X
ಹೋಮ್ ಚಲನಚಿತ್ರಗಳ ಒಳನೋಟ

Karthik Mahesh: ಬಿಗ್‌ಬಾಸ್‌ ಮನೆಯಲ್ಲಿ ತಮ್ಮಿಂದಾದ ತಪ್ಪುಗಳನ್ನ ಒಪ್ಪಿಕೊಂಡ ಕಾರ್ತಿಕ್

Author Sowmya Bairappa | Updated: Friday, January 26, 2024, 11:55 AM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಕೊನೆಯ ವಾರ ಚಾಲ್ತಿಯಲ್ಲಿದ್ದು, ಬಿಗ್‌ಬಾಸ್‌ ವಿಭಿನ್ನ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ತಮ್ಮ ಮನಸ್ಸಿನ ಜೊತೆ ಮಾತನಾಡುವ ಅವಕಾಶವನ್ನು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ನೀಡಿದ್ದರು. ಈ ವೇಳೆ ಕಾರ್ತಿಕ್ ತಮ್ಮಿಂದಾದ ತಪ್ಪಿಗೆ ಪಶ್ಚಾತ್ತಾಪ ಪಟ್ಟಿದ್ದಾರೆ.


cover image
ನಾನೊಬ್ಬನೇ ಹೋರಾಡುತ್ತಿದ್ದೀನಿ

ಕನ್ನಡಿ ಮುಂದೆ ಬಂದ ಕಾರ್ತಿಕ್..ಕಾರ್ತಿಕ್ ಮಹೇಶ್. ಮಹೇಶ್ ನನ್ನ ತಂದೆ. ಈ ಏಪ್ರಿಲ್‌ಗೆ ನನ್ನ ಬಿಟ್ಟು ಹೋಗಿ ೩ ವರ್ಷ. ಅವತ್ತಿಂದ ಈವರೆಗೂ ನಾನೊಬ್ಬನೇ ಹೋರಾಡುತ್ತಿದ್ದೀನಿ. ನನ್ನ ತಂಗಿ ಹಾಗೂ ಅಮ್ಮ ಇಬ್ಬರೇ ಇದ್ದರೂ 'ಬಿಗ್‌ಬಾಸ್‌'ಗೆ ಬರಲು ನಿರ್ಧರಿಸುತ್ತೇನೆ. ಇದು ಒಳ್ಳೆಯ ಅವಕಾಶ, ಸಿಕ್ಕ ಅವಕಾಶವನ್ನ ಮಿಸ್ ಮಾಡಿಕೊಳ್ಳಬಾರದು ಅಂತ ಒಂದೇ ದಿನದಲ್ಲಿ ನಿರ್ಧಾರ ಮಾಡ್ತೀನಿ ಇಲ್ಲಿ ಬರೋಕೆ. 

 

