twitter
    For Quick Alerts
    ALLOW NOTIFICATIONS  
    For Daily Alerts

    ಜನಪ್ರಿಯತೆಯತ್ತ ಜನಶ್ರೀ ವಾಹಿನಿ ದಾಪುಗಾಲು

    By Rajendra
    |

    Janashree becoming popular
    ಎಲ್ಲರ ಊಹೆಯನ್ನೂ ಜನಶ್ರೀ ವಾಹಿನಿ ಉಲ್ಟಾಪಲ್ಟಾ ಮಾಡಿದೆ. ಎಲ್ಲಿ ಈ ವಾಹಿನಿ ರೆಡ್ಡಿ ಸಹೋದರರ ತುತ್ತೂರಿಯಾಗುತ್ತದೋ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಾಡಿನ ನಾಡಿಮಿಡಿತಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿದೆ.

    ನಾಡಿನ ಸಮಸ್ತ ಚಾನಲ್‌ಗಳು ತಮ್ಮ ದಿನಚರಿಯನ್ನು ಜ್ಯೋತಿಷ್ಯ, ಭವಿಷ್ಯದ ಮೂಲಕ ಆರಂಭಿಸಿದರೆ ಜನಶ್ರೀ ಮಾತ್ರ ಇದಕ್ಕೆ ತದ್ವಿರುದ್ಧ. ನಿರುದ್ಯೋಗಿ ಯುವಕ ಯುವತಿಯರಿಗೆ ಉಪಯುಕ್ತವಾದ ಉದ್ಯೋಗವಕಾಶಗಳ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾ ಯುವಕರಿಗೆ ನೆರವಾಗುತ್ತಿದೆ.

    ಜನಶ್ರೀ ವಾಹಿನಿಯಲ್ಲಿ ಇನ್ನೂ ಹಲವಾರು ಉಪಯುಕ್ತ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಸುದ್ದಿಯ ಪ್ರಸಾರದಲ್ಲಿ ವೇಗವಿಲ್ಲ ಹಾಗೂ ಧಂ ಇಲ್ಲ ಎಂಬ ಆರೋಪಗಳನ್ನು ಹೊರತುಪಡಿಸಿದರೆ, ರೋಚಕವಾಗಿ ಬಿಂಬಿಸುವ, ದಿಗಿಲು ಹುಟ್ಟಿಸುವಂತೆ ಪ್ರಸಾರ ಮಾಡುವ ಸಾಹಸ ಮಾತ್ರ ಕೈಹಾಕಿಲ್ಲ.

    ರೆಡ್ಡಿ ಸೋದರರ ಮಾಲೀಕತ್ವದ ವಾಹಿನಿಯಾದರೂ ಅವರ ನಿಲುವು ಒಲವುಗಳನ್ನು ಬದಿಗಿಟ್ಟು ವಾಹಿನಿಯನ್ನು ಜಾಣ್ಮೆಯಿಂದ ಮುನ್ನಡೆಸುತ್ತಿದ್ದಾರೆ ಅನುಭವಿ ಪತ್ರಕರ್ತ ಅನಂತ ಚಿನಿವಾರ್. ರಾಜಕೀಯ ಪಲ್ಲಟಗಳ ಸಂದರ್ಭದಲ್ಲಿಜನಶ್ರೀ ವಾಹಿನಿಯ ನಿರ್ವಹಣೆ ಸೊಗಸಾಗಿತ್ತು. ಈ ಎಲ್ಲದರ ಫಲಿತಾಂಶ ಟಿಆರ್‌ಪಿಯಲ್ಲಿ ಜನಶ್ರೀ ಮುನ್ನಡೆ ಸಾಧಿಸಿದೆ. ನೀವೇನಂತೀರಾ? (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Kannada news TV channel Janashree has not become mouthpiece of Reddy brothers. Day by day the channel is gaining popularity and the channel TRP rating is also increasing. Instead of telecasting astrology in morning slot the channel is broadcasting employment opportunities for youth.
    Tuesday, August 9, 2011, 18:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X