X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್‌ನಲ್ಲಿ ಮಹಾಭಾರತ ಸಿನಿಮಾ: ಯಾರು ಯಾವ ಪಾತ್ರ ಮಾಡ್ತಾರೆ ಎಂಬ ಲಿಸ್ಟ್ ಇಲ್ಲಿದೆ.

Author Sowmya Bairappa | Published: Wednesday, July 26, 2023, 12:33 PM [IST]

ಭಾರತೀಯ ಚಿತ್ರರಂಗದಲ್ಲೀಗ ಐತಿಹಾಸಿಕ ಹಾಗೂ ಪೌರಾಣಿಕ ಸಿನಿಮಾಗಳ ಟ್ರೆಂಡ್ ಆರಂಭವಾಗಿದೆ. ಕನ್ನಡದಲ್ಲಿ ಈ ಹಿಂದೆ ಕುರುಕ್ಷೇತ್ರ ಸಿನಿಮಾ ತೆರೆಕಂಡು ಸಕ್ಸಸ್ ಆಗಿತ್ತು. ಆದರೆ, ಕನ್ನಡದಲ್ಲಿ ಇಡೀ ಮಹಾಭಾರತ ಮಾಡುವ ಪ್ರಯತ್ನವನ್ನು ಈವರೆಗೂ ಯಾರು ಮಾಡಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲೊಂದು ಟ್ರೆಂಡ್ ಆರಂಭವಾಗಿದೆ. ವಿವಿಧ ರೀತಿಯ AI ಪೋಟೋಗಳು ಗಮನ ಸೆಳೆಯುತ್ತಿವೆ. ಇದೀಗ ರೀಪೇಶ್ ಎಂಬ ಗ್ರಾಫಿಕ್ಸ್ ಡಿಸೈನರ್ ಕನ್ನಡ ಸಿನಿಮಾ ತಾರೆಯರನ್ನು ಮಹಾಭಾರತದ ಪಾತ್ರಗಳಲ್ಲಿ ಕಲ್ಪಿಸಿಕೊಂಡು AI ಪೋಟೋಗಳನ್ನು ಮಾಡಿದ್ದು, ಸಖತ್ ವೈರಲ್ ಆಗ್ತಿದೆ. ಹಾಗಾದರೆ, ಸ್ಯಾಂಡಲ್‌ವುಡ್‌ನಲ್ಲಿ ಮಹಾಭಾರತದ ಕಾವ್ಯ ಆಧರಿಸಿ ಚಿತ್ರ ನಿರ್ಮಾಣವಾದರೆ ಯಾರ್ಯಾರಿಗೆ ಯಾವ ಪಾತ್ರ ಸೂಕ್ತವಾಗುತ್ತದೆ? ಎಂಬ ಪೋಸ್ಟರ್ ಇಂಟರೆಸ್ಟಿಂಗ್ ಆಗಿದೆ.


cover image
ಕರ್ಣನಾಗಿ ಯಶ್

ರಾಕಿಂಗ್ ಸ್ಟಾರ್ ಯಶ್ ಮಹಾಭಾರತ ಸಿನಿಮಾದಲ್ಲಿ ನಟಿಸಿದರೆ ಅವರಿಗೆ ಯಾವ ಪಾತ್ರ ಸೂಟ್ ಆಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತೆ. ಸದ್ಯ ವೈರಲ್ ಆಗಿರುವ AI ಫೋಸ್ಟರ್‌ನಲ್ಲಿ ಯಶ್ ಕರ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಖತ್ ಇಂಟರೆಸ್ಟಿಂಗ್ ಆಗಿದೆ. 

ದುರ್ಯೋಧನನಾಗಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗಾಗಲೇ ಪೌರಾಣಿಕ ಪಾತ್ರದಲ್ಲಿ ಮಿಂಚಿದ್ದಾರೆ.  2019ರಲ್ಲಿ ತೆರೆಕಂಡ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಅಬ್ಬರಿಸಿದ್ದರು. ಇದೀಗ ಬಿಡುಗಡೆಯಾಗಿರುವ ಫೋಸ್ಟರ್‌ನಲ್ಲೂ ಡಿಬಾಸ್ ದುರ್ಯೋಧನನಾಗಿ ಕಾಣಿಸಿಕೊಂಡಿದ್ದಾರೆ.  