ಮೂರು ವಿಷಯಗಳಲ್ಲಿ ತಪ್ಪು ಮಾಡಿದ್ದೇನೆ

ಇಲ್ಲಿಗೆ ಬಂದ್ಮೇಲೆ ಮೊದಲ ದಿನವೇ ದೊಡ್ಡ ಶಾಕ್ ಆಯ್ತು. ಅಸಮರ್ಥ ಅಂತ. ಮೊದಲ ವಾರವೇ ಅಸಮರ್ಥರು ಅಲ್ಲ ಅಂತ. ಮೊದಲ ವಾರವೇ ಅಸಮರ್ಥರು ಅಲ್ಲ ಅಂತ ಪ್ರೂವ್ ಮಾಡ್ತೀವಿ. ದಾರಿಯಲ್ಲಿ ಫ್ರೆಂಡ್‌ಶಿಪ್ ಮಾಡ್ತೀನಿ. ನನ್ನ ನಿರ್ಧಾರಗಳನ್ನ ಹೇಳಿದ್ರೆ, ಇನ್‌ಫ್ಲುಯೆನ್ಸ್ ಅಂತಾರೆ. ಪರ್ವಾಗಿಲ್ಲ. ಫ್ರೆಂಡ್‌ಶಿಪ್‌ನ ಬಳಸಿಕೊಳ್ತಿದ್ದೀನಿ ಅಂತ ಅಪವಾದ ಮಾಡ್ತಾರೆ. ಎಲ್ಲವನ್ನು ತಗೊಳ್ತಿನಿ. ಆದರೆ, ನನ್ನ ಅಭಿಪ್ರಾಯವನ್ನ ಎಲ್ಲಿ ಹೇಳ್ಬೇಕೋ, ಅಲ್ಲಿ ಹೇಳಿದ್ದೇನೆ. ಮೂರು ವಿಷಯಗಳಲ್ಲಿ ತಪ್ಪು ಮಾಡಿದ್ದೇನೆ. ಬಕೆಟ್ ಅಂತ ಕರೆದಾಗ ಬೇಸರವಾಗುತ್ತೆ. ಅದಕ್ಕೆ ನಾನು ಹೇಗೆ ಬೇಕೋ, ಹಾಗೆ ಉತ್ತರ ಕೊಟ್ಟಿರುತ್ತೇನೆ. ಆಗ ಅವರು ಕ್ಷಮೆ ಕೇಳ್ತಾರೆ. ಅದನ್ನ ನಾನೇ ಕ್ಷಮೆ ಕೇಳಿಸಿದೆ ಎಂಬ ರೀತಿಯಲ್ಲಿ, ದೊಡ್ಡ ಸಾಧನೆ ಎಂಬ ರೀತಿಯಲ್ಲಿ ಅಂತ ವೇದಿಕೆಯಲ್ಲಿ ಹೇಳ್ತೀನಿ. ಅದು ನನ್ನ ಮೊದಲ ತಪ್ಪು. 

 

ಶನಿ ಅಂತ ಕರೆದೆ

ಶನಿ ಅಂತ ಕರೆದೆ. ವಾರಾಂತ್ಯದಲ್ಲಿ ಸ್ಟೇಟ್‌ಮೆಂಟ್ ಬಂದಾಗ, ಯೆಸ್/ನೋ ಅಂತ ಹೇಳೋದು ಗೊತ್ತಾಗಲ್ಲ. ಯಾಕೆಂದರೆ, ನನಗೆ ನೆನಪಿರಲ್ಲ. ಇದು ನಾನು ಮಾಡಿದ ಎರಡನೇ ತಪ್ಪು. ಅದನ್ನ ವರ್ತೂರು ಸಂತೋಷ್ ಅವರೇ ಹೇಳಿದ್ದು ಅಂತ ನನ್ನ ಮಾತನ್ನ ಅವರ ಮೇಲೆ ಹೇರೋಕೆ ನೋಡಿದ್ದು ನನ್ನ ಮೂರನೇ ತಪ್ಪು. ತನಿಷಾಗೆ ಹರ್ಟ್ ಆಗುವ ರೀತಿ ನಾಮಿನೇಷನ್ ಮಾಡಿದೆ. ಇದು ನನ್ನ ನಾಲ್ಕನೇ ತಪ್ಪು. ವಾರಾಂತ್ಯದಲ್ಲಿ ಸುದೀಪ್ ಸರ್ ಹೇಳಿದ್ದು ಕಾರ್ತಿಕ್ ಕಾಣ್ತಿಲ್ಲ ಅಂತ. ಅದನ್ನ ಎಲ್ಲರೂ ಎತ್ತಿಕೊಂಡು ನಾಲ್ಕು ವಾರಗಳಿಂದ ಕಾರ್ತಿಕ್ ಲೋ ಅಂತ ಹೇಳ್ತಿದ್ದಾರೆ. ಚಿಕ್ಕ ವಯಸ್ಸಿನಿಂದ ಅಮ್ಮ ಕಷ್ಟ ಪಡೋದನ್ನೇ ನೋಡಿಕೊಂಡು ಬಂದಿದ್ದೇನೆ. ಈಗ ಮಗನಾಗಿ ತಾಯಿಗೆ ಒಂದು ಗೂಡನ್ನ ಕಟ್ಟಿಕೊಡಬೇಕು ಅನ್ನೋದು ನನ್ನ ಆದೆ. ಅದಕ್ಕಾಗಿ ಬಿಗ್‌ಬಾಸ್‌ ಎಂದರು. 

