twitter
    X
    Home ಚಲನಚಿತ್ರಗಳ ಒಳನೋಟ

    ನಟ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ನೇಹ ಮುರಿದು ಬೀಳಲು ಕಾರಣಗಳಿವು!

    Author Sowmya Bairappa | Updated: Sunday, August 27, 2023, 08:49 AM [IST]

    ವಿಷ್ಣುವರ್ಧನ್ ಮತ್ತು ಅಂಬರೀಶ್ ನಂತರ ಕಿಚ್ಚ ಸುದೀಪ್ ಮತ್ತು ದರ್ಶನ್ ಕನ್ನಡ ಚಿತ್ರರಂಗದಲ್ಲಿ ದಿಗ್ಗಜರು ಎನಿಸಿಕೊಂಡಿದ್ದರು. ಆದರೆ, 2017ರ ಮಾರ್ಚ್ ೫ರಂದು ಇವರಿಬ್ಬರ ಸ್ನೇಹ ಮುರಿದು ಬಿದ್ದಿತ್ತು. 5 ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಶಾಕಿಂಗ್ ಪೋಸ್ಟ್ ನಿದನ್ನು ಹಂಚಿಕೊಂಡಿದ್ದರು. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಸುದೀಪ್ ಮತ್ತು ದರ್ಶನ ಇನ್ಮುಂದೆ ಸ್ನೇಹಿತರಾಗಿಲ್ಲ ಹೇಳುವ ಪೋಸ್ಟ್ ಆಗಿತ್ತು. ಇದನ್ನು ಕಂಡ ಅವರ ಅಭಿಮಾನಿ ಬಳಗ ಹಾಗೂ ಕನ್ನಡ ಚಿತ್ರರಂಗ ದೊಡ್ಡ ಶಾಕ್ ಗೆ ಒಳಾಗಾಗಿತ್ತು. ಇದೀಗ ಐದು ವರ್ಷಗಳ ಬಳಿಕ ದರ್ಶನ್ ಅವರು ಸುದೀಪ್ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು, ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದೆ. ಹಾಗಾದರೆ, ಸುದೀಪ್ ಹಾಗೂ ದರ್ಶನ್ ಸ್ನೇಹ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

    cover image
    ಸುದೀಪ್ -ದರ್ಶನ್ ಸ್ನೇಹ ಬಿರುಕಾಗಲು ಮೆಜೆಸ್ಟಿಕ್ ಕಾರಣ

    ಸುದೀಪ್ -ದರ್ಶನ್ ಸ್ನೇಹ ಬಿರುಕಾಗಲು ಮೆಜೆಸ್ಟಿಕ್ ಕಾರಣ

    1

    ಕಿಚ್ಚ ಸುದೀಪ್ ಮೇಲೆ ನಟ ದರ್ಶನ್ ಅವರಿಗೆ ಬೇಸರವಾಗಲು ಕಾರಣವಾಗಿರುವುದು ದರ್ಶನ್ ಅಭಿನಯದ ಮೊದಲ ಸಿನಿಮಾ ಮೆಜೆಸ್ಟಿಕ್. ಈ ಚಿತ್ರಕ್ಕೆ ಸಂಬಂಧಿಸಿದಂತೆ ಸುದೀಪ್ ಅವರು ಕೊಟ್ಟಿದ್ದ ಒಂದು ಹೇಳಿಕೆ ದರ್ಶನ್ ಬೇಸರಕ್ಕೆ ಕಾರಣವಾಗಿತ್ತು. 

    ಸುದೀಪ್ ಕೊಟ್ಟಿದ್ದ ಹೇಳಿಕೆ ಏನು?

    ಸುದೀಪ್ ಕೊಟ್ಟಿದ್ದ ಹೇಳಿಕೆ ಏನು?

