ಚಲನಚಿತ್ರಗಳ ಒಳನೋಟ
ವಿಷ್ಣುವರ್ಧನ್ ಮತ್ತು ಅಂಬರೀಶ್ ನಂತರ ಕಿಚ್ಚ ಸುದೀಪ್ ಮತ್ತು ದರ್ಶನ್ ಕನ್ನಡ ಚಿತ್ರರಂಗದಲ್ಲಿ ದಿಗ್ಗಜರು ಎನಿಸಿಕೊಂಡಿದ್ದರು. ಆದರೆ, 2017ರ ಮಾರ್ಚ್ ೫ರಂದು ಇವರಿಬ್ಬರ ಸ್ನೇಹ ಮುರಿದು ಬಿದ್ದಿತ್ತು. 5 ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಶಾಕಿಂಗ್ ಪೋಸ್ಟ್ ನಿದನ್ನು ಹಂಚಿಕೊಂಡಿದ್ದರು. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಸುದೀಪ್ ಮತ್ತು ದರ್ಶನ ಇನ್ಮುಂದೆ ಸ್ನೇಹಿತರಾಗಿಲ್ಲ ಹೇಳುವ ಪೋಸ್ಟ್ ಆಗಿತ್ತು. ಇದನ್ನು ಕಂಡ ಅವರ ಅಭಿಮಾನಿ ಬಳಗ ಹಾಗೂ ಕನ್ನಡ ಚಿತ್ರರಂಗ ದೊಡ್ಡ ಶಾಕ್ ಗೆ ಒಳಾಗಾಗಿತ್ತು. ಇದೀಗ ಐದು ವರ್ಷಗಳ ಬಳಿಕ ದರ್ಶನ್ ಅವರು ಸುದೀಪ್ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು, ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದೆ. ಹಾಗಾದರೆ, ಸುದೀಪ್ ಹಾಗೂ ದರ್ಶನ್ ಸ್ನೇಹ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.