X
ಹೋಮ್ ಚಲನಚಿತ್ರಗಳ ಒಳನೋಟ

ನಿಮಗೆ ಎರಡನೇ ಚಾನ್ಸ್ ನೀಡಲ್ಲ: ವಿನಯ್‌ ಗೌಡಗೆ ಸುದೀಪ್ ಖಡಕ್ ಎಚ್ಚರಿಕೆ

Author Sowmya Bairappa | Published: Monday, January 1, 2024, 01:28 PM [IST]

ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಮನೆಯವರಿಗೆಲ್ಲಾ ಒಂದು ಟಾಸ್ಕ್ ನೀಡಿದ್ದರು. ಇದರ ಪ್ರಕಾರ, ಬಿಗ್‌ಬಾಸ್ ಜರ್ನಿಯನ್ನು ಗಮನದಲ್ಲಿಟ್ಟುಕೊಂಡು ಒಬ್ಬರಿಗೆ ಏಣಿ ಹಾಗೂ ಮತ್ತೊಬ್ಬರಿಗೆ ಹಾವಿನ ಸ್ಥಾನ ನೀಡಬೇಕಿತ್ತು. ಏಣಿ ಎಂದರೆ ಮೇಲಕ್ಕೇರಲು ಸಹಾಯ ಮಾಡಿದವರು. ಹಾವು ಎಂದರೆ ಹಿನ್ನಡೆ ಉಂಟು ಮಾಡಿದವರು. ಈ ಸಂದರ್ಭ ವಿನಯ್ ನೀಡಿದ ಕಾರಣಕ್ಕೆ ಸುದೀಪ್ ಗರಂ ಆಗಿದ್ದಾರೆ.


cover image
ಸುದೀಪ್ ಬೇಸರ

ಹಾವು-ಏಣಿ ಚಟುವಟಿಯಲ್ಲಿ ವಿನಯ್ ಅವರು, ನಮ್ರತಾರನ್ನು ಏಣಿಯಾಗಿ ಆಯ್ಕೆ ಮಾಡಿದರು. ನಂತರ ಹಾವಿಗೆ ಕಾರ್ತಿಕ್ ಅವರನ್ನು ತೆಗೆದುಕೊಂಡು ಪಾಸಿಟಿವ್ ವೇನಲ್ಲಿ ವಿವರಣೆ ನೀಡಿದರು. ಇದು ಸುದೀಪ್‌ಗೆ ಇಷ್ಟವಾಗಲಿಲ್ಲ. ಹಾವು ಎಂದಾಗ ನೆಗೆಟಿವ್ ವಿಚಾರವನ್ನೇ ತೆಗೆದುಕೊಳ್ಳಬೇಕು ಎಂದರು. ಇದರಿಂದ ಗೊಂದಲಕ್ಕೆ ಒಳಗಾದ ವಿನಯ್, ಕಾರ್ತಿಕ್ ಅವರಲ್ಲಿ ನೆಗೆಟಿವ್ ವಿಚಾರ ಏನಿದೆ ಎಂದು ಹೇಳಲು ಪ್ರಯತ್ನಿಸಿದರು. ಸುದೀಪ್‌ ಅವರು ಪದೇ ಪದೇ ಕೇಳಿದರೂ ಅವರಿಂದ ಸರಿಯಾದ ಉತ್ತರ ಬರಲಿಲ್ಲ. ಇದರಿಂದ ಸುದೀಪ್ ಬೇಸರಗೊಂಡರು. ಬ್ರೇಕ್‌ ವೇಳೆ ಮೈಕಲ್, ಸರಿಯಾಗಿ ವಿವರಣೆ ನೀಡು ಗುರು' ಅಂತ ವಿನಯ್‌ಗೆ ತಿಳಿಸಿದರು. 

