twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಾಸ್ ರಿಯಾಲಿಟಿ ಶೋಗೆ ಸ್ವಾಮಿ ಅಗ್ನಿವೇಷ್

    By Rajendra
    |

    Swami Agnivesh in Bigg Boss
    ಕಾವಿತೊಟ್ಟ ಹಲವಾರು ಸ್ವಾಮೀಜಿಗಳ ರಿಯಾಲಿಟಿ ಈಗಾಗಲೆ ಜನಕ್ಕೆ ಗೊತ್ತಾಗಿದೆ. ಆದರೆ ವಿವಾದಿತ ಸ್ವಾಮೀಜಿ ಎಂದೇ ಖ್ಯಾತರಾಗಿರುವ ಸ್ವಾಮಿ ಅಗ್ನಿವೇಷ್ (72) ಅವರು ಕಿರುತೆರೆಯ ರಿಯಾಲಿಟಿ ಶೋ 'ಬಿಗ್ ಬಾಸ್ 5'ಕ್ಕೆ ಪಾದಾರ್ಪಣೆ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಸ್ವಾಮೀಜಿಗಳ ಪಾದಸ್ಪರ್ಶದಿಂದ ರಿಯಾಲಿಟಿ ಶೋ ಮತ್ತಷ್ಟು ರಂಗೇರಿದೆ.

    ಸ್ವಾಮಿ ಅಗ್ನಿವೇಷ್ ಅವರು ಇಲ್ಲೇನು ಮಾಡುತ್ತಾರೆ? ಬಿಗ್ ಬಾಸ್ ರಿಯಾಲಿಟಿ ಶೋನ ಮಹಿಳಾ ಸ್ಪರ್ಧಿಗಳಲ್ಲಿ ಹೊಸ ಉತ್ಸಾಹ ತುಂಬಲಿದ್ದು, ಅವರಲ್ಲಿ ಸಾಮಾಜಿಕಪ್ರಜ್ಞೆಯನ್ನು ಜಾಗೃತಗೊಳಿಸಲಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಸ್ವಾಮೀಜಿಗಳು ಹೇಳಿರುವುದೇನೆಂದರೆ.

    ಬಿಗ್ ಬಾಸ್‌ ಮನೆಯಲ್ಲಿರುವ ಯುವತಿಯರಿಗೆ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಕಿಂಚಿತ್ತೂ ತಿಳುವಳಿಕೆಯಿಲ್ಲ. ಸಮಾಜದಲ್ಲಿ ಅದೆಷ್ಟೋ ಹೆಣ್ಣುಭ್ರೂಣಗಳನ್ನು ಹತ್ಯೆ ಮಾಡಲಾಗುತ್ತಿದೆ. ಸತಿಸಹಗಮನ ಪದ್ಧತಿಯಂತಹ ಸಾಮಾಜಿಕ ಪಿಡುಗಗಳ ಬಗ್ಗೆ ಅವರಿಗೆ ಅರಿವಿತ್ತೋ ಇಲ್ಲವೋ ಗೊತ್ತಿಲ್ಲ. ಇವೆಲ್ಲವನ್ನೂ ತಿಳಿಸಿ ಹೇಳುತ್ತೇನೆ ಎಂದಿದ್ದಾರೆ.

    ಈ ರೀತಿಯ ರಿಯಾಲಿಟಿ ಶೋಗಳಲ್ಲಿ ಭಾಗಹಿಸುವುದರಿಂದ ತಮ್ಮ ಗೌರವ, ಘನತೆಗಳೇನು ಕಡಿಮೆಯಾಗಲ್ಲ. ಆರಂಭದಲ್ಲಿ ಶೇ.90ರಷ್ಟು ಮಂದಿ ಈ ಶೋನಲ್ಲಿ ಭಾಗವಹಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ತಾವೇ ಸ್ವತಃ ಕೆಲವೊಂದು ಸಂಚಿಕೆಗಳನ್ನು ನೋಡಿದ ಮೇಲೆ ಭಾಗವಹಿಸಲೇಬೇಕು ಎಂದು ತೀರ್ಮಾನಿಸಿದೆವು ಎನ್ನುತ್ತಾರೆ.

    ಒಟ್ಟಿನಲ್ಲಿ ಕಾವಿಧಾರಿ ಸ್ವಾಮೀಜಿಗಳು ಇದೇ ಮೊದಲ ಬಾರಿಗೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಅಡಿಯಿಡುತ್ತಿರುವುದರಿಂದ ಕಾರ್ಯಕ್ರಮ ಕಾವೇರಿದೆ. ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಟೀಂನ ಅಗ್ನಿವೇಷ್ ಎಂಟ್ರಿ ಮೂಲಕ ಕಲರ್ಸ್ ವಾಹಿನಿಯ ಟಿಆರ್‌ಪಿಯಲ್ಲಿ ಗಮನಾರ್ಹ ಏರಿಕೆ ಕಂಡುಬರುವುದು ಗ್ಯಾರಂಟಿಯಾಗಿದೆ. (ಏಜೆನ್ಸೀಸ್)

    English summary
    A controversial personality himself, Swami Agnivesh is all set to enter the infamous house of Bigg Boss today with a special mission. And he intends to create awareness among the women inmates of the house about their social responsibilities.
    Tuesday, November 8, 2011, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X