X
ಹೋಮ್ ಚಲನಚಿತ್ರಗಳ ಒಳನೋಟ

ನನಗೊಬ್ಬ ಅಕ್ಕ ಸಿಕ್ಕರು, ಇಷ್ಟೊಂದು ವಾರ ನನ್ನ ಪರವಾಗಿ ನಿಂತಿದ್ದಕ್ಕೆ ತುಂಬಾ ಚಿರಋಣಿ: ಡ್ರೋನ್ ಪ್ರತಾಪ್

Author Sowmya Bairappa | Published: Saturday, January 20, 2024, 01:50 PM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10 ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಮನೆಯೊಳಗಿರುವ ಸದಸ್ಯರ ಸಂಖ್ಯೆ ಕಡಿಮೆಯಿದೆ. ಈ ನಡುವೆ ಕಳೆದ ಸಂಚಿಕೆಯಲ್ಲಿ ಈ ಸೀಸನ್ ಕೊನೆಯ ಕಳಪೆ ಹಾಗೂ ಉತ್ತಮ ಆಯ್ಕೆ ನಡೆದಿದೆ. ಈ ಸಂದರ್ಭ ಕಳಪೆ ಪಟ್ಟ ಹೊತ್ತು ಜೈಲು ಸೇರಿದ ಡ್ರೋನ್ ಪ್ರತಾಪ್, ತಮ್ಮ ಪರವಾಗಿ ನಿಂತ ಸಂಗೀತಾ ದೀದಿಗೆ ಚಿರಋಣಿ ಎಂದಿದ್ದಾರೆ.


cover image
ಕಣ್ಣೀರಿಟ್ಟ ಸಂಗೀತಾ

ಈ ಬಾರಿ ಕಳೆದ 15 ವಾರಗಳ ಜರ್ನಿಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಹಾಗೂ ಕಳಪೆ ಆಯ್ಕೆ ಮಾಡಬೇಕಿತ್ತು. ಈ ವೇಳೆ ಮನೆಯ ಬಹುತೇಕ ಸದಸ್ಯರು ಸಂಗೀತಾ ಶೃಂಗೇರಿಯವರಿಗೆ ಉತ್ತಮ ನೀಡಿದರು. ಜೊತೆಗೆ ಡ್ರೋನ್ ಪ್ರತಾಪ್‌ಗೆ ಕಳಪೆ ಪಟ್ಟ ನೀಡಿದರು. ಡ್ರೋನ್ ಪ್ರತಾಪ್ ಅವರಿಗೆ ಕಳಪೆ ಸಿಕ್ಕಿದ್ದಕ್ಕೆ ಸಂಗೀತಾ ಕಣ್ಣೀರಿಟ್ಟರು. ಈ ಪ್ರಕ್ರಿಯೆ ನನಗೆ ಇಷ್ಟವಾಗುತ್ತಿಲ್ಲ. ಎಲ್ಲರೂ ಉತ್ತಮವಾಗಿ ಆಡಿದ್ದಾರೆ. ಅದಕ್ಕೆ ಎಲ್ಲರೂ ಟಾಪ್‌ 7ರಲ್ಲಿ ಇದ್ದೀವಿ. ನಾವೆಲ್ಲರೂ ಅರ್ಹರು. ನಾವೆಲ್ಲರೂ ಉತ್ತಮನೇ. ನನ್ನ ಪ್ರಕಾರ ಇಲ್ಲಿ ಯಾರೂ ಕಳಪೆಯಿಲ್ಲ ಅಂತ ಭಾವುಕರಾದರು. 

 

