Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬದುಕು ಜಟಕಾ ಬಂಡಿ ಕಟಕಟೆಯಲ್ಲಿ ನಟಿ ರಂಜಿತಾ
ಕನ್ನಡಿಗರ ಕಣ್ಮಣಿ ಜೀ ಕನ್ನಡದಲ್ಲಿ ಇತ್ತೀಗಷ್ಟೇ ಪ್ರಾರಂಭಗೊಂಡು ಜನಪ್ರಿಯ ಆಗುತ್ತಿರುವ 'ಬದುಕುಜಟಕಾ ಬಂಡಿ' ಕಾರ್ಯಕ್ರಮದಲ್ಲಿ ಖ್ಯಾತ ತಮಿಳು ನಟಿ ರಂಜಿತಾ ಕಾಣಿಸಿಕೊಳ್ಳಲಿದ್ದಾರೆ. ನಿತ್ಯಾನಂದಸ್ವಾಮಿ ಜತೆಗಿನ ರಾಸಲೀಲೆಯ ಪ್ರಮುಖ ಪಾತ್ರದಾರಿ ಎಂದೇ ಬಿಂಬಿತವಾಗಿರುವ ರಂಜಿತಾ ಇದುವರೆಗೂ ಕಣ್ಮರೆಯಾಗಿದ್ದು ಇತ್ತೀಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಜೀ ಕನ್ನಡ ಅವರನ್ನು 'ಬದುಕು ಜಟಕಾ ಬಂಡಿ' ಕಾರ್ಯಕ್ರಮಕ್ಕೆ ಕರೆತಂದು ರಾಸಲೀಸೆ ಪ್ರಕರಣದ ಬಗ್ಗೆ ಮಾತನಾಡಿಸಿದೆ. ರಂಜಿತಾ ನಿತ್ಯಾನಂದ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂಬ ಆರೋಪ ಎದುರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ರಂಜಿತ ತನ್ನ ಇಡೀ ಕಥಾನಕವನ್ನು 'ಬದುಕು ಜಟಕಾಬಂಡಿ' ಕಾರ್ಯಕ್ರಮದಲ್ಲಿ ತೆರೆದಿಟ್ಟಿದ್ದಾಳೆ.
ತನ್ನ ಮೇಲಿರುವ ರಾಸಲೀಲೆಯ ಆರೋಪ ಸತ್ಯಕ್ಕೆ ದೂರವಾದ್ದುದ್ದು ಎಂದೇ ವಾದಿಸುತ್ತಿರುವ ಆಕೆ ತನ್ನ ಮೇಲಿನ ಆರೋಪಕ್ಕೆ ಕಣ್ಣೀರಿನಧಾರೆ ಹರಿಸಿದ ಘಟನೆ 'ಬದುಕು ಜಟಕಾಬಂಡಿ'ಯಲ್ಲಿ ನಡೆಯಿತು. ರಂಜಿತಾ ಪಾಲ್ಗೊಂಡ ಸಂಚಿಕೆಯಲ್ಲಿ ಮಾಜಿ ಲೋಕಸಭಾ ಸದಸ್ಯೆ ತೇಜಸ್ವಿನಿ ರಮೇಶ್, ನಟಿ ಸುಧಾ ಬೆಳವಾಡಿ ಹಾಗೂ ಬಿ.ಯು. ಗೀತಾ ಪಾಲ್ಗೊಂಡು ರಂಜಿತಾ ಮೇಲಿರುವ ಆರೋಪದ ಕುರಿತು ಸತ್ಯಾಂಶವನ್ನು ಹೊರಗೆಳೆಯುವ ಪ್ರಯತ್ನ ಮಾಡಿದ್ದಾರೆ.
ಬದುಕು ಜಟಕಾಬಂಡಿಯ ನಿರೂಪಕಿ ಮಾಳವಿಕಾ ಕೂಡಾ ನಿತ್ಯಾನಂದಸ್ವಾಮಿಯ ಅನುಯಾಯಿಯಾಗಿದ್ದು ಚರ್ಚೆ ಮತ್ತಷ್ಟು ರೋಚಕವಾಗಿದೆ. ಅಷ್ಟಕ್ಕೂ ನಿತ್ಯಾನಂದ ಹಾಗೂ ರಂಜಿತಾ ನಡುವೆ ಇರುವಂತಹ ಸಂಬಂಧವಾದರೂ ಏನು ಎಂಬುದು ಜೀ ಕನ್ನಡದಲ್ಲಿ ಅನಾವರಣಗೊಳ್ಳಲಿದೆ. ರಂಜಿತಾ ಭಾಗವಹಿಸಿದ ಬದುಕು ಜಟಕಾಬಂಡಿ ಸಂಚಿಕೆ ಜನವರಿ 17ರ ಸೋಮವಾರ ಮಧ್ಯಾಹ್ನ 2.30ಗಂಟೆಗೆ ಪ್ರಸಾರವಾಗಲಿದೆ. [ರಾಸಲೀಲೆ]