    2

    2002ರಲ್ಲಿ ತೆರೆಕಂಡ ಮೆಜೆಸ್ಟಿಕ್ ಸಿನಿಮಾ ದರ್ಶನ್ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ಈ ವೇಳೆಗಾಗಲೇ ಸುದೀಪ್ ಸ್ಪರ್ಶ, ಹುಚ್ಚ ಸಿನಿಮಾಗಳಿಂದ ಕರ್ನಾಟಕದ ಮನೆಮಾತಾಗಿದ್ದರು. ಸುದೀಪ್ 2017ರಲ್ಲಿ ಸಂದರ್ಶನವೊಂದರಲ್ಲಿ ಮೆಜೆಸ್ಟಿಕ್ ಸಿನಿಮಾ ಮೊದಲು ನನಗೆ ಬಂದಿತ್ತು. ನಾನು ಆಗ ಬ್ಯುಸಿ ಇದ್ದೆ. ಹಾಗಾಗಿ,ದರ್ಶನ್ ಅವರ ಬಳಿ ಮಾಡಿಸಿ ಎಂದು ನಾನೇ ಹೇಳಿದ್ದೆ ಎಂದು ಹೇಳಿದ್ದರು. ಈ ಹೇಳಿಕೆ ದರ್ಶನ್ ಬೇಸರಕ್ಕೆ ಕಾರಣವಾಗಿತ್ತು.  

    ಸ್ಪಷ್ಟಿಕರಣ ನೀಡಲಿ ಎಂದಿದ್ದ ಚಾಲೆಂಜಿಂಗ್ ಸ್ಟಾರ್

    ಸ್ಪಷ್ಟಿಕರಣ ನೀಡಲಿ ಎಂದಿದ್ದ ಚಾಲೆಂಜಿಂಗ್ ಸ್ಟಾರ್

    3

    ಸುದೀಪ್ ಹೇಳಿಕೆಯ ವಿಡಿಯೋ ವೀಕ್ಷಿಸಿದ ದರ್ಶನ್, ಈ ಹೇಳಿಕೆಗೆ ಸುದೀಪ್ ಅವರು ಸ್ಪಷ್ಟಿಕರಣ ನೀಡಲಿ. ಅದು ಹೇಗೆ ಅವರಿಂದ ನನಗೆ ಆ ಅವಕಾಶ ಸಿಕ್ತು ಎಂದು ತಿಳಿಸಲಿ ಎಂದಿದ್ದರು. ಜೊತೆಗೆ ನನಗೆ ಮೆಜೆಸ್ಟಿಕ್ ಸಿನಿಮಾ ಸಸಿಗಳು ಕಾರಣ ಪಿ.ಏನ್.ಸತ್ಯ ಮತ್ತು ನಿರ್ಮಾಪಕ ಎಂ.ಜೆ.ರಾಮಮೂರ್ತಿ. ಸುದೀಪ್ ಅವರಲ್ಲ ಎಂದು ಹೇಳಿದ್ದರು. 

    ಸುದೀಪ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ

    ಸುದೀಪ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ

    4

    ದರ್ಶನ್ ಸರಣಿ ಟ್ವೀಟ್ ಗಳ ಮೂಲಕ ಸುದೀಪ್ ಮೇಲೆ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಸಂಬಂಧಪಟ್ಟಂತೆ ನಟ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 

    ನಾವಿಬ್ಬರೂ ಗೆಳೆಯರಲ್ಲ ಎಂದ ದಾಸ

    ನಾವಿಬ್ಬರೂ ಗೆಳೆಯರಲ್ಲ ಎಂದ ದಾಸ

    5

    ಕನ್ನಡ ಚಿತ್ರರಂಗಕ್ಕೆ ಒಟ್ಟಿಗೆ ಎಂಟ್ರಿಕೊಟ್ಟ ಸುದೀಪ್ ಹಾಗೂ ದರ್ಶನ್ ಎಲ್ಲೇ ಹೋದರೂ ಕೂಡ ಒಟ್ಟಿಗೆ ಹೋಗುತ್ತಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಮಾರ್ಚ್ ೫ರಂದು ದರ್ಶನ್ ಒಂದು ಟ್ವೀಟ್ ಮಾಡಿದರು. ಈ ಟ್ವೀಟ್ ನಲ್ಲಿ ನಾನು ಗೆಳೆಯರಲ್ಲ. ನಾವು ಕನ್ನಡ ಚಿತ್ರರಂಗದ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ ಎಂದಿದ್ದರು.  

