ಲಲನೆಯರಿಂದ ಸ್ವಾಮೀಜಿ ಪಾರು ಮಾಡಿದ ಬಿಗ್ ಬಾಸ್

ಆದರೆ, ಕೆಲಕಾಲ ಲೋನಾವಾಲದ ಬಿಗ್ ಬಾಸ್ ಮನೆಯಲ್ಲಿ ನೆಲೆಸಿದ್ದ ಕಾವಿಧಾರಿ ಸ್ವಾಮೀಜಿಯನ್ನು ವಾಪಾಸ್ ಕರೆಸಿಕೊಳ್ಳಲಾಯಿತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಅಗ್ನಿವೇಷ್ ಅವರು ರಿಯಾಲಿಟಿ ಶೋವನ್ನು ಹೊಗಳುತ್ತಾ ನ್ಯೂಸ್ ಚಾನೆಲ್ ಚರ್ಚಾಕೂಟಕ್ಕಿಂತ ಬಿಗ್ ಬಾಸ್ ಕಿತ್ತಾಟವೇ ಅರ್ಥಪೂರ್ಣ ಎಂದು ಹೇಳಿದ್ದಾರೆ.
ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಟೀಂನ ಸಕ್ರಿಯ ಸದಸ್ಯರಾಗಿದ್ದ ಅಗ್ನಿವೇಷ್, ಸ್ವಾಮಿ ದ್ರೋಹದ ಆರೋಪ ಹೊತ್ತು ಹೊರಬೀಳಬೇಕಾಗಿತ್ತು. ಈಗ ಮತ್ತೆ ಟೀಂ ಅಣ್ಣಾಗೆ ಎಂಟ್ರಿ ಕೊಡುವ ಮಾತಾಡುತ್ತಿದ್ದಾರೆ. ಅಣ್ಣಾ ಹಜಾರೆ ಕೂಡಾ ಅಗ್ನಿವೇಷ್ ಅವರನ್ನು ಕ್ಷಮಿಸಿ ತಂಡಕ್ಕೆ ಸೇರಿಸಿಕೊಳ್ಳಲು ಮನಸ್ಸು ಮಾಡಿದ್ದಾರಂತೆ.
ಕಾವಿಧಾರಿ ಅಗ್ನಿವೇಷ್ ಇರುವಿಕೆಯಿಂದ ಮುಜುಗರ ಅನುಭವಿಸುತ್ತಿದ್ದ ತುಂಡುಡುಗೆಯ ಲಲನೆಯರ ಕಷ್ಟ ಅರ್ಥಮಾಡಿಕೊಂಡ ಕಲರ್ಸ್ ವಾಹಿನಿಯ ಟಿಆರ್ಪಿ ಗಮನದಲ್ಲಿಟ್ಟುಕೊಂಡು ಸ್ವಾಮಿಯನ್ನು ವಾಪಾಸ್ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.
ರಿಯಾಲಿಟಿ ಶೋಗಳಲ್ಲಿ ಭಾಗಹಿಸಿದ್ದರಿಂದ ತಮ್ಮ ಗೌರವ, ಘನತೆಗಳೇನು ಕಡಿಮೆಯಾಗಲ್ಲ. ಆರಂಭದಲ್ಲಿ ಶೇ.90ರಷ್ಟು ಮಂದಿ ಈ ಶೋನಲ್ಲಿ ಭಾಗವಹಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಕೆಲವೊಂದು ಸಂಚಿಕೆಗಳನ್ನು ನೋಡಿದ ಮೇಲೆ ಭಾಗವಹಿಸಲೇಬೇಕು ಎಂದು ತೀರ್ಮಾನಿಸಿದೆ ಎಂದು ಅಗ್ನಿವೇಷ್ ಹೇಳಿದ್ದಾರೆ.


Click it and Unblock the Notifications