ಸಂಗೀತಾ ದೀದಿಗೆ ಚಿರಋಣಿ

ಬಳಿಕ ಮಾತನಾಡಿದ ಪ್ರತಾಪ್, ಕಳಪೆಯನ್ನು ನಾನು ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ. ಆದರೆ, ಅದಕ್ಕೆ ಹೇಳಿದ ಮಾತುಗಳನ್ನ ಒಪ್ಪಲ್ಲ. ಸಂಗೀತಾ ದೀದಿ ನನ್ನ ಪರವಾಗಿ ಇಷ್ಟು ವಾರಗಳು ನಿಂತಿದ್ದರು. ಅದಕ್ಕೆ ನಾನು ತುಂಬಾ ಗ್ರೇಟ್‌ಫುಲ್. ಅವರಿಗೆ ಉತ್ತಮ ಬಂದಿರೋದಕ್ಕೆ ನಾನು ಖುಷಿಯಾಗಿದ್ದೇನೆ. ನನಗೆ ಒಬ್ಬರು ಅಕ್ಕ ಸಿಕ್ಕರು. ಅವರಿಗೆ ಒಳ್ಳೆಯದಾಗಲಿ. ಇಲ್ಲಿಗೆ ಬಂದಾಗ ಸೀದಾ ಸಾದಾ ಹುಡುಗನಾಗಿ ಬಂದಿದ್ದೇ. ಶೋ ಅನ್ನೊಂದಕ್ಕಿಂತ ಹೆಚ್ಚಾಗಿ ಜೀವನ ಮಾಡ್ತಿದ್ದೆ. ಎಲ್ಲವನ್ನೂ ಫೀಲ್ ಮಾಡ್ತಿದ್ದೆ. ಎಲ್ಲವನ್ನೂ ಗಟ್ಟಿಯಾಗಿ ಎದುರಿಸಿದ್ದೇನೆ. ಇಲ್ಲಿ ಯಾರು ಕಳಪೆಯಲ್ಲ ಅಂತ ಸಂಗೀತಾ ಅವರು ಹೇಳಿದ್ದು ಯಾವಾಗಲೂ ಮನಸ್ಸಿನಲ್ಲಿರುತ್ತೆ ಅಂದರು.

ನನ್ನ ಪಕ್ಕಾ ನಿಲ್ಲೋರು ಜೈಲಿಗೆ ಹೋಗ್ತಾರೆ

ಡ್ರೋನ್ ಪ್ರತಾಪ್‌ಗೆ ಕಳಪೆ ಸಿಕ್ಕಿದ್ದಕ್ಕೆ ಸಂಗೀತಾ ಅವರಿಗೆ ಬೇಸರವಾಗಿದೆ. ಮನೆಯಲ್ಲಿ ಇದೆ ನಡೆಯುತ್ತಿರುವುದು. ನನ್ನ ಪಕ್ಕದಲ್ಲಿ ಯಾರೂ ನಿಲ್ತಾರೋ, ಅವರು ಜೈಲಿಗೆ ಹೋಗ್ತಾರೆ ಅಂತ ಅವರೊಬ್ಬರೇ ಮಾತನಾಡಿಕೊಂಡಿದ್ದಾರೆ. 

ನನಸಾಗದ ಪ್ರತಾಪ್ ಕನಸು

ಡ್ರೋನ್ ಪ್ರತಾಪ್‌ಗೆ ದೊಡ್ಮನೆಯ ಕ್ಯಾಪ್ಟನ್ ಆಗಬೇಕೆಂಬ ಕನಸಿತ್ತು. ಹೀಗಾಗಿ ಕಳೆದ ವಾರ ನಡೆದ ಫಿನಾಲೆ ಟಾಸ್ಕ್‌ಗಳಲ್ಲಿ ಅತ್ಯುತ್ತಮವಾಗಿ ಆಡಿ, ಎಲ್ಲರಿಗಿಂತ ಜಾಸ್ತಿ ಪಾಯಿಂಟ್ಸ್ ಪಡೆದುಕೊಂಡಿದ್ದರು. ಆದರೆ, ಫಿನಾಲೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಕ್ಯಾಪ್ಟನ್ ಆಗುವ ಕನಸು ಕೂಡ ನೆರವೇರಲಿಲ್ಲ.

ಹೋಗೋದ್ಯಾರು?

ಸಂಗೀತಾ ಶೃಂಗೇರಿ ಈಗಾಗಲೇ ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದು ಫಿನಾಲೆ ಹಂತ ತಲುಪಿದ್ದಾರೆ. ಇವರೊಂದಿಗೆ ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಹಾಗೂ ವತೂರು ಸಂತೋಷ್ ಟಾಪ್‌ ೫ನಲ್ಲಿರುತ್ತಾರೆ ಎನ್ನಲಾಗಿದೆ. ಹೀಗಾಗಿ ಈ ವಾರಾಂತ್ಯದಲ್ಲಿ ನಮ್ರತಾ ಗೌಡ, ತುಕಾಲಿ ಸಂತೋಷ್ ಆಗಬಹುದು ಎನ್ನಲಾಗುತ್ತಿದೆ. ಅಥವಾ ವರ್ತೂರು ಸಂತೋಷ್ ಹೋದರೂ ಹೋಗಬಹುದು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+