twitter
    For Quick Alerts
    ALLOW NOTIFICATIONS  
    For Daily Alerts

    ಎಚ್ ಆರ್ ರಂಗನಾಥ್ ಹೊಸ ಚಾನಲ್ ಕದಂಬ

    By Shami
    |

    HR Ranganath
    ಸುದ್ದಿ ವಿಶ್ಲೇಷಣೆ, ಮಾತಿನ ಸುರಿಮಳೆ ಇಷ್ಟಪಡುವ ಕೋಟ್ಯಂತರ ಕನ್ನಡ ವೀಕ್ಷಕರ ಮನೆ ಬಾಗಿಲಿಗೆ ಮತ್ತೊಂದು ಸುದ್ದಿ ವಾಹಿನಿ ಬರಲಿದೆ. ಈ ಸುದ್ದಿ ವಾಹಿನಿಯ ಹೆಸರು "ಕದಂಬ 24/7". ಈ ಹೊಸ ಚಾನಲ್ ಸೂತ್ರಧಾರ ಎಚ್ ಆರ್ ರಂಗನಾಥ್. ಸದ್ಯಕ್ಕೆ ಹೊಸ ವಾಹಿನಿಗೆ ಸಿಬ್ಬಂದಿ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು ಶೀಘ್ರದಲ್ಲೆ "ಕದಂಬ 24/7" ಚಾನಲ್ ಆರಂಭವಾಗಲಿದೆ.

    ಈ ಮೂಲಕ ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮ ಕ್ಷೇತ್ರಕ್ಕೆ ಮತ್ತೊಂದು ಚಾನಲ್ ಸೇರ್ಪಡೆಯಾಗಲಿದೆ. ಸುವರ್ಣ , ಸಮಯ , ಜನಶ್ರೀ ಹಾಗೂ ಟಿವಿ 9 ಸುದ್ದಿ ವಾಹಿನಿಗಳಿಗೆ ಪ್ರಬಲ ಸ್ಪರ್ಧಿಯಾಗಿ "ಕದಂಬ" ಉದಯವಾಗುತ್ತಿರುವುದು ವಿಶೇಷ. ಹೊಸ ಚಾನಲ್ ಕುಲಗೋತ್ರಗಳಿಗಾಗಿ ದಟ್ಸ್‌ಕನ್ನಡ ನಿರೀಕ್ಷಿಸುತ್ತಿರಿ.

    ಅಂದಹಾಗೆ 'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಉತ್ತರ ಕನ್ನಡ ಜಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಹೊಸ ವಾಹಿನಿಗೆ ಅವರ ಹೆಸರಿಟ್ಟಿರುವುದು ಗಮನಾರ್ಹ.

    English summary
    24/7 news channel for Kannada named " Kadamba " The channel head is H R Ranganath, ex-editor of Suvarna news channel.
    Wednesday, August 3, 2011, 16:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X