Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐದು ಕೋಟಿಗೆ ಆಸೆ ಪಟ್ಟು ಒಂದು ಕೋಟಿ ಜಸ್ಟ್ ಮಿಸ್!
ಐದು ಕೋಟಿ ರುಪಾಯಿಗೆ ಆಸೆಪಟ್ಟು ಒಂದು ಕೋಟಿ ರುಪಾಯಿ ಕಳೆದುಕೊಂಡವನ ಕತೆಯಿದು. ಮನುಷ್ಯನಿಗೆ ಆಸೆ ಇರಬೇಕು ಆದರೆ ದುರಾಸೆ ಇದ್ದರೆ ಹೀಗೇನೆ ಆಗೋದು ನೋಡಿ ಎನ್ನುತ್ತಿದ್ದಾರೆ ಈತನ ಪಾಡನ್ನು ಕಂಡವರು! ಇದು 'ಕೌನ್ ಬನೇಗಾ ಕರೋಡ್ಪತಿ'ಯ ಕಮಾಲ್!
ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ 'ಕೌನ್ ಬನೇಗಾ ಕರೋಡ್ಪತಿ' ನಾಲ್ಕನೆ ಆವೃತ್ತಿಯಲ್ಲಿ ಸ್ಪರ್ಧಿಗಳು ರು.5 ಕೋಟಿ ಗೆಲ್ಲಬಹುದು. ಆದರೆ ಬಿಗ್ ಬಿ ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕು ಅಷ್ಟೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಉತ್ತರ ಪ್ರದೇಶದ ಪ್ರಶಾಂತ್ ಬಟರ್ ಎಂಬುವವರು ರು.1 ಕೋಟಿವರೆಗೂ ಬಹುಮಾನದ ಮೊತ್ತವನ್ನು ತನ್ನದಾಗಿಸಿಕೊಂಡಿದ್ದರು.
ಆದರೆ ಐದು ಕೋಟಿ ಗೆಲ್ಲಲೇ ಬೇಕು ಎಂದು ನಿಶ್ಚಯಿಸಿದ್ದ ಅವರು ಕಾರ್ಯಕ್ರಮದ ಮುಂದಿನ ಹಂತದಲ್ಲಿ ಮುಗ್ಗರಿಸಿದ್ದಾರೆ. ಕಡೆಗೆ ಅವರಿಗೆ ಸಿಕ್ಕಿದ್ದು ರು.320,000 ಅಷ್ಟೇ. ಕಾರ್ಯಕ್ರಮದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಾ ರು.50 ಲಕ್ಷದವರೆಗೂ ತಲುಪಿದ್ದರು. ಈ ಹಂತದಲ್ಲಿ ಯಾವುದೇ ಲೈಫ್ ಲೈನ್ ಸಂಖ್ಯೆಯನ್ನು ಬಳಸದೆ ರು.1 ಕೋಟಿಯನ್ನು ಪಡೆಯಲು ಅರ್ಹರಾಗಿದ್ದರು.
ಕಡೆಗೆ ಐದು ಕೋಟಿ ಗೆಲ್ಲಬೇಕೆಂಬ ಬಟರ್ ಆಸೆ ನಿರಾಸೆಯಾಗಿದೆ. ಒಂದು ವೇಳೆ ತಮಗೆ ಐದು ಕೋಟಿ ಬಹುಮಾನ ಬಂದಿದ್ದರೆ, ತಾವು ದೀಪಿಕಾ ಪಡುಕೋಣೆ ಜೊತೆ ಅಂಟಾರ್ಟಿಕಾದಲ್ಲಿ ರೋಮ್ಯಾಂಟಿಕ್ ಹಾಲಿಡೇ ಕಳೆಯುತ್ತಿದ್ದೆ. ತಂದೆ ತಾಯಿಗೆ ಬಿಎಂಡಬ್ಲ್ಯು ಐಶಾರಾಮಿ ಕಾರು ಉಡುಗೊರೆಯಾಗಿ ನೀಡುತ್ತಿದ್ದೆ ಎಂದಿದ್ದಾರೆ. ಆದರೆ ಎಲ್ಲವೂ ಠುಸ್ ಆಗಿದೆ.