ಜನಪ್ರಿಯತೆಯತ್ತ ಜನಶ್ರೀ ವಾಹಿನಿ ದಾಪುಗಾಲು

ನಾಡಿನ ಸಮಸ್ತ ಚಾನಲ್ಗಳು ತಮ್ಮ ದಿನಚರಿಯನ್ನು ಜ್ಯೋತಿಷ್ಯ, ಭವಿಷ್ಯದ ಮೂಲಕ ಆರಂಭಿಸಿದರೆ ಜನಶ್ರೀ ಮಾತ್ರ ಇದಕ್ಕೆ ತದ್ವಿರುದ್ಧ. ನಿರುದ್ಯೋಗಿ ಯುವಕ ಯುವತಿಯರಿಗೆ ಉಪಯುಕ್ತವಾದ ಉದ್ಯೋಗವಕಾಶಗಳ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾ ಯುವಕರಿಗೆ ನೆರವಾಗುತ್ತಿದೆ.
ಜನಶ್ರೀ ವಾಹಿನಿಯಲ್ಲಿ ಇನ್ನೂ ಹಲವಾರು ಉಪಯುಕ್ತ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಸುದ್ದಿಯ ಪ್ರಸಾರದಲ್ಲಿ ವೇಗವಿಲ್ಲ ಹಾಗೂ ಧಂ ಇಲ್ಲ ಎಂಬ ಆರೋಪಗಳನ್ನು ಹೊರತುಪಡಿಸಿದರೆ, ರೋಚಕವಾಗಿ ಬಿಂಬಿಸುವ, ದಿಗಿಲು ಹುಟ್ಟಿಸುವಂತೆ ಪ್ರಸಾರ ಮಾಡುವ ಸಾಹಸ ಮಾತ್ರ ಕೈಹಾಕಿಲ್ಲ.
ರೆಡ್ಡಿ ಸೋದರರ ಮಾಲೀಕತ್ವದ ವಾಹಿನಿಯಾದರೂ ಅವರ ನಿಲುವು ಒಲವುಗಳನ್ನು ಬದಿಗಿಟ್ಟು ವಾಹಿನಿಯನ್ನು ಜಾಣ್ಮೆಯಿಂದ ಮುನ್ನಡೆಸುತ್ತಿದ್ದಾರೆ ಅನುಭವಿ ಪತ್ರಕರ್ತ ಅನಂತ ಚಿನಿವಾರ್. ರಾಜಕೀಯ ಪಲ್ಲಟಗಳ ಸಂದರ್ಭದಲ್ಲಿಜನಶ್ರೀ ವಾಹಿನಿಯ ನಿರ್ವಹಣೆ ಸೊಗಸಾಗಿತ್ತು. ಈ ಎಲ್ಲದರ ಫಲಿತಾಂಶ ಟಿಆರ್ಪಿಯಲ್ಲಿ ಜನಶ್ರೀ ಮುನ್ನಡೆ ಸಾಧಿಸಿದೆ. ನೀವೇನಂತೀರಾ? (ದಟ್ಸ್ಕನ್ನಡ ಸಿನಿವಾರ್ತೆ)
More from Filmibeat
English summary
Kannada news TV channel Janashree has not become mouthpiece of Reddy brothers. Day by day the channel is gaining popularity and the channel TRP rating is also increasing. Instead of telecasting astrology in morning slot the channel is broadcasting employment opportunities for youth.


Click it and Unblock the Notifications











