Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೀಮಾ ತೀರದ ಹಂತಕರು ಪುಸ್ತಕ ಬಿಸಿಬಿಸಿ ಭಕ್ಕರಿ
ಭೀಮಾ ತೀರದ ಹಂತಕರು ವರದಿಯ ಮುಖಾಂತರ ಚಂದಪ್ಪ ಹರಿಜನನನ್ನು ಬೆಳಕಿಗೆ ತಂದಿದ್ದೇ ನಾನು ಎಂದು ಪತ್ರಕರ್ತ ರವಿ ಬೆಳಗೆರೆ ಹೇಳುತ್ತಿದ್ದರೆ, ಚಂದಪ್ಪನ ಬಗ್ಗೆ ಮೊತ್ತಮೊದಲು ಬರೆದಿದ್ದೇ ನಾನು ಎಂಬ ಸಂಗತಿಯನ್ನು ಚಂದಪ್ಪನ ದೂರದ ಸಂಬಂಧಿ ಮತ್ತು ಪತ್ರಕರ್ತ ಟಿ.ಕೆ. ಮಳಗೊಂಡ ಎಂಬುವವರು ಹೇಳಿಕೊಂಡಿದ್ದಾರೆ.
ಈ ವಿವಾದದ ಚರ್ಚೆ ಅನೇಕ ಖಾಸಗಿ ಬದುಕನ್ನು ಮೂರಾಬಟ್ಟೆ ಕೂಡ ಮಾಡಿದೆ. ಚಿತ್ರಕ್ಕೂ ವಿವಾದಕ್ಕೂ ಸಂಬಂಧವೇ ಇಲ್ಲದ ಗಂಡ ಹೆಂಡತಿಯರ ಜಗಳ, ಹೆಂಡತಿಯರ ಸಂಖ್ಯೆ, ಮಾಡಿಕೊಂಡಿರುವ ಆಸ್ತಿ ಅವರಿವರ ಬಾಯಲ್ಲಿ ಬಟಾಬಯಲಾಗಿ ವೀಕ್ಷಕರಲ್ಲಿ ಚರ್ಚೆಯ ಬಗ್ಗೆ ಅಸಹ್ಯ, ರೇಜಿಗೆಯನ್ನೂ ಹುಟ್ಟಿಸಿರುವುದು ಸುಳ್ಳಲ್ಲ.
ಅಚ್ಚರಿಯ ಸಂಗತಿಯೆಂದರೆ, ಈ ಚರ್ಚೆಯಿಂದ ಯಾರಿಗೂ ನಷ್ಟವಾಗಿಲ್ಲ, ಎಲ್ಲರಿಗೂ ಲಾಭವಾಗಿದೆ. ಟಿವಿ ವೀಕ್ಷಕರಿಗೆ ಮತ್ತು ಪತ್ರಿಕೆಯ ಓದುಗರಿಗೆ ಭರ್ಜರಿ ಮನರಂಜನೆ ದೊರೆಯುತ್ತಿದೆ. ನಿರ್ಮಾಪಕರನ್ನು, ನಟರನ್ನು, ಪತ್ರಕರ್ತರನ್ನು ಗುಡ್ಡೆ ಹಾಕಿಕೊಂಡು ಗಂಟೆಗಟ್ಟಲೆ ಚರ್ಚೆ ನಡೆಸುತ್ತಿರುವ ಅನೇಕ ಟಿವಿ ಚಾನಲ್ಲುಗಳು ಟಿಆರ್ಪಿಯನ್ನು ಭರ್ಜರಿಯಾಗಿ ಏರಿಸಿಕೊಂಡಿವೆ.
ವಿವಾದದ ಕೇಂದ್ರಬಿಂದುವಾಗಿರುವ ರವಿ ಬೆಳಗೆರೆಯವರೂ ಹಿಂದೆ ಬಿದ್ದಿಲ್ಲ. ಭೀಮಾ ತೀರದ ಜನರನ್ನು ಸ್ಟುಡಿಯೋ ಒಳಗೆ ಕರೆತಂದರು, ಪುಸ್ತಕದ ಪುಟಪುಟಗಳನ್ನು ತಿರುವಿಹಾಕಿ ಜನರ ಮುಂದೆ ಭೀಮಾ ತೀರದ ಹಂತಕರ ಕಥಾನಕವನ್ನು ಬಿಚ್ಚಿಟ್ಟರು. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಬೆಳಗೆರೆಯವರು, ನಗರದ ಹಲವೆಡೆಗಳಲ್ಲಿ ಪುಸ್ತಕದ ಬ್ಯಾನರುಗಳನ್ನು ಹಾರಾಡಿಸಿದ್ದಾರೆ. ಹಡ್ಸನ್ ವೃತ್ತದಲ್ಲಿ ಮತ್ತು ಚಾಮರಾಜಪೇಟೆಯ ಉಮಾ ಥಿಯೇಟರ್ ಮುಂದೆ ಈ ಬ್ಯಾನರುಗಳು ರಾರಾಜಿಸುತ್ತಿರುವುದು ನಮ್ಮ ವರದಿಗಾರರ ಗಮನಕ್ಕೆ ಬಂದಿದೆ.
"ರವಿ ಬೆಳಗೆರೆಯವರ ಭೀಮಾ ತೀರದ ಹಂತಕರು, ಇದು ಕಥೆ ಕದ್ದವರ ಸಿನೆಮಾ ಅಲ್ಲ, ಉತ್ತರ ಕರ್ನಾಟಕದ ನೆತ್ತರಗಾಥೆಯ ನೈಜ ಪುಸ್ತಕ, ಬೆಳಗೆರೆ ಬುಕ್ಸ್ ಅಂಡ್ ಕಾಫಿ" ಎಂದು ಬರೆಸಲಾದ ಬ್ಯಾನರುಗಳು ಜನರನ್ನು ಆಕರ್ಷಿಸುತ್ತಿವೆ. ಬಸವನಗುಡಿಯಲ್ಲಿರುವ ರವಿಯವರ ಬೆಳಗೆರೆ ಬುಕ್ಸ್ ಅಂಡ್ ಕಾಫಿ ಶಾಪಿನಲ್ಲಿ, 150 ರು. ಮೊತ್ತದ, 185+20 ಪುಟಗಳಿರುವ, ಮೂರನೇ ಮುದ್ರಣ ಕಂಡಿರುವ 'ಭೀಮಾ ತೀರದ ಹಂತಕರು' ಪುಸ್ತಕ ಬಿಸಿಬಿಸಿ ದೋಸೆ, ಖಡಕ್ ಜ್ವಾಳದ ಭಕ್ಕರಿಯಂತೆ ಮಾರಾಟವಾಗುತ್ತಿರುವುದಂತೂ ಖಂಡಿತ.