ಎರಡನೇ ಚಾನ್ಸ್ ನೀಡಲ್ಲ

ಎಲ್ಲಾ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹೇಳಿದ ಮೇಲೆ ವಿನಯ್, ಸುದೀಪ್‌ ಅವರಿಗೆ ಮತ್ತೆ ವಿವರಣೆ ಕೊಡಲು ಅವಕಾಶ ಕೇಳಿದರು. ಆದರೆ, ಸುದೀಪ್ ಇದಕ್ಕೆ ಅವಕಾಶ ನೀಡಲೇ ಇಲ್ಲ. ನಿಮಗೆ ಎರಡನೇ ಚಾನ್ಸ್ ನೀಡಲ್ಲ ಅಂತ ಖಡಕ್ ಆಗಿ ಹೇಳಿದರು. ಇದರಿಂದ ವಿನಯ್‌ಗೆ ಮುಖಭಂಗವಾಯಿತು. 

 

ಸಮಯ ವ್ಯರ್ಥವಾಯಿತು

ಹಾವು-ಏಣಿ ರೌಂಡ್ ಮುಗಿದ ಮೇಲೆ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿದ ಸುದೀಪ್, ನೀವು ಒಬ್ಬರಿಗೊಬ್ಬರು ಫೇವರ್ ಮಾಡುತ್ತಿದ್ದೀರಾ ಅಷ್ಟೇ. ನೀವು ಯಾರೂ ಸಹ ಗೇಮ್ ಆಡುತ್ತಿಲ್ಲ ಎಂದು ಕಟುವಾಗಿ ಹೇಳಿದರು. ಇಂಥವರು ನನ್ನೊಟ್ಟಿಗೆ ಕೂತು ಮಾತನಾಡ್ತಾರೆ. ಇಂಥವರು ನನ್ನ ಹೆಸರು ತೆಗೆದುಕೊಂಡಿದ್ದಾರೆ. ನಾನು ಸಹ ಅವರ ಹೆಸರು ತೆಗೆದುಕೊಳ್ಳಬೇಕು. ಇಲ್ಲವಾದ್ರೆ ಬೇಜಾರಾಗ್ತಾರೆ ಅಂತ ಹೆದರಿಕೊಂಡು ನೀವು ಹೆಸರಗಳನ್ನು ಹೇಳುತ್ತಿದ್ದೀರಿ.  ನೀವು ಯಾರ ಹೆಸರು ಹೇಳಲಿದ್ದೀರಿ ಅಂತ ನನಗೂ ಸೇರಿದಂತೆ ಪ್ರೇಕ್ಷಕರಿಗೆ ಗೊತ್ತಿತ್ತು. ಸುಮ್ಮನೆ ಈ ಪ್ರಕ್ರಿಯೆ ನಡೆಸಿಮ ಸಮಯ ವ್ಯರ್ಥವಾಯಿತು ಅಷ್ಟೇ ಅಂದರು. 

ನೀನು ಚುಚ್ಚಿ ಮಾತಾಡಿದರೇನೆ ಚೆಂದ

ಚಟುವಟಿಕೆ ಮುಗಿದ ನಂತರ ಸಂಗೀತಾ, ಹಿಂದಿನ ವಾರ ಆಗಿದ್ದರೆ ಹಾವಿಹೆ ನಾನು ನಿನ್ನ ಹೆಸರು, ನೀನು ನನ್ನ ಹೆಸರು ತೆಗೆದುಕೊಳ್ಳುತ್ತಿದ್ದೆವು ಎಂದರು. ಅದಕ್ಕೆ ವಿನಯ್ ಕೂಡ ನಿಜ ಎಂದರು. ಆಗ ಮೈಖಲ್, ಮಗಾ ನೀನು ಚುಚ್ಚಿ ಮಾತಾಡಿದರೇನೆ ಚೆಂದ, ಅದೇ ನಿನ್ನ ಸ್ಟೈಲ್. ಅದನ್ನು ನೋಡಿಯೇ ಜನ ಇಷ್ಟಪಡ್ತಾರೆ. ನೀನು ಹಾಗೆಯೇ ಇರಬೇಕು ಎಂದರು.  

