X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್ ಮನೆಯ ಎಕ್ಕಡ ತಿಂದು ಮಾತಾಡ್ತಿಯಲ್ಲೋ ಎಂದ ಮಾನಸ; ಇತ್ತ ಜಗದೀಶ್ ಬೆಂಬಲಕ್ಕೆ ನಿಂತ ನೆಟ್ಟಿಗರು!

Author Sowmya Bairappa | Published: Thursday, October 17, 2024, 11:24 AM [IST]

ಬಿಗ್‌ಬಾಸ್ ಕನ್ನಡ ಸೀಸನ್ 11ರಿಂದ ಲಾಯರ್ ಜಗದೀಶ್ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕಲರ್ಸ್ ಕನ್ನಡ ವಾಹಿನಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿಲ್ಲ. ಮೂರನೇ ವಾರ ದೊಡ್ಮನೆಯಲ್ಲಿ ಇಡೀ ಮನೆ ಒಂದು, ಜಗದೀಶ್ ಅವರೇ ಒಂದು ಅನ್ನೋ ತರಹ ಆಗಿದೆ. ಬಿಗ್‌ಬಾಸ್‌ ಮನೆಯ ಪ್ರತಿಯೊಬ್ಬ ಸದಸ್ಯರು ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ, ಇನ್ನು ಕೆಲವರು ಅವರನ್ನು ಸಾಕಷ್ಟು ಪ್ರವೋಕ್ ಮಾಡುತ್ತಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಜಗದೀಶ್ ಟ್ರೆಂಡ್ ಆಗಿದ್ದಾರೆ.


cover image
'ಬಿಗ್‌ಬಾಸ್ ಎಕ್ಕಡ ತಿಂದು...ಅವರಿಗೆ ಮಾತಾಡ್ತೀಯಾ'

ಕಳೆದ ಸಂಚಿಕೆಯಲ್ಲಿ ಕ್ಯಾಪ್ಟನ್ ಶಿಶಿರ್ ಅವರು ಭವ್ಯಾ ಬಗ್ಗೆ ವಿವರಣೆ ಕೊಡುತ್ತಿದ್ದರು. ಆಗ ಲಾಯರ್ ಜಗದೀಶ್ ಇದು 'ಗ್ರೂಪಿಸಂ' ಅಂದರು. ಅದಕ್ಕೆ ತುಕಾಲಿ ಮಾನಸಾ, ಎಲ್ಲರದಕ್ಕೂ ಬಾಯಿ ಹಾಕ್ತೀರಲ್ಲ ಅಂತ ತಿರುಗೇಟು ನೀಡಿದರು. ಆಗ ಜಗದೀಶ್ ನನ್ನಿಷ್ಟ ನೀನ್ಯಾರು ಮಾತನಾಡೋಕೆ? ಎಂದರು. ಅದಕ್ಕೆ ಮಾನಸ, ಏಯ್..ಹೋಗಯ್ಯ...ಮನೆ ಬಿಟ್ಟು ಹೋಗ್ತೀನಿ ಅಂತೀಯಾ...ಮಾನ-ಮಾರ್ಯಾದೆ ಇಲ್ಲದೆ ಮತ್ತೆ ಬಂದು ಕೂತಿದ್ಯಾ ಅಂತ ಚುಚ್ಚಿದಾಗ, ಜಗದೀಶ್ ನೀನು ಬೊಗಳೋದನ್ನು ಕರ್ನಾಟಕ ನೋಡುತ್ತಿದೆ ಎಂದರು. ಅದಕ್ಕೆ ಮಾನಸ, ನಿನ್ನ ಯೋಗ್ಯತೆಯನ್ನೂ ಕರ್ನಾಟಕದ ಜನತೆ ನೋಡ್ತಾರೆ. ಬಿಗ್‌ಬಾಸ್ ಎಕ್ಕಡ ತಿಂದು...ಅವರಿಗೆ ಮಾತಾಡ್ತೀಯಾ ಅಂದು ಗುಡುಗಿದರು. 

ಮಾನಸಾ, ತ್ರಿವಿಕ್ರಮ್ & ಜಗದೀಶ್ ನಡುವೆ ಮಾತಿನ ಚಕಮಕಿ

ಇದರಿಂದ ಬೇಸತ್ತ ಜಗದೀಶ್ 'ನಾನು ಯಾರ ಎಕ್ಕಡ ತಿನ್ನೋಕೂ ಬಂದಿಲ್ಲ' ಅಂತ ಕ್ಯಾಮರಾ ಮುಂದೆ ಬಂದು ಮಾತನಾಡಲು ಆರಂಭಿಸಿದರು. ಆಗ ಉಗ್ರಂ ಮಂಜು ಕ್ಯಾಮರಾಗೆ ಅಡ್ಡ ಬಂದರು. ಈ ಸಂದರ್ಬ ತ್ರಿವಿಕ್ರಮ್ '72 ಕ್ಯಾಮರಾ ನಮಗೂ ಇದೆ, ನಮಗೇನು ಮಾತಾಡೋಕೆ ಬರಲ್ವಾ? ಅಂತ ಕಿಡಿಕಾರಿದ್ರು. ಅದಕ್ಕೆ ಜಗದೀಶ್ 'ಮಾತಾಡ್ಕೋ ...ನಿನ್ನ ಯಾವನು ಕೇಳ್ದಾ? ಅಂದರು. ಆಗ ತ್ರಿವಿಕ್ರಮ್ 'ನಾಮಿನೇಟ್ ಆದವರೇ ಸುಮ್ಮನಿದ್ದಾರೆ. ನೀನು ಯಾಕೋ ತೂರಿಸಿಕೊಂಡು ಬಂದೆ ಅಂತ ಜೋರಾದರು. ಆಗ ಮಾನಸಾ, ತ್ರಿವಿಕ್ರಮ್ ಹಾಗೂ ಜಗದೀಶ್ ನಡುವೆ ಮಾತಿನ ಚಕಮಕಿ ನಡೆಯಿತು. 

ಹಿಂದೆಯಿಂದ ಜಗದೀಶ್ ಅವರನ್ನು ತಳ್ಳಿದ ರಂಜಿತ್

ಅಲ್ಲಿಯವರೆಗೂ ಮಾತಲ್ಲಿ ನಡೆಯುತ್ತಿದ್ದ ಜಗಳ ಗಲಾಟೆ-ತಳ್ಳಾಟದವರೆಗೂ ಹೋಯ್ತು. ಹೆಣ್ಮಕ್ಕಳ ಬಗ್ಗೆ ಮಾತನಾಡಬೇಕಾದರೆ ಅಂತ ಉಗ್ರಂ ಮಂಜು ಹೇಳುತ್ತಿದ್ದಂತೆ, ನೀನೇನು ಜಿಪಿಎ ಹೋಲ್ಡರಾ? ಅಂತ ಜಗದೀಶ್ ಪ್ರಶ್ನಿಸಿಸುತ್ತಾ ಹತ್ತಿರಕ್ಕೆ ಬಂದರು. ಆಗ ಉಗ್ರಂ ಮಂಜು ಅವರನ್ನು ತಳ್ಳಿದರು. ಈ ಸಂದರ್ಭ ಏಕವಚನದಲ್ಲಿ ವಾಕ್ಸಮರ ನಡೆದು, ಪರಿಸ್ಥಿತಿ ಕೈಮೀರುವ ಹಂತ ತಲುಪಿತು. ಸಿಟ್ಟಿಗೆದ್ದ ಉಗ್ರಂ ಮಂಜು 'ಆಚೆ ಹೋದ್ಮೆಲೆ ನೀನು ಸಿಗೋ....ನೀನು ಕರೆದ ಜಾಗಕ್ಕೆ ನಾನು ಬರುತ್ತೇನೆ ಅಂತ ತೊಡೆ ತಟ್ಟಿದರು. ಇದೇ ಸಮಯದಲ್ಲಿ ರಂಜಿತ್ ಅವರು ಜಗದೀಶ್ ಅವರನ್ನು ಹಿಂದೆಯಿಂದ ತಳ್ಳಿದರು. ಈ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗ್ತಿದೆ. 