 

ಅಪ್ಪ-ಅಮ್ಮ ದೂರವಾದ್ಮೇಲೆ ನಾನು ನೀದಿಗೆ ಬಿದ್ದೆ

ವಿನಯ್ ಗೌಡ ಕನ್ನಡಿ ಮುಂದೆ ಕುಳಿತು ತಮ್ಮ ಇಡೀ ಜೀವನ ಮೆಲುಕು ಹಾಕಿದರು. ನನ್ನ ಫ್ಯಾಮಿಲಿ ಚೆನ್ನಾಗಿತ್ತು. ಆದರೆ, ಅಪ್ಪ-ಅಮ್ಮ ದೂರವಾದ್ಮೇಲೆ ನಾನು ನೀದಿಗೆ ಬಿದ್ದೆ. ಅವತ್ತಿಂದ ಒಬ್ಬನೇ ಫೈಟ್ ಮಾಡಿಕೊಂಡು ಬಂದೆ. ಬಿಗ್‌ಬಾಸ್‌ ಮನೆಯ ಬಗ್ಗೆ ಹೆಮ್ಮಯ ಫೀಲ್ ಆಗುತ್ತೆ. ನಾನು ಎಲ್ಲೂ ಚೇಂಜ್ ಆಗಿಲ್ಲ. ನಿನ್ನ ಇಡೀ ಲೈಫ್‌ನಲ್ಲಿ ಒಂದು ಒಳ್ಳೆಯದಾಗಿದೆ ಅಂದ್ರೆ 'ಯು ಮ್ಯಾರೀಡ್ ಎ ರೈಟ್ ವುಮನ್'. ಅಲ್ಲಿಂದ ಎಲ್ಲವೂ ಪ್ಲಸ್ ಆಗ್ತಾ ಹೋಯ್ತು. ಊಟ ತಿನ್ನೋಕೆ ಒಂದು ಹೊತ್ತು ಇದ್ದರೂ, ಖುಷಿಯಾಗಿ ತಿಂದಿದ್ದೀಯಾ. ಹಂಚಿಕೊಂಡು ತಿಂದಿದ್ದೀಯಾ. ಇಷ್ಟು ವರ್ಷ ಯಾರೂ ನಿನಗೋಸ್ಕರ್ ಬಂದು ದುಡಿದಿಲ್ಲ. ನೀನು ಏನು ಮಾಡ್ತಿಯೋ ಅದು ನಿನಗೆ ಎಂದರು.

 

ನಾಳೆಯ ಭಯದಲ್ಲಿ ತಾಯಿಯನ್ನೇ ಕಳೆದುಕೊಂಡೆ

ಇನ್ನು ತುಕಾಲಿ ಸಂತು ಕನ್ನಡಿ ಮುಂದೆ ಕುಳಿತುಕೊಂಡು ನನ್ನಂತಹ ಮಗ ನನ್ನ ತಾಯಿಗೆ ಹುಟ್ಟಬಾರದಿತ್ತು. ನನ್ನ ತಾಯಿಯನ್ನು ಸಿಯಾಗಿ ನೋಡಿಕೊಳ್ಳಲಿಲ್ಲ. ಚಿನ್ನದ ಬಳೆ ಕೊಡಿಸುತ್ತೇನರ ಎಂದಿದ್ದೆ, ಕೊಡಿಸಲಾಗಲಿಲ್ಲ. ತನ್ನ ಕೊನೆಯ ಸಿನಗಳವರೆಗೆ ನನ್ನ ತಾಯಿ ಕೂಲಿ ಮಾಡ್ತಿದ್ರು. ನಾನು ಊರು ಬಿಟ್ಟು ಬಂದ ಮೇಲೆ ಮೂರು ವರ್ಷ ಊರಿಗೆ ಹೋಗಿರಲಿಲ್ಲ. ವಾಪಾಸ್ ಹೋಗಿದ್ದು, ಅಮ್ಮ ಆರೋಗ್ಯ ಗಂಭೀರವಾದಗಲೇ. ಆಗ ಏನೇನೋ ಪ್ರಯತ್ನ ಮಾಡಿದ್ರೂ ಅಮ್ಮನನ್ನು ಉಳಿಸಿಕೊಳ್ಳಲಾಗಲಿಲ್ಲ. ನಾಳೆಯ ಭಯದಲ್ಲಿ ತಾಯಿಯನ್ನೇ ಕಳೆದುಕೊಂಡೆ ಅಂತ ಭಾವುಕರಾದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+