 

ಶೈನ್ ಶೆಟ್ಟಿಗೆ ಕ್ರೆಡಿಟ್ ಹೋಗ್ಬೇಕು

ಮೈಕಲ್ ಮಾತಿಗೆ ಉತ್ತರಿಸಿದ ವಿನಯ್, ಅಗ್ರೆಸ್ಸಿವ್ ಎಲ್ಲಾ ಬೇಡ ಎಂದರು. ಈ ಬದಲಾವಣೆಗೆ ಕಾರಣವೇನು? ಎಂದಾಗ, ಕಳೆದ ವಾರ ಬಂದ ಎಚ್ಚರಿಕೆಗಳು ಇದಕ್ಕೆ ಕಾರಣ. ಶೈನ್ ಶೆಟ್ಟಿಗೆ ಕ್ರೆಡಿಟ್ ಹೋಗ್ಬೇಕು ಎಂದರು. ಕಳೆದ ವಾರಾಂತ್ಯದಲ್ಲಿ ಬಿಗ್‌ಬಾಸ್‌ ಮನೆಗೆ ಬಂದಿದ್ದ ಶೈನ್ ಶೆಟ್ಟಿ, ಫಿಸಿಕಲ್ ಟಾಸ್ಕ್‌ನಲ್ಲಿ ಅಗ್ರೆಷನ್‌ನಿಂದ ಏಟು, ಪೆಟ್ಟುಗಳಾಗಿವೆ. ಅದು ಮತ್ತೆ ಮರುಕಳಿಸಿದ್ರೆ ಬಿಗ್‌ಬಾಸ್‌ ಸ್ಟ್ರಿಕ್ಟ್ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತೆ. ಅದರಿಂದ ನೀವು ನೇರವಾಗಿ ಎಲಿಮಿನೇಟ್ ಕೂಡ ಆಗಬಹುದು. ನಿಮ್ಮನ್ನ ನೀವು ಬದಲಾಯಿಸಿಕೊಳ್ಳೋಕೆ ಇದು ಫೈನಲ್ ಅವಕಾಶ. ಅಗ್ರೆಷನ್ ನಿಮ್ಮ ಹತೋಟಿಯಲ್ಲಿರಲ್ಲಿ ಎಂದು ಎಚ್ಚರಿಕೆ ನೀಡಿದ್ದರು. ವಿನಯ್‌ಗೆ ಖುದ್ದಾಗಿ ಹೇಳಿದ್ದರು. ಹೀಗಾಗಿ ವಿನಯ್ ತಮ್ಮ ಆಟದ ವರಸೆ ಬದಲಿಸಿಕೊಂಡಿದ್ದಾರೆ. 

 

ಯೋಗ್ಯತೆಯಿದ್ದರೆ ಎದೆಗೆ ಒದ್ದು ನೋಡು

ಕಲರ್ಸ್ ಕನ್ನಡದವರು ಇಂದಿನ ಎಪಿಸೋಡ್‌ನ ಪ್ರೋಮೋವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಕಳೆದ ಎರಡು ವಾರಗಳಿಂದ ಸೈಲೆಂಟ್ ಆಗಿದ್ದ ವಿನಯ್ ಮತ್ತೆ ವೈಲೆಂಟ್ ಆಗಿದ್ದಾರೆ. ಹೊಸ ಆಟದಲ್ಲಿ ಬಿಗ್‌ಬಾಸ್ ಎಲ್ಲರಿಗೂ ತಮ್ಮ ಬೆಲೆಯನ್ನು ನಿಗದಿ ಮಾಡಿಕೊಳ್ಳಲು ಸೂಚಿಸಿದ್ದರು. ಈ ವೇಳೆ ವಿನಯ್, ಕಾರ್ತಿಕ್, ಸಂಗೀತಾ ಹಾಗೂ ತನಿಷಾ ನಡುವೆ ಕಿತ್ತಾಟ ನಡೆದಿದೆ. ರೊಚ್ಚಿಗೆದ್ದ ತನಿಷಾ, ಯೋಗ್ಯತೆ ಇದ್ದರೆ ಎದೆಗೆ ಒದ್ದು ನೋಡು ಅಂತ ವಿನಯ್‌ಗೆ ಆವಾಜ್ ಹಾಕಿದ್ದಾರೆ. 

 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+