X
ಹೋಮ್ ಚಲನಚಿತ್ರಗಳ ಒಳನೋಟ

ಬಳೆ ವಿವಾದದಿಂದ ಫ್ಯಾಮಿಲಿಗೆ ಸಮಸ್ಯೆ: ಸತ್ಯ ತಿಳಿದು ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ವಿನಯ್ ಗೌಡ

Author Sowmya Bairappa | Published: Wednesday, November 29, 2023, 01:09 PM [IST]

ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳಿಗೆ ಹೊರ ಜಗತ್ತಿನಲ್ಲಾಗುವ ವಿಷಯಗಳ ಬಗ್ಗೆ ಅರಿವೇ ಇರುವುದಿಲ್ಲ. ಒಂದೊಂದು ಬಾರಿ ಹೊರಗಡೆ ಜನರ ಮನಸ್ಸಿನಲ್ಲಿ ತಾವು ಹೇಗೆ ಕಾಣಿಸಿಕೊಳುತ್ತೇವೆ ಎಂಬ ಕಲ್ಪನೆ ಕೂಡ ಇರುವುದಿಲ್ಲ. ಆದರೆ, ಮಂಗಳವಾರದ ಸಂಚಿಕೆಯಲ್ಲಿ ದೊಡ್ಮನೆಯ ಪ್ರಬಲ ಸ್ಪರ್ಧಿಯಾಗಿರುವ ವಿನಯ್ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.


cover image
ಬಳೆ ವಿವಾದ

ಆರಂಭದಲ್ಲಿ ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಪದೇ ಪದೇ ಬಳೆ ವಿಷಯ ಪ್ರಸ್ತಾಪಿಸುವ ಮೂಲಕ ಹಲವು ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ವಿನಯ್‌ ಅವರು ಕಾರ್ತಿಕ್‌ಗೆ ಬಳೆಗಳ ರಾಜ ಎಂದಿದ್ದರು. ಜೊತೆಗೆ ಟಾಸ್ಕ್‌ ವೇಳೆ ಗಂಡಸು ಥರ ಆಡು, ಬಳೆಗಳನ್ನು ಹಾಕಿಕೊಂಡು ಹೆಂಗಸು ಥರ ಆಡೋದಲ್ಲ ಅಂತಲೂ ವಿನಯ್ ಹೇಳಿದ್ದರು. ಅವರು ಪದೇ ಪದೇ ಬಳೆ ಅಂತ ಉಲ್ಲೇಖ ಮಾಡುತ್ತಿರುವುದನ್ನು ವೀಕ್ಷಕರು ಖಂಡಿಸಿದ್ದರು. ಇದೇ ವಿಚಾರ ವಾರಾಂತ್ಯದಲ್ಲಿ ಚರ್ಚೆಯಾಗಿ, ವಿನಯ್ ಕ್ಷೇಮೆ ಕೂಡ ಕೇಳಿದ್ದರು. ಆದರೆ, ವಿನಯ್ ಅತಿರೇಕದ ವರ್ತನೆಗೆ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಸಂದರ್ಭ ವಿನಯ್ ಪತ್ನಿ ಅವರಿಗೂ ಎಂಥಹ ಕೆಟ್ಟ ಪತಿಯೊಂದಿಗೆ ಇದ್ದೀರಾ ಅಂತೆಲ್ಲಾ ನಿಂದನೆ ಮತ್ತು ಬೆದರಿಕೆಗಳು ಬಂದಿದ್ದವು. 

ಪವಿ ಹೇಳಿದ್ದೇನು?

ಸ್ನೇಹಿತ್ ಅವರು ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗೆ ಯಾವ ರೀತಿಯ ಅಭಿಪ್ರಾಯವಿದೆ ಎಂದು ವೈಲ್ಡ್ ಕಾರ್ಡ್ ಸ್ಪರ್ಧಿ ಪವಿಯವರನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಈ ವೇಳೆ ಈ ಭಾರಿ ಬಿಗ್‌ಬಾಸ್‌ ಮನೆಯಲ್ಲಿ ಸದ್ದು ಮಾಡಿದ ವಿಷಯ ಯಾವುದು ಎಂದು ಕೇಳಿದಾಗ ಪವಿ ಪೂವಪ್ಪ, ಬಳೆ ಎಪಿಸೋಡ್ ಭಾರಿ ಸದ್ದು ಮಾಡಿತು. ನನಗೆ ವಿನಯ್ ತುಂಬಾ ಅಗ್ರೆಸ್ಸಿವ್ ಅನಿಸಿದ್ದರು. ಆಚೆ ವಿನಯ್ ಅವರೇ ಮೇನ್ ಅಗ್ರೆಸ್ಸಿವ್ ಅಂತಿರೋದು. ನಾನು ೫೦ ದಿನದ ಸಂಚಿಕೆಗಳನ್ನೂ ಪೂರ್ತಿಯಾಗಿ ನೋಡಿಲ್ಲ. ಆದರೆ, ಟ್ರೋಲ್ ಪೇಜಸ್‌ನಲ್ಲಿ ತುಂಬಾ ನಡೆಯುತ್ತಿತ್ತು. ಬಳೆ ಎಪಿಸೋಡ್ ತುಂಬಾ ಟ್ರೋಲ್ ಆಗ್ತಿತ್ತು ಎಂದರು. ಅದಕ್ಕೆ ವಿನಯ್, ಅಂದ್ರೆ ನಮ್ಮದು ತುಂಬಾ ಟ್ರೋಲ್ ಆಗಿರುತ್ತೆ. ಕೆಟ್ಟದಾಗಿ ಟ್ರೋಲ್ ಆಗಿರುತ್ತೆ ಎಂದರು. ಅದಕ್ಕೆ ಪವಿ ನಕ್ಕರು. 