 

ಅರ್ಜುನನಾಗಿ ಅಪ್ಪು

ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ, ಅಪ್ಪು ನಿಧನರಾದಗಿನಿಂದ ಇಂದಿನವರೆಗೂ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಅಪ್ಪುವನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಎಷ್ಟೇ ದೊಡ್ಡ ಕಲಾವಿದರಾದರೂ ಪುನೀತ್‌ ಅವರ ಸರಳತೆ, ವಿನಯತೆ ಎಲ್ಲರಿಗೂ ಮಾದರಿ. ಅವರು ಸಾರ್ಥಕತೆಯ ಬದುಕನ್ನು ಬದುಕಿ ಹೋಗಿದ್ದಾರೆ. ವೈರಲ್ ಆಗಿರುವ ಎಐ ಫೋಸ್ಟರ್‌ನಲ್ಲಿ ಪುನೀತ್ ಅರ್ಜುನನಾಗಿ ಕಾಣಿಸಿಕೊಂಡಿದ್ದಾರೆ. 

ಸುದೀಪ್ ಮತ್ತು ಧುವಾ ಸರ್ಜಾ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಹಾಭಾರತದ ಕೃಷ್ಣನ ರೋಲ್‌ನಲ್ಲಿ ಕಾಣಿಸಿದ್ದಾರೆ. ಕೃಷ್ಣನ ಪಾತ್ರಕ್ಕೆ ಸುರೀಪ್‌ಗೆ ಸೂಟ್ ಆಗುತ್ತದೆ. ಅವರ ರೂಪಕ್ಕೆ ಈ ರೋಲ್ ಚೆನ್ನಾಗಿಯೇ ಹೊಂದಿಕೊಳ್ಳುತ್ತದೆ. ಆಕ್ಷನ್ ಪ್ರಿನ್ಸ್ ಧುವಾ ಸರ್ಜಾ  ಸದ್ಯ ವೈರಲ್ ಆಗಿರುವ ಎಐ ಫೋಸ್ಟರ್‌ನಲ್ಲಿ ಭೀಮನಾಗಿ ಕಾಣಿಸಿಕೊಂಡಿದ್ದಾರೆ. ಧುವಾ ಸರ್ಜಾ ಅವರ ದೇಹ ಈ ಪಾತ್ರಕ್ಕೆ ಸೂಕ್ತ ಎನಿಸುವ ಮಟ್ಟಿಗೆ ಪೋಸ್ಟರ್ ಡಿಸೈನ್ ಮಾಡಲಾಗಿದೆ. 

 

ಶಿವಣ್ಣ, ರಿಷಬ್ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ

ಇನ್ನು ಭೀಷ್ಮನಾಗಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ದ್ರೋಣಚಾರ್ಯರಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ, ಶಕುನಿಯಾಗಿ ರಾಜ್‌. ಬಿ ಶೆಟ್ಟಿ ಅವರ ಫೋಟೊಗಳು ಟ್ರೆಂಡ್ ಕ್ರಿಯೇಟ್ ಮಾಡಿವೆ. ನಿಜಕ್ಕೂ ನಮ್ಮ ಸಿನಿಮಾ ಹೀರೊಗಳು ಮಹಾಭಾರತದ ಹೀರೊಗಳಾಗಿ ತೆರೆಗೆ ಬಂದರೆ ಅದ್ಭುತ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ದ್ರೌಪದಿಯಾಗಿ ರಚ್ಚು

ಇಡೀ ಮಹಾಭಾರತ ನಡೆಯುವುದು ದ್ರೌಪದಿಗಾಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಟ್ರೆಂಡ್ ಆಗಿರುವ ಎಐ ಫೋಸ್ಟರ್‌ಗಳಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ದ್ರೌಪದಿಯಾಗಿ ಕಾಣಿಸಿಕೊಂಡಿದ್ದು, ಸದ್ಯ ಫೋಟೋ, ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.  

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+