ಟಿ ಎನ್ ಸೀತಾರಾಮ್ ಮುಕ್ತ ಮುಕ್ತ ಶಾಂಭವಿ ನಾಪತ್ತೆ
ಗೌರಿಬಿದನೂರು ಸೀತಾರಾಮ್ (ಟಿ ಎನ್ ಸೀತಾರಾಮ್) ಅವರ 'ಮುಕ್ತ ಮುಕ್ತ' ಧಾರಾವಾಹಿ ಮುಖ್ಯಮಂತ್ರಿ ಕೊಲೆಯ ನಂತರ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಕೊಲೆಯ ಪ್ರಮುಖ ಆರೋಪಿಗಳಾದ ಶರ್ಮಿಳಾ, ನಿವೇದಿತಾ, ಮಧುಸೂಧನ್, ನಿರ್ಮಲಾ ಕೊಂಡಹಳ್ಳಿ ಎಲ್ಲಾ ನ್ಯಾಯಾಲಯದಲ್ಲಿ ನಿಂತಿದ್ದಾರೆ.
ಅಚ್ಚರಿ ತರುವ ವಿಚಾರವೆಂದರೆ ಶಂಕರಮೂರ್ತಿ ಅವರ ಮನೆಯಲ್ಲಿ ಇಷ್ಟೆಲ್ಲಾ ರಾದ್ಧಾಂತ ಕೋಲಾಹಲವೇ ನಡೆಯುತ್ತಿದ್ದರೂ ಮನೆಯ ಹಿರಿಯ ಮಗಳಾದ ಶಾಂಭವಿ ಮತ್ತು ಹಾಡುಗಾರ ಮಗ ಶಶಿಕಾಂತರ ಪ್ರವೇಶವೇ ಆಗದಿರುವುದು!
ಈ ಹಿಂದೆ ಇಡೀ ಧಾರಾವಾಹಿಯನ್ನು ಆವರಿಸಿಕೊಂಡಿದ್ದ ಶಾಂಭವಿಯನ್ನು ನೋಡಿಯೇ ಹಲವಾರು ತಿಂಗಳಾಯಿತು. ಸೀತಾರಾಮ್ ಏನೋ ಜಾಣತನ ಉಪಯೋಗಿಸಿ ಪ್ರಮುಖ ಪಾತ್ರಧಾರಿಗಳಿಗೆ ಅವಕಾಶ ನಿರಾಕರಣೆ ಮಾಡಿದರೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಬೇಕಾಗುತ್ತದೆ.
More from Filmibeat
English summary
After the murder of Chief Minister in Etv Kannada tele serial Muktha Muktha the main charector Shambhavi disappears. It was directed by T.N. Seetharam, who has enacted in the serial.The serial aimed to bring civic awareness with stories to fight for justice against all bureaucratic and political odds.
ಕಿರುತೆರೆ ಟಿಎನ್ ಸೀತಾರಾಮ್ ಧಾರಾವಾಹಿ ಈಟಿವಿ ಕನ್ನಡ ಮುಕ್ತ ಮುಕ್ತ tn seetharam etv kannada small screen muktha muktha


Click it and Unblock the Notifications












