Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಟಿವಿಯಲ್ಲಿ ರಾತ್ರಿವೇಳೆ ಮುಂಜಾವು
ಅಚ್ಚುಮೆಚ್ಚಿನ ಧಾರಾವಾಹಿಗಳನ್ನು ನೋಡುತ್ತಾ, ಟಿವಿಗೆ ಆತು ಕೂರುವ ಗೃಹಿಣಿಯರಿಗೆ ಇನ್ಮುಂದೆ ರಾತ್ರಿ 8.30ರ ವೇಳೆಗೆ 'ಮುಂಜಾವು ' ಕಾಣಿಸಲಿದೆ. ಉತ್ತಮ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಾ ಬಂದಿರುವ ಈಟಿವಿ ವಾಹಿನಿಯಲ್ಲಿ ಟಿ ಎನ್ ಸೀತಾರಾಂ ಅವರ ಆಶೀರ್ವಾದಗಳೊಂದಿಗೆ ಚಿತ್ರಪಟ ಎಂಬ ಹೊಸ ಬ್ಯಾನರ್ ಅಡಿಯಲ್ಲಿ ವಿನೋದ್ ವಿಧುಂಡಳೆ ಅವರು ಮುಂಜಾವು ಧಾರಾವಾಹಿಯನ್ನು ಸ್ವತಂತ್ರವಾಗಿ ನಿರ್ದೇಶಿಸಲಿದ್ದಾರೆ.
ಇಂದಿನ ಸಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಕಥೆಯನ್ನು ಹೆಣೆಯಲಾಗಿದೆ. ಸಂಪ್ರದಾಯಸ್ಥರು, ಮಾರ್ಡನ್ ನಾಗರೀಕರು, ಯುವ ಜನಾಂಗ ಸೇರಿದಂತೆ ಎಲ್ಲವರ್ಗದ ಜನರ ವೀಕ್ಷಣೆಗೆ ಮುಂಜಾವು ಸಿದ್ಧವಾಗಿದೆ. ವಿಧವಾ ವಿವಾಹ, ಐಟಿ ಕ್ಷೇತ್ರದ ಯುವ ಉದ್ಯಮಿಗಳು, ಸಂಸಾರ, ಅಣ್ಣ ತಮ್ಮಂದಿರಕಲಹ, ನೋವು ನಲಿವಿನ ಕಥಾಹಂದರ ಇದರಲ್ಲಿದೆ. ಕತ್ತಲೆಯನ್ನು ದೂರಾಗಿಸಿ, ಪ್ರಭೆಯನ್ನು ಬಾಳಿಗೆ ತರುವುದು ಮುಂಜಾವಿನ ಕೆಲಸ. ಎನ್ನುತ್ತಾರೆ ನಿರ್ದೇಶಕ ವಿನೋದ್.
ಈಗಾಗಲೇ 30 ಎಪಿಸೋಡ್ ಗಳಿಗಾಗುವಷ್ಟು ಚಿತ್ರೀಕರಣ ಪೂರೈಸಲಾಗಿದ್ದು, ಏನಿಲ್ಲಾ ಅಂದರೂ ಸುಮಾರು 500 ಎಪಿಸೋಡ್ ವರೆಗೂ ಧಾರಾವಾಹಿ ವಿಸ್ತರಣೆಗೊಳ್ಳಬಹುದು ಎಂದು ಚಿತ್ರಪಟದ ಕಾರ್ಯಕಾರಿ ನಿರ್ಮಾಪಕ ಸತ್ಯ ಹೇಳಿದರು. ಟಿಎನ್ ಶ್ರೀನಿವಾಸಮೂರ್ತಿ, ಹರೀಶ್, ನಂದಿನಿ ಮೂರ್ತಿ, ಪದ್ಮಾ ಕುಮಟಾ, ಹರಿಣಿ, ನಂಜುಂಡ ಮೂರ್ತಿ, ಸುಂದರಶ್ರೀ, ಕೃಷ್ಣ ಅಡಿಗ, ವೆಂಕಟರಾವ್,ನಂದಿನಿ ವಿಟ್ಟಳ ಪ್ರಮುಖ ಭೂಮಿಕೆಯಲ್ಲಿದ್ದಾರೆ. ದಿನಕ್ಕೆ ಕನಿಷ್ಠವೆಂದರೂ 40-50 ಸಿರಿಯಲ್ ಗಳು ಈಗಾಗಲೇ ಟಿವಿಯನ್ನು ಆಕ್ರಮಿಸಿದೆ. ಇದರ ಮಧ್ಯದಲ್ಲಿ ಮುಂಜಾವು ಮೆಗಾ ಸಿರಿಯಲ್ ಈ ಟಿವಿ ವಾಹಿನಿಯಲ್ಲಿ ಪ್ರತಿರಾತ್ರಿ 8.30ರಿಂದ 9 ರವರೆಗೂ ನಿಮ್ಮ ಮನರಂಜನೆಗಾಗಿ ಪ್ರಸಾರವಾಗಲಿದೆ.