twitter
    For Quick Alerts
    ALLOW NOTIFICATIONS  
    For Daily Alerts

    ಗುಲಬರ್ಗಾ ದೂರದರ್ಶನದಿಂದ 'ನಗೆ ಸಿಂಚನ'

    By Rajendra
    |

    Doordarshan
    ಗುಲಬರ್ಗಾ ದೂರದರ್ಶನ ಕೇಂದ್ರವು ಯುಗಾದಿ ಹಬ್ಬದ ಪ್ರಯುಕ್ತ ಗುಲಬರ್ಗಾ ನಗರದ ನೂತನ ವಿದ್ಯಾಲಯ ಆವರಣದಲ್ಲಿರುವ ಸತ್ಯಪ್ರಮೋದ ಸಭಾಂಗಣದಲ್ಲಿ 2010ರ ಮಾರ್ಚ್ 10ರಂದು ಸಂಜೆ 6 ಗಂಟೆಗೆ 'ನಗೆ ಸಿಂಚನ' ವಿಶೇಷ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ ಗಂಗಾವತಿಯ ಬಿ.ಪ್ರಾಣೇಶ,ಗುಲಬರ್ಗಾದ ಇಂದುಮತಿ ಸಾಲಿಮಠ, ಹೇಮಂತ ಕೊಲ್ಹಾಪೂರ,ಗುಂಡಣ್ಣ ಡಿಗ್ಗಿ, ಡಿ.ಆರ್.ಕಲಬುರ್ಗಿ ,ನಾರಾಯಣ ಕುಲಕರ್ಣಿ ಹಾಗೂ ಯಾದಗಿರಿಯ ಬಸವರಾಜ ಮಹಾಮನಿ ಅವರು ಪಾಲ್ಗೊಳ್ಳಲಿದ್ದಾರೆ.

    ಇದೇ ಸಂದರ್ಭದಲ್ಲಿ ದೂರದರ್ಶನ ಭಂಡಾರದಿಂದ ಆಯ್ದ ಅತ್ಯಮೂಲ್ಯ ಸಂಗೀತ ಹಾಗೂ ನೃತ್ಯಗಳ ವಿಸಿಡಿ, ಡಿವಿಡಿ ಹಾಗೂ ಎಸಿಡಿಗಳ ಮಾರಾಟ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಗುಲಬರ್ಗಾ ದೂರದರ್ಶನ ಕೇಂದ್ರದ ಅಸಿಸ್ಟೆಂಟ್ ಸ್ಟೇಶನ್ ಡೈರೆಕ್ಟರ್ ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.

    Wednesday, March 10, 2010, 12:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X