ವಿನಯ್ ಕಣ್ಣೀರು

ಬಳೆ ವಿಷಯ ಟ್ರೋಲ್‌ಗೆ ಒಳಗಾಗಿತ್ತು ಎಂಬ ಮಾಹಿತಿ ತಿಳಿಯುತ್ತಿದ್ದಂತೆ ವಿನಯ್ ಡಲ್ ಆದರು. ಇದರಿಂದ ತಮ್ಮ ಕುಟುಂಬಕ್ಕೂ ಸಮಸ್ಯೆಯಾಗಿರಬಹುದು ಅಂತ ಯೋಚಿಸಿ ಅಪ್‌ಸೆಟ್ ಆದರು. ಸಂಗೀತಾ ಏನಾಯ್ತು? ಅಂತ ಕೇಳಿದಾಗ, ಆ ಬಳೆ ಘಟನೆ ನನ್ನ ಫ್ಯಾಮಿಲಿಯನ್ನು ತುಂಬಾ ಡ್ಯಾಮೇಜ್ ಮಾಡಿದೆ ಅಂತರ ಬೇಸರ ಸೂಚಿಸಿದರು. ಸಂಗೀತಾ ಅದ್ಹೇಗೆ ಗೊತ್ತಾಯ್ತು ಅಂತ ಪ್ರಶ್ನಿಸಿದಾಗ, ಗೊತ್ತಾಯಿತು. ತುಂಬಾ ಡ್ಯಾಮೇಜ್ ಮಾಡಿದೆ. ಫ್ಯಾಮಿಲಿ ಡ್ಯಾಮೇಜ್ ಮಾಡುವಂಥದ್ದು ಅಲ್ಲ ಅದು ಅಂತ ಹೇಳಿದರು. ಜೊತೆಗೆ ವಾಶ್‌ರೂಂ ಬಳಿ ಹೋಗಿ ಕಣ್ಣೀರು ಹಾಕಿದರು. 

 

ನನಗೆ ಇರೋದು ಫ್ಯಾಮಿಲಿ ಮಾತ್ರ

ನಂತರ ಬಿಗ್‌ಬಾಸ್ ಬಳಿ ಮಾತನಾಡಿದ ವಿನಯ್, ನನಗೆ ಯಾರೂ ಇಲ್ಲ ಬಿಗ್‌ಬಾಸ್‌. ನನಗೆ ಇರೋದು ಫ್ಯಾಮಿಲಿ ಮಾತ್ರ. ಅದು ಫ್ಲೋನಲ್ಲಿ ಬಂದ ಮಾತು. ಅದಕ್ಕೆ ನಾನು ಕ್ಷಮೆ ಕೂಡ ಕೇಳಿದೆ. ಅದು ನನ್ನ ಫ್ಯಾಮಿಲಿಗೆ ತುಂಬಾ ಎಫೆಕ್ಟ್ ಆಗಿದೆ. ನಾನು ಕೆಟ್ಟದಾಗಿ ಕಾಣಿಸಿದರೂ ಪರ್ವಾಗಿಲ್ಲ. ಅದು ನನ್ನ ಮಗನಿಗೆ ಹಾಗೂ ಪತ್ನಿಗೆ ಎಫೆಕ್ಟ್ ಆದರೆ ನಾನಿಲ್ಲಿ ಬಂದು ಏನು ಪ್ರಯೋಜನ ಅನಿಸುತ್ತಿದೆ ಎಂದರು. ಅದಕ್ಕೆ ಬಿಗ್‌ಬಾಸ್, ಸಮಾಧಾನ ಮಾಡಿಕೊಳ್ಳಿ. ಬೇಡದೇ ಇರುವ ಮಾತುಗಳಿಗೆ ಕಿವಿಗೊಟ್ಟು ಗೊಂದಲ ಮಾಡಿಕೊಳ್ಳಬೇಡಿ. ನೀವು ಕೇಳಿಸಿಕೊಂಡಿರುವಂತೆ ಹಾಗೂ ಕಲ್ಪಿಸಿಕೊಂಡಿರುವಂತೆ ಯಾವ ವಿಷಯಗಳೂ ನಡೆದಿಲ್ಲ. ನಿಮ್ಮ ಕುಟುಂಬ ಸುರಕ್ಷಿತವಾಗಿದೆ ಎಂದರು. 

 

ಪ್ರಬಲ ಸ್ಪರ್ಧಿ

ಬಿಗ್‌ಬಾಸ್ ಆರಂಭದಿಂದಲೂ ಟಾಸ್ಕ್ ಮತ್ತು ಮಾತು ಎರಡರಲ್ಲೂ ಅಗ್ರೆಸಿವ್ ಆಗಿರುವ ವಿನಯ್‌ ಗೌಡ, ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.  ಗಟ್ಟಿ ಮನೋಬಲವನ್ನು ಕೂಡ ಹೊಂದಿರುವ ಅವರು, ಆನೆ ಅಂತೆಲ್ಲಾ ಕರೆಸಿಕೊಂಡಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+