ಚಲನಚಿತ್ರಗಳ ಒಳನೋಟ
ಕಿಚ್ಚ ಸುದೀಪ್ ಇಲ್ಲದೇ ಬಿಗ್ಬಾಸ್ ಸೀಸನ್ 11ರ ಒಂದು ವೀಕೆಂಡ್ ಮುಕ್ತಾಯವಾಗಿದೆ. ತಾಯಿ ಅಗಲಿಕೆಯ ನೋವಿನಲ್ಲಿರುವ ಅಭಿನಯ ಚಕ್ರವರ್ತಿ 'ವಾರದ ಕಥೆ ಕಿಚ್ಚನ ಜೊತೆ' ಹಾಗೂ 'ಸೂಪರ್ ಸಂಡೇ ವಿತ್ ಸುದೀಪ' ಎಪಿಸೋಡ್ಗಳ ಚಿತ್ರೀಕರಣಕ್ಕೆ ಹಾಜರ್ ಆಗಲಿಲ್ಲ. ಆದರೆ, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟ ಸೃಜನ್ ಲೋಕೇಶ್ ಎರಡು ಸಂಚಿಕೆಗಳ ನೇತೃತ್ವ ವಹಿಸಿ ನಡೆಸಿಕೊಟ್ಟಿದ್ದಾರೆ. ಈ ವಾರ ಎಲಿಮಿನೇಷನ್ ಇರಲಿದೆಯೋ ಇಲ್ಲವೋ ಎಂಬುದು ಹಲವರಿಗೆ ಅನುಮಾನ ಮೂಡಿಸಿತ್ತು. ಆದ್ರೀಗ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ.