Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡ ಜೋಗುಳಕ್ಕೆನೂರರ ಸಂಭ್ರಮ
ಹಳೇಬೀಡಿನ ಹುಡುಗಿ ದೇವಕಿ ಕಾಲ್ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಾ ಬೆಂಗಳೂರಿನಲ್ಲಿ ಅಣ್ಣನ ಮನೆಯಲ್ಲಿರುತ್ತಾಳೆ. ಸ್ನೇಹಿತ-ಪ್ರಿಯಕರ ವಾಸುವಿನ ಅಮೆರಿಕಾ ಕನಸನ್ನು ನನಸು ಮಾಡಲು ಹಣಕ್ಕಾಗಿ ದೇವಕಿ ಬಾಡಿಗೆ ತಾಯಿಗಾಗಿ ಹುಡುಕುತ್ತಿರುವ ರಘು-ಯಶೋಧಾರ ಮಗುವಿಗೆ ತಾಯಿಯಾಗಲು ಒಪ್ಪಿಕೊಳ್ಳುತ್ತಾಳೆ. ಮೊದಲು ಮುಂಬೈಲ್ಲಿ ಕೆಲಸ ಸಿಕ್ಕಿದೆ ಎಂದು ಸುಳ್ಳು ಹೇಳಿ ಎಲ್ಲರನ್ನೂ ನಂಬಿಸಿ ದೇವಕಿ ಮನೆಗೆ ಬರುವ ಯಶೋಧಾ ನಂತರ ಒಂದರ ಮೇಲೊಂದು ಸುಳ್ಳನ್ನು ಹೆಣೆಯುತ್ತಾ ಅದರಲ್ಲಿ ಸಿಕ್ಕು ನರಳಬೇಕಾಗುತ್ತದೆ.
ದೇವಕಿ ಪಾತ್ರದಲ್ಲಿ ಜ್ಯೋತಿ ರೈ, ಯಶೋಧಾ ಪಾತ್ರದಲ್ಲಿ ನಂದಿನಿ ಆರ್ಯನ್ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಹೊರದೇಶಗಳಲ್ಲಿ ಬಾಡಿಗೆ ತಾಯಿ ಪ್ರಕರಣಗಳು ಸಾಕಷ್ಟು ಕೇಳಿ ಬರುತ್ತಿದೆ. ನಮ್ಮ ದೇಶದಲ್ಲೂ ಕೂಡ ಅಂತಹ ಪ್ರಕರಣಗಳು ಸಾಕಷ್ಟು ನಡೆಯುತ್ತಿವೆ. ವಿಜ್ಞಾನದ ದೃಷ್ಟಿಯಲ್ಲಿ ಬಾಡಿಗೆತಾಯಿಯಾಗುವುದು ಒಂದು ಸರಳ ಪ್ರಕ್ರಿಯೆ. ಹಾಗೆಯೇ ಮಗು ಬೇಕಾದವರಿಗೆ ಅದೊಂದು ವ್ಯವಹಾರ-ಕಾಂಟ್ರ್ಯಾಕ್ಟ್ ಅಷ್ಟೆ. ಆದರೆ ಇನ್ನೊಬ್ಬರ ಮಗುವನ್ನು ಒಂಬತ್ತು ತಿಂಗಳು ಹೊತ್ತು ಹೆತ್ತು ಕೊಡುವ ಮಹಿಳೆಯ ಮಾನಸಿಕ ಸ್ಥಿತಿಯನ್ನು ತೆರೆದಿಡುವಲ್ಲಿ ಜೋಗುಳ ಯಶಸ್ವಿಯಾಗಿದೆ.
ಕಿರುತೆರೆ ಧಾರಾವಹಿಗಳ ಮಟ್ಟಿಗೆ ಹೊಸ ಭಾಷ್ಯ ಬರೆದ ಧಾರಾವಾಹಿ ಜೋಗುಳ, ಎಲ್ಲ ರೀತಿಯಿಂದಲೂ ಉಳಿದ ಧಾರಾವಾಹಿಗಳಿಗಿಂತ ಭಿನ್ನ. ವಿನುಬಳಂಜ ಅವರ ಉತ್ತಮ ನಿರ್ದೇಶನ, ಎ.ಎನ್ ಪ್ರಭಾಕರ್ ಮತ್ತು ಮಂಜು ಮಂಡ್ಯ ಅವರ ಉತ್ತಮ ಛಾಯಾಗ್ರಹಣ, ಹಾಗೂ ಉತ್ತಮ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದೆ. ಜೋಗುಳ ಈ ಎಲ್ಲಾ ಕಾರಣಗಳಿಂದ ಜನರ ಮೆಚ್ಚುಗೆ ಗಳಿಸಿದೆ ಎಂದು ಜೀ ಕನ್ನಡ ಮುಖ್ಯಸ್ಥ ಶೇಖರ್.ಜೆ ಹೇಳಿದ್ದಾರೆ.
ಜೋಗುಳ ತಾರಾಗಣದಲ್ಲಿ ಖ್ಯಾತ ಕಿರುತೆರೆ ನಟಿ ಅಪರ್ಣಾ, ನಂದಿನಿ ಆರ್ಯನ್, ಜ್ಯೋತಿ ರೈ, ಮಂಜುನಾಥ್ ಹೆಗಡೆ, ಸುರೇಶ್ ರೈ, ಹಿರಣ್ಣಯ್ಯ ಹಾರ್ನಳ್ಳಿ, ಸುರೇಶ್ ಮಂಗಳೂರು, ಸುಂದರಶ್ರೀ, ಸಿದ್ಧರಾಜ್ ಕಲ್ಯಾಣ್ಕರ್, ಮಧು ಹೆಗಡೆ, ಗ್ರೀಷ್ಮಾ, ನಿಷಿತಾ ಗೌಡ್, ಶಾಂತಲಾ ಕಾಮತ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸನ್
ನೆಟ್ವರ್ಕ್
ನಿಂದ
ಮತ್ತೊಂದು
ಚಾನೆಲ್
ಸನ್
ನೆಟ್
ವರ್ಕ್
ನಿಂದ
ಮತ್ತೊಂದು
ಕನ್ನಡ
ಟಿವಿ
'ಡಾ.ರಾಜ್
ಜೀವನಧಾರೆ'
ಡಿವಿಡಿ
ಬಿಡುಗಡೆ
ಸೂರ್ಯಕಾಂತಿ,
ಕಾಲ್ಪನಿಕ
ಪ್ರೇಮಕಥಾ
ಚಿತ್ರ