Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರು ಶಿಷ್ಯರ ಜೋಡಿಯ 'ಕುಣಿಯೋಣು ಬಾರಾ'
ವಿಜೇತ ಜೋಡಿಗೆ ಹಿರೋ ಹೊಂಡಾ ಸಿಬಿಜಿ ಮೊಟಾರ್ಬೈಕ್ ಮತ್ತು 2.5 ಲಕ್ಷ ಮೌಲ್ಯದ ಶೈಕ್ಷಣಿಕ ವಿಮೆ ಹಾಗೂ ರನ್ನರ್ ಅಪ್ ಜೋಡಿಗೆ ಹೀರೊ ಹೊಂಡಾ ಫ್ಯಾಷನ್ ಪ್ಲಸ್ ಮೊಟಾರ್ಬೈಕ್ ಮತ್ತು 2 ಲಕ್ಷ ಮೌಲ್ಯದ ಶೈಕ್ಷಣಿಕ ವಿಮೆ ನೀಡಲಾಗುತ್ತದೆ.
ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಗುರುಶಿಷ್ಯರ ಜೋಡಿಯನ್ನು ಜೊತೆ ಜೊತೆಗೆ ಅಖಾಡಕ್ಕಿಳಿಸಿದ ಖ್ಯಾತಿ ಜೀ ಕನ್ನಡಕ್ಕೆ ಸಲ್ಲುತ್ತದೆ. ವಿನೂತನ ಮಾದರಿಯ ಈ ಕಾರ್ಯಕ್ರಮ ಬಹುಬೇಗನೇ ಜನಪ್ರಿಯತೆ ಗಳಿಸಿದೆ. ಸತತ ಆರು ಸೀಸನ್ಗಳಲ್ಲೂ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಈ ಕಾರ್ಯಕ್ರಮ ಈಗ ತನ್ನ ಆರನೇ ಭಾಗದಲ್ಲಿ ಗುರುಶಿಷ್ಯರ ಜೋಡಿಯನ್ನು ಕಣಕ್ಕಿಳಿಸಿದೆ.
ಅಂತಿಮ ಹಂತದ ಸ್ಪರ್ಧೆಯಲ್ಲಿ ಮೂರು ಸುತ್ತುಗಳಿದ್ದು ಮೊದಲ ಸುತ್ತು ಫ್ರೀ ಸ್ಟೈಲ್, ಎರಡನೇ ಸುತ್ತಿನಲ್ಲಿ ಟಪೋರಿ ಸ್ಟೈಲ್ ಮತ್ತು ಮೂರನೇ ಸುತ್ತಿನಲ್ಲಿ ಪಾಶ್ಚಾತ್ಯ ಶೈಲಿಯ ನೃತ್ಯವನ್ನು ಮಾಡಲು ಹೇಳಲಾಗುತ್ತದೆ. ಪ್ರತಿಯೊಂದು ಸುತ್ತಿನಲ್ಲೂ ಎಲಿಮಿನೇಷನ್ ಇದ್ದು ಒಂದೊಂದು ಸುತ್ತಿನಲ್ಲೂ ಒಂದು ಜೋಡಿಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವ ಮೂಲಕ ಅಂತಿಮ ಸ್ಪರ್ಧೆಗೆ ಎರಡು ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಒಂದು ತಂಡವನ್ನು ವಿಜೇತ ತಂಡವಾಗಿ ಹಾಗೂ ಒಂದು ತಂಡವನ್ನು ರನ್ನರ್ ಅಪ್ ತಂಡವಾಗಿ ನಿರ್ಧರಿಸಲಾಗುತ್ತದೆ.
ಸ್ಪರ್ಧೆಯ ನಿರ್ಣಾಯಕರಾಗಿ ನಟ ವಿಶಾಲ್ರಾಜ್ ಮತ್ತು ನಟಿಆಶಿತಾ ಕಾರ್ಯ ನಿರ್ವಹಿಸಲಿದ್ದು ವಿಶೇಷ ಅತಿಥಿಗಳಾಗಿ ತಾಜ್ಮಹಲ್ ಖ್ಯಾತಿಯ ನಟಅಜಯ್ ಹಾಗೂ ಅನಂತ್ರಾಜ್ ಭಾಗವಹಿಸಲಿದ್ದಾರೆ. ನಿರೂಪಣೆಯನ್ನು ಪ್ರಜ್ಞಾ ಮತ್ತು ಸಮೀರ್ ನಿರ್ವಹಿಸಲಿದ್ದಾರೆ.
(ದಟ್ಸ್ ಕನ್ನಡ ಕಿರುತೆರೆ)
ಜೀ
ಕನ್ನಡ
ವಾರ್ತಾ
ವಾಚಕಿಯಾಗಿ
ನಟಿ
ತಾರಾ!
ಜೀ
ಕನ್ನಡ
ನೃತ್ಯ
ರಸಸಂಜೆ
ಸವಿಯೋಣ
ಬಾರಾ!