twitter
    For Quick Alerts
    ALLOW NOTIFICATIONS  
    For Daily Alerts

    ಚಂದನ ವಾಹಿನಿಯಲ್ಲಿ ಭಗವದ್ಗೀತಾ ಪ್ರವಚನ

    By Staff
    |

    Bhagavad Gita
    ಸತ್ಯ ಚೇತನ ಮೋಕ್ಷ ಸಾಧನ, ಮಾಧವ ನುಡಿದ ಅಮೃತ ಗೀತೆ...ಭವದ್ಗೀತೆಯ ಮಾಹಸಂದೇಶ ಚಂದನ ವಾಹಿನಿಯಲ್ಲಿ (ಡಿಡಿ 1)ದಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 10ರಿಂದ ಪ್ರತಿ ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಬೆಳಗ್ಗೆ 8 ರಿಂದ 8.30ಕ್ಕೆ 'ಭಗವದ್ಗೀತ: ಪೀಠಿಕೆ ಪ್ರವಚನ' ಪ್ರಸಾರವಾಗಲಿದೆ. ಪ್ರವಚನಕಾರರು ಪಾವಗಡ ಪ್ರಕಾಶ್ ರಾವ್.

    ಶ್ರೀ ದೇವಿ ಕ್ರಿಯೇಷನ್ ಲಾಂಛನದಲ್ಲಿ ಅಯ್ಯಂಗಾರ್ ಹೋಂ ಪ್ರಾಡಕ್ಟ್ ನ ಬಿ.ಕೆ.ದ್ವಾರಕನಾಥರು ಈ ಪ್ರವಚನದ ನಿರ್ಮಾಪಕರು. ಖ್ಯಾತ ಪ್ರವಚನಕಾರರಾದ ಪಾವಗಡ ಪ್ರಕಾಶ್‌ರಾವ್ ಅವರಿಂದ ಗತ ವೈಭವದ ಸತ್ಯದ ಸೂಕ್ಷ್ಮತೆಯನ್ನು, ವ್ಯವಹಾರಿಕ ಚಾಣಾಕ್ಷತೆಯನ್ನು ನ್ಯಾಯದ ಅಡಿಪಾಯವಾಗಿರುವ ಭಗವದ್ಗೀತೆಯ ಬೋಧನೆಯನ್ನು ಸಾಮಾನ್ಯ ಜನರಿಗೆ ಮನದಟ್ಟಾಗುವ ರೀತಿಯಲ್ಲಿ ಪ್ರವಚನ ಮಾಡಲಾಗಿದೆ.

    ಪುರುಷನಾಥ್.ಕೆ ನಿರ್ದೇಶಿಸುತ್ತಿರುವ ಈ ಧಾರವಾಹಿಗೆ ಸಂಗೀತ ಎಂ.ಎಸ್.ಮಾರುತಿ, ಸಾಹಿತ್ಯ ಚಿಂದೋಡಿ ಬಂಗಾರೇಶ್, ಗಾಯಕರು : ಎಸ್.ಪಿ.ಬಾಲಸುಬ್ರವ್ಮಣ್ಯಂ, ಸಂಕಲನ : ಹರೀಶ್ ಕೊಡ್ವಾಡಿ, ಸಹ ನಿರ್ದೇಶನ ರಾಘವೇಂದ್ರ ಗುಂಡ್ಮಿ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Friday, January 8, 2010, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X