    ಅಭಿಮಾನಿಗಳಿಗೆ ಶಾಕ್

    ಅಭಿಮಾನಿಗಳಿಗೆ ಶಾಕ್

    6

    ದರ್ಶನ್ ಹಾಗೂ ಸುದೀಪ್ ಸ್ನೇಹದ ಬಿರುಕು ಅಭಿಮಾನಿಗಳಿಗೆ ಶಾಕ್ ಉಂಟು ಮಾಡಿತ್ತು. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಸುದೀಪ್ ಮತ್ತು ದರ್ಶನ ಇನ್ಮುಂದೆ ಸ್ನೇಹಿತರಾಗಿಲ್ಲ ಎಂಬುದು ಅಭಿಮಾನಿಗಳು ಹಾಗೂ ಚಿತ್ರರಂಗದವರಿಗೆ ಬೇಸರ ಉಂಟು ಮಾಡಿತ್ತು. ಇಂದು ಮುಂದೆ ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ವಾರ್ ಗೂ ಕಾರಣವಾಗಿತ್ತು. ಇದರ ನಡುವೆ ಆನೇಕ ಅಭಿಮಾನಿಗಳು ಈ ಕಲಾವಿದರಿಬ್ಬರು ಒಂದಾಗಲಿ ಇಂದು ಬಯಸುತ್ತಿದ್ದರು. ತಮ್ಮ ಬಯಕೆಯನ್ನು ಕಾಮೆಂಟ್ ಮೂಲಕ ವ್ಯಕತಪಡಿಸುತ್ತಿದ್ದರು.  

    ದರ್ಶನ್ ಪರ ನಿಂತ ಕಿಚ್ಚ ಸುದೀಪ್

    ದರ್ಶನ್ ಪರ ನಿಂತ ಕಿಚ್ಚ ಸುದೀಪ್

    7

    ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಕುರಿತು ಪೋಸ್ಟ್ ನಟ ಕಿಚ್ಚ ಸುದೀಪ್ ಮೂರು ಪುಟಗಳ ಪೋಸ್ಟ್ ಹಂಚಿಕೊಂಡಿದ್ದರು. ಈ ಮೂಲಕ ಗೆಳೆಯನ ಬೆನ್ನಿಗೆ ನಿಂತಿದ್ದರು. ದರ್ಶನ್‌ ದೂರವಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಬೆಂಬಲಕ್ಕೆ ನಿಂತಿದ್ದರು.  ನಾನು ನೋಡಿದ ಆ ವಿಡಿಯೊ ಮನಸ್ಸನ್ನು ಕೆಡಿಸಿತ್ತು, ಘಟನೆಗೆ ಸಂಬಂಧವೇ ಇಲ್ಲದ ಚಿತ್ರದ ನಾಯಕಿ ಹಾಗೂ ಇನ್ನಿತರು ವೇದಿಕೆ ಮೇಲಿದ್ದರು. ಅವರನ್ನು ಅವಮಾನಿಸಿದ್ದು ಕನ್ನಡಿಗರು ಇಷ್ಟು ನ್ಯಾಯಸಮ್ಮತವಲ್ಲದ ರೀತಿ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದ ಎಂದು ಕಿಚ್ಚ ಬರೆದಿದ್ದರು. 

    ಕಿಚ್ಚನಿಗೆ ಧನ್ಯವಾದ ತಿಳಿಸಿದ ದಚ್ಚು

    ಕಿಚ್ಚನಿಗೆ ಧನ್ಯವಾದ ತಿಳಿಸಿದ ದಚ್ಚು

    8

    ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಕುರಿತು ಪೋಸ್ಟ್ ನಟ ಕಿಚ್ಚ ಸುದೀಪ್ ಮೂರು ಪುಟಗಳ ಪೋಸ್ಟ್ ಹಂಚಿಕೊಂಡಿದ್ದರು. ಈ ಮೂಲಕ ಗೆಳೆಯನ ಬೆನ್ನಿಗೆ ನಿಂತಿದ್ದರು. ದರ್ಶನ್‌ ದೂರವಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಬೆಂಬಲಕ್ಕೆ ನಿಂತಿದ್ದರು.  ನಾನು ನೋಡಿದ ಆ ವಿಡಿಯೊ ಮನಸ್ಸನ್ನು ಕೆಡಿಸಿತ್ತು, ಘಟನೆಗೆ ಸಂಬಂಧವೇ ಇಲ್ಲದ ಚಿತ್ರದ ನಾಯಕಿ ಹಾಗೂ ಇನ್ನಿತರು ವೇದಿಕೆ ಮೇಲಿದ್ದರು. ಅವರನ್ನು ಅವಮಾನಿಸಿದ್ದು ಕನ್ನಡಿಗರು ಇಷ್ಟು ನ್ಯಾಯಸಮ್ಮತವಲ್ಲದ ರೀತಿ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದ ಎಂದು ಕಿಚ್ಚ ಬರೆದಿದ್ದರು. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X