ಮತ್ತಷ್ಟು ಪ್ರಮೋಕ್ ಮಾಡಿದ ಸ್ಫರ್ಧಿಗಳು

ನೂಕಾಟ ಜೋರಾಗುತ್ತಿದ್ದಂತೆ ಬಿಗ್‌ಬಾಸ್ ಸದ್ದು ಎಲ್ಲರೂ ತುಟಿಕ್ ಪಿಟಿಕ್ ಅನ್ನೇದೆ ಸೋಫಾ ಮೇಲೆ ಕುಳಿತುಕೊಳ್ಳಿ ಅಂತ ಗದರಿಸಿದರು. ಆನಂತರ ಕೆಲ ಸಮಯದ ಬಳಿಕ ಜಗದೀಶ್ ಸ್ವಿಮ್ಮಿಂಗ್ ಪೂಲ್ ಹತ್ತಿರ ಸುಮ್ಮನೆ ಕುಳಿತಿದ್ದರು. ಆಗ ಉಗ್ರಂ ಮಂಜು ಜಿಮ್ ಏರಿಯಾ ಬಳಿ ಬಂದು  'ಬಂದು ಡಂಬಲ್ಸ್ ಎತ್ತೋಕೆ ಹೇಳು... ಅಂತ ಕೆಣಕಿದರು. ಬೇಬಿ ಡಂಬಲ್ಸ್ ಇನ್ನೂ ಬಂದಿಲ್ಲ ಅಂತ ಅವರನ್ನು ಮತ್ತಷ್ಟು ಪ್ರವೋಕ್ ಮಾಡಿದರು. ಜೊತೆಗೆ ಕೆಲ ಸ್ಪರ್ಧಿಗಳು ಹಾಡುಗಳನ್ನು ಹೇಳುತ್ತಾ ಜಗದೀಶ್ ಅವರನ್ನು ಇನ್ನಷ್ಟು ಉರಿಸುತ್ತಿದ್ದರು. ನಂತರ ಸೋಫಾ ಮೇಲೆ ಜಗದೀಶ್ ಮಲಗಿದ್ದರು. ಈ ವಿಚಾರವಾಗಿ ಮಂಜು, ಗೌತಮಿ ಹಾಗೂ ಮೋಕ್ಷಿತಾ ಕ್ಯಾಪ್ಟನ್ ಶಿಶಿರ್‌ಗೆ ಎಚ್ಚರಿಸಿದರು. ಆಗ ಅಲ್ಲಿಗೂ  ಉಗ್ರಂ ಮಂಜು ಬಂದರು. ಈ ವೇಳೆ ಜಗದೀಶ್ 'ಲೇ ಮಂಜು...ನೀನು ಹುಚ್ಚಾಟ ಆಡಬೇಡ. ನನ್ನ ತಾಳ್ಮೆ ಪರೀಕ್ಷಿಸಬೇಡ. ನನ್ನ ತಾಳ್ಮೆ ಕಟ್ಟೆ ಒಡೆದರೆ..? ನನಗೆ ಬಿಗ್‌ಬಾಸ್ ಬೇಕಾಗಿಲ್ಲ. ನಿನಗೆ ಬೇಕಾಗಿದೆ. ನಾನು ಹೋಕೋಕೂ ರೆಡಿ. ಇಲ್ಲಿಯವರೆಗು ತಡೆದುಕೊಂಡಿದ್ದೇನೆ ಅಂತ ಅವಾಜ್ ಹಾಕಿದರು. ಈ ವೇಳಿ ಇಬ್ಬರ ನಡುವೆ ಕಿತ್ತಾಟ ನಡೆಯಿತು. 

ಉಗ್ರಂ ಮಂಜು ವಿರುದ್ಧ ಆಕ್ರೋಶ

ಸದ್ಯ ಲಾಯರ್ ಜಗದೀಶ್ ಅವರನ್ನು ಕೆಣುಕುತ್ತಿದ್ದ ಉಗ್ರಂ ಮಂಜು ಹಾಗೂ ಕೆಲವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದ ಆಕ್ರೋಶ ವ್ಯಕ್ತವಾಗುತ್ತಿದೆ.  ಇಡೀ ಮನೆಯ ಗಲಾಟೆಯನ್ನು ಆರಂಭ ಮಾಡಿದ್ದೇ ಉಗ್ರಂ ಮಂಜು. ನಂತರ ರಂಜಿತ್. ಬಳಿಕ ಮಂದುವರೆಸಿದ್ದು ತ್ರಿವಿಕ್ರಮ್. ಜಗ್ಗು vs ಗುಳ್ಳೇನರಿ ಗ್ಯಾಂಗ್ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+