರಿಸಿದ್ದಾರಂತೆ. ಸದ್ಯಕ್ಕೆ ಕೈರಾ ಹಿಂದಿಯಲ್ಲಿ ನಾಲ್ಕು ಸಿನಿಮಾ ಮಾಡುತ್ತಿದ್ದಾರೆ. ಈ ಕಡೆ ಮಹೇಶ್ ಬಾಬು ಸಿನಿಮಾ ಎಂಬ ಕಾರಣಕ್ಕೆ ಮತ್ತೆ ಕಾಲ್ ಶೀಟ್ ಕೊಟ್ಟರೂ ಕೊಡಬಹುದು. ಪಕ್ಕಾ ಆಗುತ್ತಾ ಎಂದು ಕಾದುನೋಡಬೇಕಿದೆ.