twitter
    For Quick Alerts
    ALLOW NOTIFICATIONS  
    For Daily Alerts

    ಸುವರ್ಣ ನ್ಯೂಸ್ ಗ್ರೂಪ್ ಎಡಿಟರಾಗಿ ವಿಶ್ವೇಶ್ವರ ಭಟ್

    By Prasad
    |

    Vishweshwar Bhat as Suvarna News group editor
    ಕನ್ನಡಪ್ರಭ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ವಿಶ್ವೇಶ್ವರ ಭಟ್ ಅವರು ಸುವರ್ಣ ನ್ಯೂಸ್ 24/7 ಕನ್ನಡ ಟಿವಿ ಚಾನಲ್ಲಿನ ಗ್ರೂಪ್ ಸಂಪಾದಕರಾಗಿಯೂ ಜುಲೈ 1ರಿಂದ ಹೊಸ ಮತ್ತು ಹೆಚ್ಚುವರಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.

    ಜೊತೆಗೆ, ರಾಮನಾಥ್ ಗೋಯೆಂಕಾ ಅವರು ಸ್ಥಾಪಿಸಿದ್ದ ಕನ್ನಡಪ್ರಭ ದಿನಪತ್ರಿಕೆಗೆ ಜುಲೈ 1ರಂದು ಕರ್ನಾಟಕದ ರಾಜ್ಯಸಭಾ ಸದಸ್ಯ ಮತ್ತು ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಹೊಸ ಮಾಲಿಕರಾಗಲಿದ್ದಾರೆ. ಆದರೆ, ಈ ಕುರಿತಾಗಿ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.

    ರಾಜೀವ್ ಚಂದ್ರಶೇಖರ್ ಅವರು ಜ್ಯುಪಿಟರ್ ಮೀಡಿಯಾ ಅಂಡ್ ಎಂಟರ್ಟೇನ್ಮೆಂಟ್ ವೆಂಚರ್ಸ್ ಸಂಸ್ಥೆ ಕನ್ನಡಪ್ರಭ ಪಬ್ಲಿಕೇಷನ್ಸ್ ಜೊತೆ ವಿಲೀನದ ಒಪ್ಪಂದದ ಪ್ರಕ್ರಿಯೆಯನ್ನು ಕಳೆದ ಮಾರ್ಚ್ ನಲ್ಲಿಯೇ ಪ್ರಾರಂಭಿಸಿತ್ತು. ಒಟ್ಟಾರೆ, 250 ಕೋಟಿ ರು.ಗೆ ಕೊಡುಕೊಳ್ಳುವ ಒಪ್ಪಂದ ಆಗಿದೆ.

    1968ರಿಂದ ಕ್ವೀನ್ಸ್ ರಸ್ತೆಯಲ್ಲಿರುವ ಎಕ್ಸ್ ಪ್ರೆಸ್ ಬಿಲ್ಡಿಂಗಿನಲ್ಲಿದ್ದ ಕನ್ನಡಪ್ರಭ ಈ ವರ್ಷದ ಅಕ್ಟೋಬರ್ ನಲ್ಲಿ ಸುವರ್ಣ ನ್ಯೂಸ್ ಇರುವ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.

    English summary
    Kannada daily Kannada Prabha editor-in-chief Vishweshwar Bhat will be taking addition charge as Suvarna News 24/7 TV channel. Rajeev Chandrasekhar will be the new owner of Kannada Prabha, which was established by Ramnath Goenka.
    Friday, July 1, 2011, 17:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X