ಜೀ ಕನ್ನಡದಲ್ಲಿ ಪ್ರತಿ ನಿತ್ಯ ಬೆಂಕಿಯಲಿ ಅರಳಿದ ಹೂ
1983ರಲ್ಲಿ ತೆರೆಕಂಡ ಬೆಂಕಿಯಲ್ಲಿ ಅರಳಿದ ಹೂ ಚಿತ್ರದ ಶೀರ್ಷಿಕೆ ಬಳಸಿಕೊಂಡು ನಟಿ ಪದ್ಮಜಾ ರಾವ್ ಅವರು ಹೊಸ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಜುಲೈ 4 ರಿಂದ ಪ್ರತಿ ನಿತ್ಯ ರಾತ್ರಿ 8 ಗಂಟೆಗೆ ಜೀ ಕನ್ನಡ ಟಿವಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂ ಧಾರಾವಾಹಿ ಪ್ರಸಾರವಾಗಲಿದೆ. ಯಶ್, ಪೂಜಾಗಾಂಧಿ, ದೊಡ್ಡಣ್ಣ, ಲಕ್ಷ್ಮಣ್, ಜಯಂತಿ ಸೇರಿದಂತೆ ಅನೇಕ ಹೆಸರಾಂತ ನಟ,ನಟಿಯರು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನಸಿನ ಕಣ್ಮಣಿ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿದ್ದ ನಿತ್ಯಾ ಈ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿದ್ದಾರೆ.30 ಎಪಿಸೋಡುಗಳು ಈಗಾಗಲೇ ರೆಡಿ ಇದೆ. ಇನ್ನೂ 70 ಎಪಿಸೋಡುಗಳಷ್ಟು ಚಿತ್ರಕಥೆ ಮುಂದುವರೆಯಲಿದೆ ಎಂದು ಪದ್ಮಜಾ ರಾವ್ ಹೇಳಿದ್ದಾರೆ.
ಈ ಧಾರಾವಾಹಿ ಮೂಲಕ ಬಿದ್ದು ಹೋಗಿರುವ ಜೀ ಕನ್ನಡ ಟಿಆರ್ ಪಿ ರೇಟಿಂಗ್ ಹೆಚ್ಚಿಸಲು ಸಾಕಷ್ಟು ಶ್ರಮ ಪಡಲಾಗುತ್ತಿದೆ. ಅನಂತ್ ನಾಗ್ ಸೇರಿದಂತೆ ಪ್ರಸಿದ್ಧ ನಟ ನಟಿಯರು ಈ ಸೀರಿಯಲ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಪ್ರೇಕ್ಷಕರ ಕುತೂಹಲ ಕೆರಳಿಸಲು ಟ್ರೈಲರ್ ಗಳನ್ನು ಬಳಸಲಾಗುತ್ತಿದೆ. ಫೇಸ್ ಬುಕ್ ನಲ್ಲೂ ಬೆಂಕಿಯಲ್ಲಿ ಅರಳಿದ ಹೂ ಕಾಣಿಸಿಕೊಂಡಿದೆ.


Click it and Unblock the Notifications











