Don't Miss!
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎದೆ ಧಸಕ್ ಎನ್ನಿಸುವ ಬಿಗ್ ಬಿ ರಸಪ್ರಶ್ನೆ ಕಾರ್ಯಕ್ರಮ
"ಕೌನ್ ಬನೇಗಾ ಕರೋಡ್ಪತಿ" ನಾಲ್ಕನೆ ಆವೃತ್ತಿ ಅಕ್ಟೋಬರ್ 11ರಿಂದ ಝಗಮಗಿಸಲು ವೇದಿಕೆ ಸಿದ್ಧವಾಗಿದೆ. ಈ ರಸಪ್ರಶ್ನೆ ಕಾರ್ಯಕ್ರಮವನ್ನು ಮತ್ತಷ್ಟು ರಸವತ್ತಾಗಿ ಬಿತ್ತರಿಸಲು ಸೋನಿ ಟಿವಿ ಮುಂದಾಗಿದೆ. ಬಿಗ್ ಬಿ ಮಗಅಭಿಷೇಕ್ ಬಚ್ಚನ್ ಹಾಗೂ ಅವರ ಮುದ್ದಿನ ಸೊಸೆ ಐಶ್ವರ್ಯ ರೈ ಅವರನ್ನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸಲು ಚಿಂತಿಸಲಾಗಿದೆ.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ತೂರಿ ಬರುವ ಪ್ರಶ್ನೆ ಹೀಗೇ ಇರುತ್ತದೆ ಎಂದು ಊಹಿಸುವುದು ಅಸಾಧ್ಯ. ಅದು ರಾಜಕೀಯ, ಇತಿಹಾಸ, ವಿಜ್ಞಾನ, ಚಿತ್ರರಂಗ ಯಾವುದೇ ಕ್ಷೇತ್ರದಿಂದ ಪ್ರಶ್ನೆ ತೂರಿಬರಬಹುದು. ಉತ್ತರ ಕೊಟ್ಟ ಬಳಿಕ ತುದಿಗಾಲಲ್ಲಿ ನಿಲ್ಲುವಂತೆ ಮಾಡುವುದು ಬಿಗ್ ಬಿ ವಿಶೇಷತೆ.
"ಶೂರ್, ಆರ್ ಯು ಕಾನ್ಫಿಡೆಂಟ್, ಲಾಕ್ ಕಿಯಾ ಜಾಯೇಗಾ..." ಎನ್ನುತ್ತಿದ್ದರೆ ಎಂತವರಿಗೂ ಎದೆ ಧಸಕ್ ಎನ್ನದೆ ಇರದು. ಅದೇ ಬಿಗ್ ಬಿ ಸ್ಪೆಷಾಲಿಟಿ. ಕಿಂಗ್ ಖಾನ್ ಶಾರುಖ್ ಅವರನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ ಎಂಬ ಸುದ್ದಿಯೂ ಇದೆ. ಈಗಾಗಲೆ ಶಾರುಖ್ ಅವರನ್ನು ಸೋನಿ ಟಿವಿ ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದೆ. ಮಾತುಕತೆಯ ವಿವರಗಳನ್ನು ಮಾತ್ರ ಸೋನಿ ಟಿವಿ ಬಹಿರಂಗಪಡಿಸಿಲ್ಲ.
ಬಾಲಿವುಡ್ ತಾರೆಗಳಾದ ಸಂಜಯ್ ದತ್ ಹಾಗೂ ಜಾನ್ ಅಬ್ರಹಾಂ ಅವರು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಇವರನ್ನೆಲ್ಲಾ ನೋಡಿ ಆನಂದಿಸಬೇಕಾದರೆ ಅಕ್ಟೋಬರ್ 11ರ ತನಕ ಕಾಯಲೇಬೇಕು. ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ಸಾಮಾನ್ಯ ಜ್ಞಾನದ ಜೊತೆಗೆ ಅಸಾಮಾನ್ಯ ಜ್ಞಾನವೂ ಬೇಕಾಗುತ್ತದೆ ಎಂಬುದು ಬಲ್ಲವರಅಭಿಪ್ರಾಯ.
ಈ ಕಾರ್ಯಕ್ರಮದ ಬಗ್ಗೆ ಬಿಗ್ ಬಿ ಪ್ರತಿಕ್ರಿಸಿದ್ದು ಹೀಗೆ, ಅಲಹಾದ್ ಪಕ್ಕದಲ್ಲಿರುವ ಅಲ್ಲಾಪುರದ ಗಲ್ಲಿಯೊಂದಕ್ಕೆ ನನ್ನ ಹೆಸರನ್ನು ಇಡಲಾಗಿದೆಯಂತೆ. ನನಗೆ ತುಂಬ ಹೆಮ್ಮೆ ಅನ್ನಿಸಿತು. ಕಾರಣ ನಾನು ಹುಟ್ಟಿದ್ದು ಅಲ್ಲೇ. ಮೊದಲ ಸ್ಪರ್ಧಿ ಹೇಳುವವರೆಗೂ ಈ ವಿಷಯ ನನಗೆ ಗೊತ್ತೇ ಇರಲಿಲ್ಲ. ನೀವು ಎಲ್ಲಿಂದ ಬಂದಿದ್ದೀರಿ ಎಂದು ಕೇಳಿದಾಗ ಅವರು ಹೇಳಿದ್ದು ಕೇಳಿ ಖುಷಿಯಾಯಿತು ಎಂದಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮದಲ್ಲಿ ರು.5 ಕೋಟಿ ಗೆಲ್ಲುವ ಅವಕಾಶವಿದೆ. ಈ ಹಿಂದೆ ರು.1 ಕೋಟಿ ಇದ್ದ ಬಹುಮಾನದ ಮೊತ್ತವನ್ನು ರು.5ಕೋಟಿಗೆ ಹೆಚ್ಚಿಸಲಾಗಿದೆ.